More

    ‘ಅಂಬರೀಶ್ ಫ್ಯಾಮಿಲಿಗಾಗಿ ಪ್ರಾಣ ಕೊಡೋಕೂ ಸಿದ್ಧ, ನನ್ನ ಹೆದರಿಸೋಕೆ ನಿಮ್ಮಿಂದಾಗಲ್ಲ’

    ಬೆಂಗಳೂರು: ಸುಮಲತಾ ಅಂಬರೀಶ್ ಬೆನ್ನಿಗೆ ನಿಂತಿರುವ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಮನೆ ಮೇಲೆ ಭಾನುವಾರ ತಡ ರಾತ್ರಿ ಮದ್ಯದ ಬಾಟಲ್​ ಮತ್ತು ಕಲ್ಲುಗಳನ್ನು ಎಸೆದು ದಾಳಿ ನಡೆಸಲಾಗಿದೆ. ಈ ವಿಚಾರವಾಗಿ ವೆಂಕಟೇಶ್ ಪ್ರತಿಕ್ರಿಯೆ ನೀಡಿದ್ದು, ಈ ರೀತಿ ಮಾಡಿ ನನ್ನನ್ನು ಹೆದರಿಸಲು ನಿಮ್ಮಿಂದ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

    ಇಂತಹ ಟೈಮಲ್ಲಿ ನನ್ನ ಹೆದುರಿಸಬೇಕು ಅಂದುಕೊಂಡರೆ ಅದು ಆಗಲ್ಲ. ಯಾರೋ ದುಷ್ಕರ್ಮಿಗಳು ಬಂದು ನಮ್ಮನೆಗೆ ಕಲ್ಲು ಎಸೆದಿದ್ದಾರೆ. ಏನೆ ಆದರೂ ನಾನು ಅಂಬರೀಶ್ ಕುಟುಂಬಕ್ಕೆ ಸಪೋರ್ಟ್ ಮಾಡ್ತೀನಿ. ಈ ರೀತಿ ಗಲಾಟೆಗಳನ್ನ ಮಾಡಿಸಿ ನನ್ನ ಹೆದುರಿಸ್ತೀನಿ ಅಂದುಕೊಂಡರೆ ಅದು ಸಾಧ್ಯವಿಲ್ಲ. ಅಂಬರೀಶ್ ಕುಟುಂಬದ ಹಿಂದೆ ನಾನು ಯಾವಾಗ್ಲೂ‌ ಇರ್ತೇನೆ. ಅಂಬರೀಶ್ ಕುಟುಂಬಕ್ಕಾಗಿ ಎಲ್ಲಾ ತ್ಯಾಗ ಮಡೋಕು ಸಿದ್ಧ. ಅವರ ಫ್ಯಾಮಿಲಿಗಾಗಿ ನನ್ನ ಪ್ರಾಣ ಕೊಡೋಕು ಸಿದ್ಧ. ಹಾಗಂತ ನಾನು ಹೆದರಿಕೊಂಡು ಹಿಂಜರಿಯಲ್ಲ. ನನಗೆ ಅಂಬರೀಶ್ ಕುಟುಂಬದ ಜತೆ ಒಳ್ಳೆ ಸ್ನೇಹ ಇದೆ. ಇಲ್ಲೀಗಲ್ ಮೈನಿಂಗ್ ವಿಷಯಕ್ಕೆ ಸುಮಲತಾ ಅವರು ಧ್ವನಿ ಎತ್ತಿದ್ದಾರೆ. ರಾಜಕೀಯವಾಗಿ ನಾನು ಮಾತನಾಡೋಕೆ ಹೋಗಲ್ಲ. ಮಂಡ್ಯಕ್ಕೆ ನಾನು ಬರಬಾರದು ಅಂತ ಹೇಳೋಕೆ ಯಾರಿಗೂ ಹಕ್ಕಿಲ್ಲ. ನಾನು ಸುಮಲತಾ ಬೆನ್ನಿಗೆ ಸದಾ ನಿಂತಿರ್ತೀನಿ ಎಂದು ಹೇಳಿದ್ದಾರೆ.

    ಸುಮಲತಾ ಅವರ ಜತೆ ತಾವು ತೆಗೆಸಿಕೊಂಡಿದ್ದ ಫೋಟೋವೊಂದು ವೈರಲ್ ಆಗುತ್ತಿರುವ ವಿಚಾರವಾಗಿ ಮಾತನಾಡಿದ ಅವರು, “ಈತರ ಜತೆಗಿರೋ ಫೋಟೋ ಸಾವಿರಾರಿದೆ. ಹಾಗಂತ ಅದರ ಬಗ್ಗೆ ಯಾರೂ ತಪ್ಪು ತಿಳಿದುಕೊಳ್ಳಬಾರದು. ಸುಮಲತಾ ಅವರ ಜತೆ ನಾನು ದೆಹಲಿಗೆ ಹೋದಾಗ ಮಂಡ್ಯದವರು ಸೇರಿ ಹಲವರು ನಮ್ಮ ಜತೆ ಬಂದಿದ್ದರು. ಫೋಟೋ ತೆಗೆಸಿಕೊಂಡಾಗ ತುಂಬಾ ಜನ ಅಲ್ಲೇ ಇದ್ದರು. ಸುಮಲತಾ ಅವರ ಜತೆ ಓಡಾಡಿದ ತಕ್ಷಣ ನೀವು ಬೇರೆ ಅರ್ಥ ಮಾಡಿಕೊಳ್ಳಬೇಡಿ. ಅವರು ಫ್ಲೈಟ್ ಹತ್ತುವಾಗ ಕೈ ಹಿಡ್ಕೊಂಡು ಫ್ಲೈಟ್ ಹತ್ತಿಸಿದ್ದೀನಿ. ಹಾಗಂತಾ ಅದೆಲ್ಲಾ ಹಾಕೋಕಾಗುತ್ತಾ? ನಾವು ಚಿತ್ರರಂಗದವರು. ಹಲವರ ಜತೆ ಫೋಟೋ ತೆಗೆಸಿಕೊಳ್ತೀವಿ. ಫೋಟೋವೊಂದರಿಂದ ನಮ್ಮ ಸಂಬಂಧ ಬೇರೆ ಅನ್ನೋತರ ತಿರುಚಬೇಡಿ” ಎಂದು ಹೇಳಿದ್ದಾರೆ.

    ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಮನೆ ಮೇಲೆ ಮದ್ಯದ ಬಾಟಲ್ ಎಸೆದು ದಾಳಿ

    ಬೇಬಿ ವಮಿಕಾ ಜೊತೆ ವಿರುಷ್ಕಾ ದಂಪತಿಯ ಪಿಕ್​ನಿಕ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts