ನವದೆಹಲಿ: ಭಾರತದ ಮೊದಲ ನೈಸರ್ಗಿಕ ಅನಿಲ ವಿನಿಮಯ ಕೇಂದ್ರಕ್ಕೆ ಸೋಮವಾರ ಚಾಲನೆ ಸಿಕ್ಕಿದೆ. ಪಾರದರ್ಶಕ ಬೆಲೆ ನಿಗದಿ ಹಾಗೂ ಭಾರತದಲ್ಲಿ ನೈಸರ್ಗಿಕ ಅನಿಲ ಬಳಕೆಯ ಪ್ರಮಾಣ ಹೆಚ್ಚಿಸುವಲ್ಲಿ ಇದು ಸಹಕಾರಿಯಾಗಲಿದೆ ಎಂದು ನಂಬಲಾಗಿದೆ.
ಏನಿದು ಅನಿಲ ವಿನಿಮಯ ಕೇಂದ್ರ?: ಸಾಮಾನ್ಯವಾಗಿ ಷೇರು ವಿನಿಮಯ, ಸರಕು ವಿನಿಮಯ (ಕಮಾಡಿಟಿ ಎಕ್ಸ್ಚೇಂಜ್) ಕೇಂದ್ರಗಳ ಬಗ್ಗೆ ಕೇಳಿರುತ್ತೇವೆ. ಅದೇ ರೀತಿ ಇಂಡಿಯನ್ ಗ್ಯಾಸ್ ಎಕ್ಸ್ಚೇಂಜ್ (ಐಜಿಎಕ್ಸ್) ಆರಂಭವಾಗಿದೆ. ಸ್ಟಾಕ್ ಎಕ್ಸ್ಚೇಂಜ್ನಂತೆ ಇದು ಕೂಡ ಡಿಜಿಟಲ್ ವೇದಿಕೆಯಾಗಿದೆ. ಷೇರುಗಳಂತೆ ಇಲ್ಲಿ ನೈಸರ್ಗಿಕ ಅನಿಲವನ್ನು ಖರೀದಿಸಬಹುದು ಹಾಗೂ ಮಾರಾಟ ಮಾಡಬಹುದು.
ಇದನ್ನೂ ಓದಿ; ಸುಶಾಂತ್ ಸಿಂಗ್ನದ್ದು ಆತ್ಮಹತ್ಯೆಯಲ್ಲ, ಕೊಲೆ; ನಟನ ಚಿಕ್ಕಪ್ಪನಿಗೆ ಅನುಮಾನ; ತನಿಖೆಗೆ ಒತ್ತಾಯ
ಗುಜರಾತ್ನ ದಹೇಜ್ ಹಾಗೂ ಹಾಜಿರಾ ಮತ್ತು ಆಂಧ್ರಪ್ರದೇಶದ ಕಾಕಿನಾಡದ ನೈಸರ್ಗಿಕ ಅನಿಲ ಕೇಂದ್ರಗಳಲ್ಲಿ ಗ್ರಾಹಕರು ವಹಿವಾಟು ನಡೆಸಬಹುದು. ಸ್ಥಳದಲ್ಲೇ ಖರೀದಿ ಹಾಗೂ ಮುಂಗಡ ಕಾದಿರಿಸುವಿಕೆಗೂ ಇಲ್ಲಿ ಅವಕಾಶ ಇರಲಿದೆ.
ಗ್ಯಾಸ್ ಎಕ್ಸ್ಚೇಂಜ್ ಆರಂಭದಿಂದಾಗಿ ಖರೀದಿದಾರರು ಹಲವು ಏಜೆಂಟ್ ಅಥವಾ ಪೂರೈಕೆದಾರರನ್ನು ಸಂಪರ್ಕಿಸುವ ಅಗತ್ಯವಿರುವುದಿಲ್ಲ. ಇಲ್ಲಿ ನ್ಯಾಯಯುತ ಹಾಗೂ ಸ್ಪರ್ಧಾತ್ಮಕ ಬೆಲೆಯಲ್ಲಿ ಅವರಿಗೆ ನೈಸರ್ಗಿಕ ಅನಿಲ ಖರೀದಿ ಸಾಧ್ಯವಾಗಲಿದೆ ಎಂದು ಐಜಿಎಕ್ಸ್ ನಿರ್ದೇಶಕ ರಾಜೇಶ್ಕುಮಾರ್ ಮೆದಿರತ್ತಾ ಹೇಳಿದ್ದಾರೆ.
ಇದನ್ನೂ ಓದಿ; ನಟ ಸುಶಾಂತ್ ಸಿಂಗ್ನ ವೈದ್ಯರನ್ನು ಹುಡುಕುತ್ತಿದ್ದಾರೆ ಪೊಲೀಸರು; ಕೊನೆಯ ಕರೆ ಮಾಡಿದ್ಯಾರಿಗೆ?
ಸದ್ಯ ಈ ಕೇಂದ್ರ ಆಮದು ನೈಸರ್ಗಿಕ ಅನಿಲ ಮಾತ್ರ ವಹಿವಾಟಿಗೆ ಮುಕ್ತವಾಗಿದೆ. ದೇಶೀಯವಾಗಿ ಉತ್ಪಾದಿಸಲಾಗುವ ಅನಿಲದ ಬೆಲೆಯನ್ನು ಸದ್ಯ ಸರ್ಕಾರವೇ ನಿಗದಿಪಡಿಸುತ್ತದೆ. ಮುಂದಿನ ದಿನಗಳಲ್ಲಿ ವಹಿವಾಟಿಗೆ ಅಗತ್ಯ ನೀತಿಯನ್ನು ರೂಪಿಸಲಿದೆ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಸರ್ಕಾರಿ ಜಾಹೀರಾತಿನಲ್ಲಿ ನೀಲಿಚಿತ್ರ ತಾರೆ; ನೆಟ್ಟಿಗರಿಂದಲೂ ಮೆಚ್ಚುಗೆ…!