ಬೆಂಗಳೂರು:
ಹೈಕೋರ್ಟ್ ವಕೀಲೆ ಚಂದ್ರಿಕಾ ಪಾಟೀಲ್ (61) ಶನಿವಾರ ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆಯಲ್ಲಿ ಶನಿವಾರ ಸಂಜೆ ನಿಧನರಾದರು.
ಪತಿ, ವಕೀಲ ಜಿ.ಎಸ್. ಪಾಟೀಲ್, ಪುತ್ರಿ ಸೇರಿ ಅಪಾರ ಬಂಧು- ಬಳಗವನ್ನು ಅಗಲಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕು ಮಲ್ಲಪ್ಪನಳ್ಳಿ ಮೂಲದವರಾದ ಅವರು ಕೆಲ ದಶಕಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು. ಬೆಂಗಳೂರು ಅಕ್ಕನ ಬಳಗದ ಪ್ರಮುಖ ಸಂಘಟಕರಾಗಿದ್ದ ಚಂದ್ರಿಕಾ, ನಗರದಲ್ಲಿ ವೀರಶೈವ ಲಿಂಗಾಯತ ಸಮಾಜ ಸಂಘಟನೆಯಲ್ಲಿಯೂ ತೊಡಗಿಸಿಕೊಂಡಿದ್ದರು. ಬಿಜೆಪಿ ಕಾರ್ಯಕರ್ತರಾಗಿಯೂ ಗುರುತಿಸಿಕೊಂಡಿದ್ದರು.
ಅಂತ್ಯಕ್ರಿಯೆ:
ಗುಬ್ಬಿ ತಾಲೂಕು ನಿಟ್ಟೂರು ಬಳಿಯ ಡಿ.ರಾಂಪುರದಲ್ಲಿ ಭಾನುವಾರ ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ತಿಳಿಸಿದೆ.
ಸಂತಾಪ:
ವಕೀಲೆ ಚಂದ್ರಿಕಾ ಪಾಟೀಲ್ ನಿಧನಕ್ಕೆ ಬೆಂಗಳೂರು ನಗರ ವೀರಶೈವ ಲಿಂಗಾಯಿತ ಸಮಾಜ ಸಂತಾಪ ವ್ಯಕ್ತಪಡಿಸಿದ್ದು, ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸಿದೆ.