ಬೆಂಗಳೂರು: ಮೊನ್ನೆ ಬೆಳಗ್ಗಿನ ಜಾವ ಆರಂಭವಾದ ಹಮಾಸ್ ಉಗ್ರರ ರಣಭೀಕರ ದಾಳಿಯಿಂದ ರಣರಂಗವಾಗಿರುವ ಇಸ್ರೇಲ್ನಲ್ಲಿ ಪರಿಸ್ಥಿತಿ ಭಯಂಕರವಾಗಿದೆ. ಎಲ್ಲೆಂದರಲ್ಲಿ ಅಲ್ಲಿ ಸೈರನ್ ಮೊಳಗುತ್ತಿದ್ದು, ಗುಂಡಿನ ಸದ್ದು ಆರ್ಭಟಿಸುತ್ತಿದ್ದು, ಯಾವ ಕ್ಷಣದಲ್ಲಿ ಏನು ಬೇಕಾದರೂ ಆದೀತು ಎಂಬಂಥ ಆತಂಕಕಾರಿ ಪರಿಸ್ಥಿತಿ ಇದೆ.
ಇಂಥದ್ದರ ನಡುವೆಯೇ ಇಸ್ರೇಲಿ ವ್ಯಕ್ತಿಯೊಬ್ಬ ‘ಇಂಡಿಯಾ’ಗೇ ಗುಡ್ಬೈ ಹೇಳಿ ಡಿಜಿಟಲ್ ಯುದ್ಧಕ್ಕೆ ಇಳಿದಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಹೀಗೊಂದು ಗುಡ್ಬೈ ಹೇಳಿಯೇ ಮನೆ ಬಿಟ್ಟಿರುವ ಈ ವ್ಯಕ್ತಿಯ ಹೆಸರು ಹನನ್ಯ ನಫ್ತಾಲಿ. ಅಂದಹಾಗೆ, ಈತ ಗುಡ್ಬೈ ಹೇಳಿರುವುದು ಪತ್ನಿಗೆ, ಆಕೆಯ ಹೆಸರು ಇಂಡಿಯಾ ನಫ್ತಾಲಿ. ವೃತ್ತಿಯಲ್ಲಿ ಇಬ್ಬರೂ ಪತ್ರಕರ್ತರು.
ಇದನ್ನೂ ಓದಿ: ಜ್ವರ ಯಾವುದರಿಂದ ಬಂತು ಅಂತ ನಿಖರವಾಗಿ ತಿಳಿಸುತ್ತೆ ಈ ಉಪಕರಣ!; ಕನ್ನಡಿಗ ವಿಜ್ಞಾನಿಯ ಆವಿಷ್ಕಾರ
ನಾನು ನನ್ನ ದೇಶದ ಸೇವೆಗೆ, ರಕ್ಷಣೆಗೆ ಮುಂದಾಗಿದ್ದೇನೆ. ನಾನು ನನ್ನ ಪತ್ನಿ ಇಂಡಿಯಾಗೆ ಗುಡ್ಬೈ ಹೇಳಿಯಾಗಿದೆ. ಆಕೆ ತನ್ನ ಆಶೀರ್ವಾದ ಹಾಗೂ ದೇವರ ರಕ್ಷಣೆಯೊಂದಿಗೆ ನನ್ನನ್ನು ಕಳಿಸಿಕೊಟ್ಟಿದ್ದಾಳೆ. ಇನ್ನು ಮುಂದೆ ಆಕೆಯೇ ನನ್ನ ಪರವಾಗಿ ಈ ಖಾತೆ ನಿರ್ವಹಿಸುತ್ತಿರುತ್ತಾಳೆ, ಅವಳೊಂದಿಗೆ ಮೃದುವಾಗಿ ವರ್ತಿಸಿ ಎಂದು ಆತ ತನ್ನ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.
I am drafted as well to serve and defend my country Israel. 🇮🇱
I said goodbye to my wife India, who sent me with blessings and protection of God. From now on she will be managing and posting on my behalf so be nice to her. 😉🇮🇱😊 @indianaftali pic.twitter.com/K8O56kAQH7
— Hananya Naftali (@HananyaNaftali) October 9, 2023
ಹೀಗೆ ಹೆಂಡತಿಗೆ ಗುಡ್ಬೈ ಹೇಳಿಯೇ ಮನೆಯಿಂದ ಹೊರಬಂದಿರುವ ಈ ಪತ್ರಕರ್ತ, ಆ ನಂತರ ತನ್ನ ವರದಿಗಾರಿಕೆ ಕುರಿತಂತೆ ಹೇಳಿಕೊಂಡಿರುವುದು ಕೂಡ ಆ ಖಾತೆಯಿಂದ ಪೋಸ್ಟ್ ಆಗಿದೆ. ಕಳೆದ 48 ಗಂಟೆಗಳಲ್ಲಿ ನಾನು ಇಸ್ರೇಲ್ನಲ್ಲಿನ ಘಟನಗೆಳ ಕುರಿತ ಸತ್ಯ ತಿಳಿಸಲು 8 ಟಿವಿ ಸಂದರ್ಶನ ನಡೆಸಿದ್ದೇನೆ. ಸುಳ್ಳುಗಳು ಕಾಳ್ಗಿಚ್ಚಿನಂತೆ ಹರುಡುತ್ತಿರುವಾಗ ಸತ್ಯ ತಿಳಿಸುವಂಥ ಈ ಡಿಜಿಟಲ್ ಯುದ್ಧ ಕೂಡ ಅಷ್ಟೇ ಮುಖ್ಯ ಎಂದು ಹನನ್ಯಾ ಹೇಳಿಕೊಂಡಿದ್ದಾರೆ.
In the last 48 hours I managed to do 8 TV interviews and tell the truth of Israel.
I think the digital battle is super important as well, as fake news and lies are spreading like wildfire.
I said in my interviews that you can see very clearly that Hamas is targeting civilians,… pic.twitter.com/cgYjZCuumM
— Hananya Naftali (@HananyaNaftali) October 9, 2023
ಇಸ್ರೇಲಿಗೆ ನುಸುಳಿರುವ ಹಮಾಸ್ ಉಗ್ರರು ಮನೆಗಳಿಗೇ ನುಗ್ಗಿ ನಾಗರಿಕರನ್ನು ಸಾಯಿಸುತ್ತಿದ್ದಾರೆ. ಕಣ್ಣಿಗೆ ಕಾಣಿಸಿದವರನ್ನೆಲ್ಲ ಕೊಲ್ಲುತ್ತಿದ್ದಾರೆ. ಮತ್ತೊಂದು ಕಡೆಯಿಂದ ಇಸ್ರೇಲ್ ಉಗ್ರರನ್ನು ಗುರಿಯಾಗಿಸಿ ಅವರನ್ನು ಸದೆಬಡಿಯುವ ಕೆಲಸ ಮಾಡುತ್ತಿದೆ ಎಂದೂ ಆತ ಹೇಳಿಕೊಂಡಿದ್ದಾರೆ.
ಖಿನ್ನತೆ ತಲೆಯ ಸಮಸ್ಯೆ, ಅದಾಗ್ಯೂ ಪರಿಹಾರ ಕಾಲುಗಳಲ್ಲಿದೆ!; ಅಧ್ಯಯನದಲ್ಲಿ ಬಹಿರಂಗ
ಶಾಲಾ ಸಮಯ ಬದಲಾವಣೆ ಕುರಿತಂತೆ ಇಂದು ಮಹತ್ವದ ಬೆಳವಣಿಗೆ; ಇಂದೇನಾಯ್ತು? ನಾಳೆ ಏನಾಗಬಹುದು?