ಉತ್ತರಕನ್ನಡ: ಶಾಲೆಯ ವತಿಯಿಂದ ಪಿಕ್ನಿಕ್ಗೆ ಹೋಗಿದ್ದ ಬಾಲಕನೊಬ್ಬ ನಾಪತ್ತೆಯಾಗಿದ್ದಾನೆ. ಹದಿನಾರು ವರ್ಷದ ಹುಡುಗ ಕಣ್ಮರೆಯಾಗಿದ್ದು, ಸ್ಥಳೀಯರು ಆತನಿಗಾಗಿ ಹುಡುಕಾಟ ನಡೆಸಲಾರಂಭಿಸಿದ್ದಾರೆ. ಉತ್ತರಕನ್ನಡ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.
ಪ್ರಕಾಶ ಪಟಕಾರೆ (16) ಕಣ್ಮರೆಯಾದ ಬಾಲಕ. ಗುಳ್ಳಾಪುರ ಪ್ರೌಢಶಾಲೆ ವತಿಯಿಂದ ಪಿಕ್ನಿಕ್ಗೆ ಕರೆದುಕೊಂಡು ಹೋಗಿದ್ದಾಗ ಈ ಅವಘಡ ಸಂಭವಿಸಿದೆ. ಈತ ಗುಳ್ಳಾಪುರದ ವಸತಿ ನಿಲಯದಲ್ಲಿ ವಾಸಿಸುತ್ತಿದ್ದ ವಿದ್ಯಾರ್ಥಿ.
ಪಿಕ್ನಿಕ್ಗೆ ತೆರಳಿದ್ದ ಸಂದರ್ಭದಲ್ಲಿ ಈತ ನದಿಯಲ್ಲಿ ಕೈತೊಳೆಯಲು ಹೋಗಿದ್ದಾಗ ಕಾಲು ಜಾರಿ ಬಿದ್ದಿದ್ದಾನೆ. ನೀರಿನಲ್ಲಿ ಮುಳುಗಿ ಕಣ್ಮರೆಯಾಗಿರುವ ಈತನಿಗಾಗಿ ಸ್ಥಳೀಯ ಮೀನುಗಾರರು ಹುಡುಕಾಟ ಆರಂಭಿಸಿದ್ದಾರೆ. ಯಲ್ಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ಪಂಕ್ಚರ್ ಆಗಿದ್ದನ್ನು ರಿಪೇರಿ ಮಾಡುತ್ತಿದ್ದವನ ದೇಹವೇ ಛಿದ್ರಛಿದ್ರ; ಲಾರಿಗೆ ಲಾರಿ ಡಿಕ್ಕಿಯಾಗಿ ಭೀಕರ ಅಪಘಾತ
ಪ್ರವಾಸಕ್ಕೆ ಬಂದಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ; ಟಿಟಿ ಡ್ರೈವರ್ ಅರೆಸ್ಟ್
ನಾನು ಮೂರ್ಖನಾಗಲೂ ಸಿದ್ಧ ಎಂದ ಇಮೇಲ್ ಕಂಡುಹಿಡಿದಾತ!; ಮಸ್ಕ್ ಹೊಸ ಟಾಸ್ಕ್ಗೆ ಹೀಗೊಂದು ಟಾಂಗ್