ಚೆನ್ನೈ: ಪಾಪಿ ಪತಿರಾಯನೊಬ್ಬ ಪವಿತ್ರ ಮಂಗಳ ಸೂತ್ರದಿಂದಲೇ ಕುತ್ತಿಗೆ ಬಿಗಿದು ಪತ್ನಿಯನ್ನು ಬರ್ಬರ ಹತ್ಯೆ ಮಾಡಿರುವ ಘಟನೆ ಚೆನ್ನೈ ಸಮೀಪದ ಅಂಬಾಥೂರ್ನಲ್ಲಿ ನಡೆದಿದೆ.
ಕೊಲೆಯಾದ ಮಹಿಳೆಯನ್ನು ಪವಿತ್ರ (28) ಎಂದು ಗುರುತಿಸಲಾಗಿದೆ. ಹತ್ಯೆಗೈದ ಬಳಿಕ ಆಕೆಯ ಗಂಡ ರಾಜ್ (35) ಪರಾರಿಯಾಗಿದ್ದಾನೆ. ಪವಿತ್ರ ಜವಳಿ ಅಂಗಡಿಯಲ್ಲಿ ಸೇಲ್ಸ್ ಗರ್ಲ್ ಆಗಿ ಕೆಲಲ ಮಾಡುತ್ತಿದ್ದಳು. ತನ್ನ ನೆರೆಮನೆಯ ರಾಜ್ ಜೊತೆ ಆರು ತಿಂಗಳ ಹಿಂದೆ ಮದುವೆ ಆಗಿದ್ದಳು.
ಪವಿತ್ರ ಮತ್ತು ರಾಜ್ ಇಬ್ಬರಿಗು ಇದು ಎರಡನೇ ಮದುವೆ. ಕಳೆದ ವಾರ ಯಾವುದೋ ಮಾತಿಗೆ ಇಬ್ಬರು ಜಗಳ ಆರಂಭವಾಗಿತ್ತು. ಈ ವೇಳೆ ತಾಳ್ಮೆ ಕಳೆದುಕೊಂಡಿದ್ದ ರಾಜ್, ಮಂಗಳಸೂತ್ರದಿಂದಲೇ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ.
ಮಗಳು ಗಂಡನೊಂದಿಗೆ ಜಗಳ ಆಡಿದ್ದಾಳೆ ಎಂಬ ಸಂಗತಿಯನ್ನು ತಿಳಿದ ಕೂಡಲೇ ಪವಿತ್ರಳ ತಾಯಿ ಮನೆಗೆ ಹೋಗಿ ನೋಡಿದಾಗ ಮಗಳು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ರಾಜ್ಗಾಗಿ ಪೊಲೀಸರು ಬಲೆ ಬೀಸಿದ್ದಾರೆ. (ಏಜೆನ್ಸೀಸ್)
ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ: 30 ಮಂದಿಗೆ ಗಂಭೀರ ಗಾಯ, 48 ವಾಹನಗಳು ಜಖಂ
ಬೈಕ್ ಮತ್ತು ಫಾರ್ಚೂನರ್ ಭೀಕರ ಅಪಘಾತ: ಕಾರಿನಲ್ಲಿ ಸಿಕ್ತು ಶಾಸಕರ ಪಾಸ್; ಇದಕ್ಕೂ ಶಾಸಕರಿಗೂ ನಂಟೇನು?
ಹೆಚ್ಚುತ್ತಿರುವ ಮಕ್ಕಳ ಆತ್ಮಹತ್ಯೆ!; ಓದಿನ ಒತ್ತಡ ತಾಳಲಾಗದೆ ನೇಣು ಹಾಕಿಕೊಂಡ ವಿದ್ಯಾರ್ಥಿ