ಬಾಗಲಕೋಟೆ: ಲೋಕಸಭಾ ಚುನಾವಣೆ 2024ರ ಕಾಂಗ್ರೆಸ್ ಟಿಕೆಟ್ ಕೈತಪ್ಪುತ್ತಿದ್ದಂತೆ ತೀವ್ರ ಅಸಮಾಧಾನ ಹೊರಹಾಕಿದ ಬಾಗಲಕೋಟೆ ಕ್ಷೇತ್ರದ ಆಕಾಂಕ್ಷಿ ಶಾಸಕ ವಿಜಯಾನಂದ ಕಾಶಪ್ಪನವರ್ ಪತ್ನಿ ವೀಣಾ ಕಾಶಪ್ಪನವರ್, ಇದೀಗ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಎಲ್ಲಾ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮಾತನಾಡಿರುವ ವೀಣಾ, ಏನೇ ಆದ್ರೂ ಚುನಾವಣಾ ಕಣದಲ್ಲಿ ಇರುವುದಂತೂ ಪಕ್ಕಾ ಎಂದು ಘಂಟಾಘೋಷವಾಗಿ ಹೇಳಿದ್ದಾರೆ.
ಇದನ್ನೂ ಓದಿ: ಬರಗಾಲದ ಮಧ್ಯೆ ಕುಡಿಯುವ ನೀರಿನಿಂದ ಕಾರು ತೊಳೆದ 22 ಮಂದಿಗೆ ಬಿತ್ತು ಭಾರೀ ದಂಡ! ಸಂಗ್ರಹ ಹಣವೆಷ್ಟು?
ಬಾಗಲಕೋಟೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಹಿನ್ನಲೆ ಜಿಲ್ಲೆಯ ಕಾಂಗ್ರೆಸ್ ಶಾಸಕರನ್ನು ಹೊರಗಿಟ್ಟು ಚುನಾವಣೆ ಮಾಡುವುದು ನನಗೆ ಗೊತ್ತಿದೆ ಎಂದ ವೀಣಾ, ಯಾವುದಕ್ಕೂ ಕುಗ್ಗಬೇಡಿ, ನಿಮ್ಮ ಜತೆ ಸಮಾಜ ಇರುತ್ತೆ ಎಂದು ಸಮಾಜದ ಮುಖಂಡರು ತಿಳಿಸಿದ್ದಾರೆ. “ಅನ್ಯ ಸಮಾಜದವರು ಹಾಗೂ ರಾಜ್ಯಾದ್ಯಂತ ವಿಶೇಷವಾಗಿ ಮಹಿಳೆಯರು ಕರೆ ಮಾಡುತ್ತಿದ್ದಾರೆ. ನಿಮಗೆ ಟಿಕೆಟ್ ಸಿಗಬೇಕಾಗಿತ್ತು ಎಂದು ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ” ಎಂದು ಹೇಳಿದರು.
“28ರಂದು ಸಭೆ ಕರೆದಿದ್ದಾರೆ. ಆಗಲಿ ಏನು ಆಗುತ್ತೆ ನೋಡೋಣ. ನಾನಂತೂ ಚುನಾವಣೆ ಕಣದಲ್ಲಿ ಇರುವುದಂತೂ ಪಕ್ಕಾ. ಹಿಂದೆ ಸರಿಯುವ ಮಾತೆ ಇಲ್ಲ. ನನಗೆ ಸೂಕ್ತವಾದ ನ್ಯಾಯ ಕೊಟ್ಟರೆ ಸುಮ್ಮನಿರುವೆ. ಟಿಕೆಟ್ ಕೊಡುವುದೇ ನನಗೆ ಅನ್ಯಾಯ ಸರಿಪಡಿಸೋದು” ಎಂದು ವೀಣಾ ಗುಡುಗಿದ್ದಾರೆ.
ನನಗೆ ಸಾಕಾಗಿದೆ, 1 ಗಂಟೆಗೆ 5 ಲಕ್ಷ ರೂ. ಕೊಡಿ, ಬನ್ನಿ… ವೈರಲ್ ಆಗ್ತಿದೆ ಈ ನಿರ್ದೇಶಕನ ಹೇಳಿಕೆ!