ನವದೆಹಲಿ: ಲಾಕ್ಡೌನ್ ಅವಧಿಯಲ್ಲಿ ಭಾರತೀಯ ರೈಲ್ವೆ ರಾಜಧಾನಿ ಮಾದರಿಯ ವಿಶೇಷ ರೈಲುಗಳು ಮತ್ತು ಶ್ರಮಿಕ್ ಸ್ಪೆಶಲ್ ರೈಲುಗಳ ಸಂಚಾರ ಮಾತ್ರ ಏರ್ಪಡಿಸುತ್ತಿದೆ. ರಾಜಧಾನಿ ಮಾದರಿಯ ವಿಶೇಷ ರೈಲುಗಳಲ್ಲಿ ಇ-ಟಿಕೆಟ್ ಮೂಲಕವೇ ಪ್ರಯಾಣಿಸುವುದು ಕಡ್ಡಾಯವಾಗಿದೆ.
ಇ-ಟಿಕೆಟ್ ಬುಕ್ಕಿಂಗ್ನಲ್ಲಿ ಐಆರ್ಸಿಟಿಸಿ ಈಗ ಹೊಸ ಸೌಲಭ್ಯ ಸೃಷ್ಟಿಸಿದೆ. ಅಂದರೆ, ಪ್ರಯಾಣಿಕರು ತಾವು ತಲುಪಲಿರುವ ಗಮ್ಯದಲ್ಲಿನ ಕ್ವಾರಂಟೈನ್ ನಿಯಮದ ಅರಿವು ಹೊಂದಿರುವುದು ಕಡ್ಡಾಯವಾಗಿದೆ. ಈ ಸಂಗತಿ ಗೊತ್ತು ಎಂದು ನಮೂದಿಸಿದಲ್ಲಿ ಮಾತ್ರವೇ ಟಿಕೆಟ್ ಬುಕ್ಕಿಂಗ್ಗೆ ಅವಕಾಶ ದೊರೆಯಲಿದೆ.
ಇದನ್ನೂ ಓದಿ: ಜೂನ್ ಮೊದಲ ವಾರದಲ್ಲಿ ಉನ್ನತ ಶಿಕ್ಷಣ ಪರೀಕ್ಷೆ ಕುರಿತ ನಿರ್ಧಾರ ಪ್ರಕಟ: ಡಾ. ಅಶ್ವತ್ಥನಾರಾಯಣ
ಕೆಲದಿನಗಳ ಹಿಂದೆ ದೆಹಲಿಯಿಂದ ಬೆಂಗಳೂರು ತಲುಪಿದ್ದ ರೈಲಿನ 20ಕ್ಕೂ ಹೆಚ್ಚು ಪ್ರಯಾಣಿಕರು ಕರ್ನಾಟಕದಲ್ಲಿನ ಕ್ವಾರಂಟೈನ್ ನಿಯಮದ ಪ್ರಕಾರ ಹಣಕೊಟ್ಟು ಸಾಂಸ್ಥಿಕ ಕ್ವಾರಂಟೈನ್ನಲ್ಲಿ ಇರಲು ನಿರಾಕರಿಸಿ ಪ್ರತಿಭಟನೆ ನಡೆಸಿದ್ದರು. ಬಳಿಕ ಅವರೆಲ್ಲರನ್ನೂ ಮತ್ತೊಂದು ರೈಲಿನಲ್ಲಿ ಹೆಚ್ಚುವರಿ ಬೋಗಿ ಅಳವಡಿಸಿ ನವದೆಹಲಿಗೆ ವಾಪಸು ಕಳುಹಿಸಲಾಗಿತ್ತು.
ಇದರ ಪರಿಣಾಮವೇ ಕ್ವಾರಂಟೈನ್ ನಿಯಮ ಗೊತ್ತಿರುವ ಬಗ್ಗೆ ಪ್ರಯಾಣಿಕರು ಮಾಹಿತಿ ಒದಗಿಸುವ ಸೌಲಭ್ಯವನ್ನು ಐಆರ್ಸಿಟಿಸಿ ತನ್ನ ಆ್ಯಪ್ನಲ್ಲಿ ಸೃಷ್ಟಿಸಿದೆ. ಟಿಕೆಟ್ ಮುಂಗಡ ಕಾಯ್ದಿರಿಸುವಾಗ ಕ್ವಾರಂಟೈನ್ ನಿಯಮ ಗೊತ್ತೆಂದು ಪ್ರಯಾಣಿಕರು ನಮೂದಿಸಲೇ ಬೇಕಾಗುತ್ತದೆ. ಅಲ್ಲದೆ, ತಾವು ತಲುಪಬೇಕಿರುವ ಗಮ್ಯವನ್ನು ತಲುಪಿದ ಬಳಿಕ ಕ್ವಾರಂಟೈನ್ ನಿಯಮ ಪಾಲಿಸಲು ನಿರಾಕರಿಸಿದರೆ ಸೂಕ್ತ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.
ಸುಖಮಯ ವೈವಾಹಿಕ ಜೀವನಕ್ಕೆ ನಟ ರಿತೇಶ್ ದೇಶ್ಮುಖ್ ಕೊಟ್ಟಿರುವ ಸಲಹೆ ಇದು