More

    ‘ಜಗತ್ತಿಗೆ ಗುಡ್​ ಬೈ’; ಆತುರದ ನಿರ್ಧಾರಕ್ಕೆ ಮುಂದಾದ್ರಾ ನಟಿ ಜಯಶ್ರೀ?; ಖಿನ್ನತೆಯಿಂದ ಯಾರ ಕರೆಯನ್ನೂ ಸ್ವೀಕರಿಸುತ್ತಿಲ್ಲ!

    ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಬಳಿಕ ಅವರ ಸಾವಿಗೆ ಖಿನ್ನತೆಯೇ ಕಾರಣ ಎಂದು ವೈದ್ಯರು ತಿಳಿಸಿದ್ದರು. ಅದಾದ ಬಳಿಕ ಬಾಲಿವುಡ್​ನಲ್ಲಿ ಖಿನ್ನತೆ ಬಗ್ಗೆಯೇ ದೊಡ್ಡ ಅಭಿಯಾನ ಶುರುವಾಯಿತು. ಆ ಮಹಾನರಕವನ್ನು ಎದುರಿಸಿ ಬಂದಿದ್ದ ಘಟಾನುಘಟಿಗಳು ತಮ್ಮ ಆ ಅನುಭವವನ್ನು ಎಲ್ಲರೆದುರು ಹಂಚಿಕೊಂಡಿದ್ದರು.

    ಇದನ್ನೂ ಓದಿ: ಅಸಭ್ಯ ಸಂದೇಶಗಳಿಂದ ಬೇಸತ್ತು ಕಿಡಿಗೇಡಿಗಳಿಗೆ ತಕ್ಕ ಪಾಠ ಕಲಿಸಲು ಮುಂದಾದ ನಟಿ ಮಾನಸಿ ಜೋಶಿ

    ಸ್ವತಃ ದೀಪಿಕಾ ಪಡುಕೋಣೆ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ, ಸ್ನೇಹಿತರೊಂದಿಗೆ ಮಾತನಾಡಿ, ಸಾಧ್ಯವಾದಷ್ಟು ನಿಮ್ಮ ನೋವನ್ನು ಹಂಚಿಕೊಳ್ಳಿ ಎಂದಿದ್ದರು. ಇದೀಗ ಸ್ಯಾಂಡಲ್​ವುಡ್​ ನಟಿ ಜಯಶ್ರೀ ರಾಮಯ್ಯ ಸಹ ಖಿನ್ನತೆಯಿಂದ ಬಳಲುತ್ತಿರುವ ಬಗ್ಗೆ ಹೇಳಿಕೊಂಡಿದ್ದಾರೆ.
    ಹೌದು, ಈ ವಿಚಾರವನ್ನು ಸ್ವತಃ ಜಯಶ್ರೀ ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ‘ನನ್ನಿಂದಾಗದು, ಇಡೀ ಜಗತ್ತಿಗೆ ಮತ್ತು ಖಿನ್ನತೆಗೆ ಗುಡ್​ಬೈ’ ಎಂದು ಬರೆದುಕೊಂಡಿದ್ದಾರೆ. ಈ ರೀತಿ ಪೋಸ್ಟ್ ಮಾಡುತ್ತಿದ್ದಂತೆ ಸಾಕಷ್ಟು ಮಂದಿ ಸ್ನೇಹಿತರು ಜಯಶ್ರೀ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಆದರೆ, ಯಾರ ಕರೆಯನ್ನೂ ಅವರು ಸ್ವೀಕರಿಸುತ್ತಿಲ್ಲ.

    ‘ಜಗತ್ತಿಗೆ ಗುಡ್​ ಬೈ’; ಆತುರದ ನಿರ್ಧಾರಕ್ಕೆ ಮುಂದಾದ್ರಾ ನಟಿ ಜಯಶ್ರೀ?; ಖಿನ್ನತೆಯಿಂದ ಯಾರ ಕರೆಯನ್ನೂ ಸ್ವೀಕರಿಸುತ್ತಿಲ್ಲ!

    ಇದನ್ನೂ ಓದಿ: ಪತಿಯ ಆಸರೆ ಕಳೆದುಕೊಂಡು ಬೀದಿಗೆ ಬಿದ್ದಿದ್ದ ಮಹಿಳೆಗೆ ಸೂರು ಒದಗಿಸಿದ ಸೋನು ಸೂದ್​

    ನಟಿ ಅದ್ವಿತಿ ಶೆಟ್ಟಿ,, ಆರೋಹಿ ನಾರಾಯಣ್​, ನಿರ್ದೇಶಕ ಮಯೂರ ರಾಘವೇಂದ್ರ ಸೇರಿ ಸಾಕಷ್ಟು ಮಂದಿ ಆತುರದ ನಿರ್ಧಾರಕ್ಕೆ ಮುಂದಾಗಬೇಡ ಎಂದು ಕಮೆಂಟ್ ಮೂಲಕ ಮನವಿ ಮಾಡಿದ್ದಾರೆ. ಆಸ್ಪತ್ರೆ ಬಳಿಯಲ್ಲಿಯೇ ಅವರ ಸಹೋದರನ ಜತೆ ಜಯಶ್ರಿ ಇರುವುದಾಗಿ ಅದ್ವಿತಿ ಫೇಸ್​ಬುಕ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನು ಕೆಲವರು ಫೇಸ್​ಬುಕ್​ ಮೆಸೆಂಜರ್​ ಮೂಲಕವೇ ಕರೆ ಮಾಡಿದ್ದಾರೆ. ಅವರ ಕರೆಗೂ ಜಯಶ್ರೀ ಸ್ಪಂದಿಸುತ್ತಿಲ್ಲ.
    ಅಂದಹಾಗೆ, ಬಿಗ್​ಬಾಸ್ ಮೂಲಕ ನಾಡಿನ ಮನೆ ಮಾತಾದ ಜಯಶ್ರೀ ರಾಮಯ್ಯ, ಸ್ಯಾಂಡಲ್​ವುಡ್​ನಲ್ಲಿಯೂ ಗುರುತಿಸಿಕೊಂಡವರು. ಉಪ್ಪು ಹುಳಿ ಖಾರ ಸಿನಿಮಾ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗಲೂ ಒಂದಷ್ಟು ಪ್ರಾಜೆಕ್ಟ್​ಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಆದರೆ, ಇದೀಗ ಫೇಸ್​ಬುಕ್​ನಲ್ಲಿ ಈ ರೀತಿ ಪೋಸ್ಟ್ ಮಾಡಿ ಎಲ್ಲರನ್ನು ಆತಂಕಕ್ಕೆ ತಳ್ಳಿದ್ದಾರೆ.

    ಓಡಿ ಹೋಗ್ಬೇಕು ಅಂದ್ಕೊಂಡಿದ್ದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts