More

    ಪ್ರಸೂತಿ ವೈದ್ಯ ಬಾಲಕೃಷ್ಣ ಬಂಧನ

    ಕೊಪ್ಪ: ಮಗು ಮಾರಾಟ ಆರೋಪದ ಮೇರೆಗೆ ಸರ್ಕಾರಿ ಆಸ್ಪತ್ರೆ ಪ್ರಸೂತಿ ವೈದ್ಯ ಡಾ. ಜಿ.ಎಸ್.ಬಾಲಕೃಷ್ಣ ಅವರನ್ನು ಹುಬ್ಬಳ್ಳಿಯಲ್ಲಿ ಕೊಪ್ಪ ಪೊಲೀಸರು ಬಂಧಿಸಿದ್ದು ಶುಕ್ರವಾರ ಸಂಜೆ ಪಟ್ಟಣದ ಜೆಎಂಎಫ್​ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದರು.

    ಎನ್.ಆರ್.ಪುರದಲ್ಲಿ ನ.27ರಂದು ನಡೆದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸಭೆಯಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮಗು ಮಾರಾಟದ ಪ್ರಕರಣ ಬೆಳಕಿಗೆ ಬಂದಿತ್ತು. 30ರಂದು ಸರ್ಕಾರಿ ಆಸ್ಪತ್ರೆ ತಾತ್ಕಾಲಿಕ ಆಡಳಿತ ವೈದ್ಯಾಧಿಕಾರಿ ಡಾ. ಗಾನವಿ ಅವರು ತೀರ್ಥಹಳ್ಳಿ ಮೂಲದ ಅವಿವಾಹಿತ ಯುವತಿಯ ತಾಯಿಯ ಹೇಳಿಕೆ ಪಡೆದು ಪಟ್ಟಣ ಠಾಣೆಯಲ್ಲಿ ದೂರು ನೀಡಿದ್ದರು.

    ವೈದ್ಯ ಬಾಲಕೃಷ್ಣ, ಶುಶ್ರೂಷಕರಾದ ರೇಷ್ಮಾ, ಶೋಭಾ ಅವರ ವಿರುದ್ಧ ಪಟ್ಟಣ ಠಾಣೆಯಲ್ಲಿ ದಾಖಲಾಗಿತ್ತು. ನಂತರ ಮೂವರೂ ತಲೆಮರೆಸಿಕೊಂಡು, ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಹಾಕಿದ್ದರು. ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿತ್ತು. ಹೀಗಾಗಿ ವೈದ್ಯರು ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸುವ ಮುಂಚಿತವಾಗಿ ಶುಕ್ರವಾರ ನಸುಕಿನ ವೇಳೆ ಪೊಲೀಸರು ವೈದ್ಯರನ್ನು ಬಂಧಿಸಿದರು.

    ಸದ್ಯ ದತ್ತು ಕೇಂದ್ರದಲ್ಲಿರುವ ಮಗು ನನ್ನದಲ್ಲ ಎಂದು ಯುವತಿ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದರು. ಹೀಗಾಗಿ ಮಗು ಯಾರದ್ದು ಎಂಬ ಪ್ರಶ್ನೆ ಜಟಿಲವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts