ಹೈದರಾಬಾದ್: ಹೈದಾರಾಬಾದ್ ಮೂಲದ ವ್ಯಕ್ತಿಯ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವ ಘಟನೆ ಅಮೆರಿಕದ ಚಿಕಾಗೋದಲ್ಲಿ ನಡೆದಿದೆ.
ಮೊಹಮ್ಮದ್ ಮುಜೀಬುದ್ದೀನ್ ಎಂಬುವರ ಮೇಲೆ ಸೋಮವಾರ ನಸುಕಿನ ಜಾವವೇ ಗುಂಡಿನ ದಾಳಿ ನಡೆದಿದ್ದು, ಗಂಭೀರ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ತೆಲಂಗಾಣ ಐಟಿ ಸಚಿವ ಕೆ.ಟಿ. ರಾಮ ರಾವ್ ಅವರಿಗೆ ಗಾಯಾಳು ಮುಜೀಬುದ್ದೀನ್ ಪತ್ನಿ ಪತ್ರದ ಮೂಲಕ ತಿಳಿಸಿದ್ದಾರೆ.
ಇದನ್ನೂ ಓದಿ: ನಾಮಪತ್ರ ಹಿಂಪಡೆಯದಿದ್ದರೆ ನಿನ್ನ ಹೆಂಡತಿಯನ್ನು ಬಿಡೋದಿಲ್ಲ: ಪಿಸ್ತೂಲ್ ತೋರಿಸಿ ಬೆದರಿಕೆ ಆರೋಪ!
ಮುಜೀಬುದ್ದೀನ್ ಪತ್ನಿ, ಮಕ್ಕಳು ಮತ್ತು ತಾಯಿ ಹೈದರಾಬಾದ್ನಲ್ಲೇ ನೆಲೆಸದ್ದಾರೆ. ಮುಜೀಬುದ್ದೀನ್ ರೂಮ್ಮೇಟ್ ಒಬ್ಬರು ಹೈದರಾಬಾದ್ಗೆ ಕರೆ ಮಾಡಿ ಘಟನೆ ಕುರಿತು ಕುಟುಂಬಕ್ಕೆ ಮಾಹಿತಿ ನೀಡಿದ್ದು, ಇದೀಗ ಮುಜೀಬುದ್ದೀನ್ ನೋಡಿಕೊಳ್ಳಲು ಯಾರು ಇಲ್ಲದಿರುವುದರಿಂದ ಕುಟುಂಬ ತುಂಬಾ ಆತಂಕದಲ್ಲಿದೆ. ಅಲ್ಲದೆ, ಅಗತ್ಯ ನೆರವು ಒದಗಿಸಿ ಕೊಡುವಂತೆ ಮುಜೀಬುದ್ದೀನ್ ಪತ್ನಿ ಪತ್ರ ಮುಖೇನ ಭಾರತೀಯ ರಾಯಭಾರಿ ಕಚೇರಿಗೆ ಮನವಿ ಮಾಡಿದ್ದಾರೆ.
ತಕ್ಷಣ ಅಮೆರಿಕಗೆ ತೆರಳಲು ಕುಟುಂಬದವರಿಗೆ ತುರ್ತು ವೀಸಾಗೆ ಅನುಮತಿ ನೀಡುವಂತೆ ಸಚಿವರಿಗೂ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಮುಜೀಬುದ್ದೀನ್ ರೂಮ್ಮೇಟ್ ಮಾಹಿತಿ ಪ್ರಕಾರ ಕಾರು ಚಲಾಯಿಸಿಕೊಂಡು ಹೋಗುವಾಗ ಇಬ್ಬರು ವ್ಯಕ್ತಿಗಳು ಕಾರನ್ನು ತಡೆದು ಕೆಳಗೆ ಇಳಿಯುವಂತೆ ಗನ್ನಿಂದ ಹೆದರಿಸಿ, ಮುಜೀಬುದ್ದೀನ್ ಬಳಿಯಿರುವ ಹಣವನ್ನು ದೋಚಿ ಗುಂಡು ಹಾರಿಸಿ ಪರಾರಿ ಆದರು ಎಂದು ತಿಳಿದುಬಂದಿದೆ. (ಏಜೆನ್ಸೀಸ್)
ಇದನ್ನೂ ಓದಿ: ಕೋಟಿ ರೂ. ಲಂಚಕ್ಕೆ ಸಚಿವ ನಾಗೇಶ್ ಬೇಡಿಕೆ? ಸಚಿವರು ಹೇಳಿದ್ದೇನು?
ಹೊಸ ರೂಪಾಂತರ ಕರೊನಾ ವೈರಸ್ ನಿಯಂತ್ರಣ ತಪ್ಪಿಲ್ಲ: ಡಬ್ಲ್ಯುಎಚ್ಒ ಸ್ಪಷ್ಟನೆ
ಶಾಲಾ ಶುಲ್ಕದ್ದೇ ದೊಡ್ಡ ಸಮಸ್ಯೆ: ಪಾಲಕರು, ಖಾಸಗಿ ಶಾಲೆಗಳ ಸಹಕಾರ ಕೋರಿದ ಸುರೇಶ್ಕುಮಾರ್