ಫೇಸ್ಬುಕ್ ಫೋಸ್ಟ್ ಮೂಲಕ ಆತಂಕ ಮೂಡಿಸಿದ್ದ ನಟಿ ಜಯಶ್ರೀ ಇದೀಗ ಮತ್ತೊಂದು ಪೋಸ್ಟ್ ಹಾಕಿ ತಾವು ಕ್ಷೇಮವಾಗಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಈ ಮೂಲಕ ಸ್ನೇಹಿತರ ವಲಯದಲ್ಲಿ ಸೃಷ್ಟಿಯಾಗಿದ್ದ ಆತಂಕವನ್ನು ನಿವಾರಣೆ ಮಾಡಿದ್ದಾರೆ.
ಇದನ್ನೂ ಓದಿ: ಅಸಭ್ಯ ಸಂದೇಶಗಳಿಂದ ಬೇಸತ್ತು ಕಿಡಿಗೇಡಿಗಳಿಗೆ ತಕ್ಕ ಪಾಠ ಕಲಿಸಲು ಮುಂದಾದ ನಟಿ ಮಾನಸಿ ಜೋಶಿ
ಹೌದು ತಾವು ಖಿನ್ನತೆಯಿಂದ ಬಳಲುತ್ತಿರುವ ಬಗ್ಗೆ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದ ನಟಿ ಜಯಶ್ರೀ, ‘ನನ್ನಿಂದಾಗದು, ಇಡೀ ಜಗತ್ತಿಗೆ ಮತ್ತು ಖಿನ್ನತೆಗೆ ಗುಡ್ಬೈ’ ಎಂದು ಬರೆದುಕೊಂಡಿದ್ದರು.ಈ ರೀತಿ ಪೋಸ್ಟ್ ಮಾಡುತ್ತಿದ್ದಂತೆ ಸಾಕಷ್ಟು ಮಂದಿ ಸ್ನೇಹಿತರು ಜಯಶ್ರೀ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರು. ಆದರೆ, ಯಾರ ಕರೆಯನ್ನೂ ಅವರು ಸ್ವೀಕರಿಸುತ್ತಿರಲಿಲ್ಲ.
ಇದನ್ನೂ ಓದಿ: ಪತಿಯ ಆಸರೆ ಕಳೆದುಕೊಂಡು ಬೀದಿಗೆ ಬಿದ್ದಿದ್ದ ಮಹಿಳೆಗೆ ಸೂರು ಒದಗಿಸಿದ ಸೋನು ಸೂದ್
ನಟಿ ಅದ್ವಿತಿ ಶೆಟ್ಟಿ, ಆರೋಹಿ ನಾರಾಯಣ್, ನಿರ್ದೇಶಕ ಮಯೂರ ರಾಘವೇಂದ್ರ ಸೇರಿ ಸಾಕಷ್ಟು ಮಂದಿ ಆತುರದ ನಿರ್ಧಾರಕ್ಕೆ ಮುಂದಾಗಬೇಡ ಎಂದು ಕಮೆಂಟ್ ಮೂಲಕ ಮನವಿ ಮಾಡಿ, ಸಮಾಧಾನ ಪಡಿಸಿದ್ದರು. ಕೊನೆಗೂ ಅವರೆಲ್ಲರ ಮಾತಿಗೆ ಮಣಿದು, ಸುರಕ್ಷಿತವಾಗಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಖಿನ್ನತೆಗೆ ಸಂಬಂಧಿಸಿದಂತೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಹೋದರ ಮತ್ತು ಅಮ್ಮ, ಜಯಶ್ರಿ ಜತೆಗಿದ್ದಾರೆ ಎಂದು ತಿಳಿದು ಬಂದಿದೆ.