More

    ಹಿರಿಯೂರಿನಲ್ಲಿ ಆಟೋ ಚಾಲಕರಿಂದ ಶಂಕರ್ ನಾಗ್ ಜನ್ಮದಿನಾಚರಣೆ

    ಹಿರಿಯೂರು: ನಮ್ಮ ಚಾಲಕರ ಟ್ರೇಡ್ ಯೂನಿಯನ್‌ನಿಂದ ನಗರದಲ್ಲಿ ಮಂಗಳವಾರ ನಟ ದಿವಂಗತ ಶಂಕರ್ ನಾಗ್ ಹಾಗೂ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

    ನಗರಸಭೆ ಅಧ್ಯಕ್ಷೆ ಶಂಶುನ್ನೀಸಾ ಮಾತನಾಡಿ, ಆಟೋ ಚಾಲನೆ ಕಾಯಕದ ಮೂಲಕ ಜನ ಸೇವೆ ಮಾಡುತ್ತಿರುವ ಚಾಲಕರ ಸೇವೆಗೆ ಬೆಲೆ ಕಟ್ಟಲಾಗದು ಎಂದು ಹೇಳಿದರು.

    ಹಗಲು-ರಾತ್ರಿ ಎನ್ನದೆ ಸಾರ್ವಜರು, ಬಡವರಿಗೆ ಸೇವೆ ನೀಡುತ್ತಿರುವ ಆಟೋ ಚಾಲಕರು ಬಡವರ ಬಂಧುಗಳಾಗಿದ್ದಾರೆ ಎಂದು ತಿಳಿಸಿದರು. ನಗರಸಭೆ ಉಪಾಧ್ಯಕ್ಷ ಬಿ.ಎನ್.ಪ್ರಕಾಶ್, ಫಜ್ಲುಲ್ಲಾ ರೆಹಮಾನ್, ದಾದಾಪೀರ್ ಸೈಯದ್ ಪಿ.ಎಸ್.ಸಾದತ್‌ವುಲ್ಲಾ, ಉಬೇದುಲ್ಲಾ, ಶಾಮು ಅಖಿಲ್, ಮೀಸೆ ನಾಗಣ್ಣ, ರವೀಂದ್ರನಾಥ್, ಕಿರಣ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts