More

    ‘ಕ್ರಿಸ್​ಮಸ್​ಗೆ ಚರ್ಚ್​ಗೆ ಹೋಗುವ ಹಿಂದೂಗಳಿಗೆ ಥಳಿಸುತ್ತೇವೆ’ ಭಜರಂಗದಳ ನಾಯಕನ ಎಚ್ಚರಿಕೆ

    ದಿಸ್ಪುರ: ಪ್ರೇಮಿಗಳ ದಿನಾಚರಣೆಗೆ ವಿರೋಧ ಹೊಂದಿರುವ ಭಜರಂಗದಳ ನಾಯಕರು ಇದೀಗ ಕ್ರಿಸ್​ಮಸ್​ ದಿನಾಚರಣೆಯ ದಿನದಂದು ಹಿಂದೂಗಳು ಚರ್ಚ್​ಗೆ ಹೋಗುವುದಕ್ಕೂ ವಿರೋಧ ವ್ಯಕ್ತಪಡಿಸಿದ್ದಾರೆ. ಆ ದಿನ ಚರ್ಚ್​ಗೆ ಹೋಗುವ ಹಿಂದೂಗಳನ್ನು ಥಳಿಸುವುದಾಗಿ ಭಜರಂಗದಳ ನಾಯಕರೊಬ್ಬರು ಹೇಳಿದ್ದಾರೆ.

    ಇದನ್ನೂ ಓದಿ: ಮೂರು ಹೆಣ್ಣು ಮಕ್ಕಳಿಂದ ನಡೆದಿತ್ತು ಅಪ್ಪನ ಕೊಲೆ! ಕಣ್ಣೀರು ತರಿಸುತ್ತೆ ಕೊಲೆಯ ಹಿಂದಿನ ನೋವಿನ ಕಥೆ

    ಈ ರೀತಿಯ ಹೇಳಿಕೆಯನ್ನು ನೀಡುವ ಮೂಲಕ ವಿವಾದಕ್ಕೆ ಬಂದಿರುವವರು ಅಸ್ಸಾಂನ ಕ್ಯಾಚರ್​ ಜಿಲ್ಲೆಯ ಭಜರಂಗದಳದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಿಥು ನಾಥ್ ಅವರು. ಜಿಲ್ಲೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು ಈ ಮಾತನ್ನು ಹೇಳಿದ್ದಾರೆ. ಮೇಘಾಲಯದ ಶಿಲ್ಲಾಂಗ್​ನಲ್ಲಿ ವಿವೇಕಾನಂದರ ಕೇಂದ್ರವನ್ನು ಕ್ರಿಶ್ಚಿಯನ್ನರು ಮುಚ್ಚಿದ್ದಾರೆ. ಇದರಿಂದಾಗಿ ನಮಗೆ ನೋವಾಗಿದೆ. ಹಾಗಾಗಿ ಹಿಂದೂಗಳು ಕ್ರಿಸ್​ಮಸ್​ ದಿನದಂದು ಚರ್ಚ್​ಗೆ ಹೋಗದಂತೆ ತಡೆಯುತ್ತೇವೆ ಎಂದು ಅವರು ಹೇಳಿದ್ದಾರೆ.

    ಇದನ್ನೂ ಓದಿ: ಮದುವೆಗೆ ಮೂರು ದಿನವಿದ್ದಾಗ ಮರ್ಮಾಂಗವೇ ಕಟ್! 1 ಲಕ್ಷಕ್ಕಾಗಿ ಜೀವನವನ್ನೇ ಹಾಳು ಮಾಡಿಕೊಂಡ ಯುವಕ

    ಕ್ರಿಸ್​ಮಸ್​ ದಿನ ಚರ್ಚ್​ಗೆ ಹೋಗುವ ಹಿಂದೂಗಳನ್ನು ನಾವು ಥಳಿಸುತ್ತೇವೆ. ಮಾರನೇ ದಿನ ಅದು ಎಲ್ಲ ಮಾಧ್ಯಮಗಳಲ್ಲಿ ದೊಡ್ಡ ವರದಿಯಾಗುತ್ತದೆ. ನಮ್ಮನ್ನು ಗೂಂಡಾದಳ ಎಂದು ಬಿಂಬಿಸಲಾಗುತ್ತದೆ. ಆದರೆ ಅದು ನಮ್ಮ ಆದ್ಯತೆಯಲ್ಲ. ನಮ್ಮ ದೇವಾಲಯಗಳನ್ನು ಮುಚ್ಚುತ್ತಿರುವ ಅವರ ಧಾರ್ಮಿಕ ಕ್ಷೇತ್ರಕ್ಕೆ ನಾವು ಹೋಗಬಾರದು. ಹೋಗದಂತೆ ನಾವು ತಡೆಯುತ್ತೇವೆ ಎಂದು ಅವರು ಹೇಳಿದ್ದಾರೆ. (ಏಜೆನ್ಸೀಸ್​)

    ಮದುವೆ ಮಂಟಪದಿಂದ ಎದ್ದು ಹೋದ ವಧು! ವಾಪಾಸು ಬರುವಷ್ಟರಲ್ಲಿ ಪೂರ್ತಿ ಕುಟುಂಬವೇ ಹೆಮ್ಮೆ ಪಡುತ್ತಿತ್ತು!

    ಐದು ವರ್ಷದ ಮಗನ ಎದುರೇ ಹೋಯಿತು ಅಮ್ಮ, ಅಕ್ಕನ ಪ್ರಾಣ! ಕೊಲೆ ಮಾಡಿದ್ದು ಯಾರು ಎಂದು ಗೊತ್ತಾದರೆ ಬೆಚ್ಚಿ ಬೀಳುತ್ತೀರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts