More

    ಆಕೆಗೆ ಡ್ರಾಪ್ ಕೊಡಲು ಹೊರಟಿದ್ದಕ್ಕೆ ಆತನನ್ನು ಹಿಡಿದು ಹೊಡೆದ್ರು!

    ಕಲಬುರಗಿ: ರಾಜ್ಯದಲ್ಲಿ ಆಗಾಗ ನೈತಿಕ ಪೊಲೀಸ್​ಗಿರಿ, ಧಾರ್ಮಿಕ ಸಂಘರ್ಷದಂಥ ಪ್ರಕರಣಗಳು ನಡೆಯುತ್ತಿರುತ್ತವೆ. ಇದೀಗ ಅಂಥ ಇನ್ನೊಂದು ನೈತಿಕ ಪೊಲೀಸ್​ಗಿರಿ ಎನ್ನುವಂಥ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ಮುಸ್ಲಿಂ ಮಹಿಳೆಗೆ ಡ್ರಾಪ್ ಕೊಡಲು ಮುಂದಾಗಿದ್ದಕ್ಕೆ ಹಿಂದೂ ವ್ಯಕ್ತಿಯೊಬ್ಬರಿಗೆ ಮಾರಣಾಂತಿಕ ಹಲ್ಲೆ ನಡೆಸಿರುವ ಪ್ರಕರಣವೊಂದು ನಡೆದಿದೆ. ಕಲಬುರಗಿಯ ಜೇವರ್ಗಿ ತಾಲೂಕಿನ ಚಿಗರಳ್ಳಿ ಬಳಿ ಜು. 15ರಂದು ಈ ಪ್ರಕರಣ ನಡೆದಿತ್ತು.

    ಇದನ್ನೂ ಓದಿ: ಯಾವುದೇ ಕಾರಣಕ್ಕೂ ಹನುಮ ಜಯಂತಿ ನಿಲ್ಲಬಾರದು; ಮುಂದಿನ ಸಲ ಇನ್ನೂ ಅದ್ಧೂರಿ ಆಗಿರಬೇಕು: ಚಕ್ರವರ್ತಿ ಸೂಲಿಬೆಲೆ

    ಜೇವರ್ಗಿ ತಾಲೂಕಿನ ವರಧಿ ಗ್ರಾಮದ ನಿವಾಸಿ ಶ್ಯಾಮರಾಯ್ ಮೇಲೆ ಹಲ್ಲೆ ನಡೆದಿದೆ. ಇವರು ತಮ್ಮದೇ ಗ್ರಾಮದ ಮುಸ್ಲಿಂ ಮಹಿಳೆಯೊಬ್ಬರನ್ನು ಬೈಕ್​ನಲ್ಲಿ ಕೂರಿಸಿಕೊಂಡು ಡ್ರಾಪ್ ಕೊಡಲು ಹೊರಟಿದ್ದಾಗ ಅಡ್ಡಗಟ್ಟಿ ಹಲ್ಲೆ ಮಾಡಲಾಗಿದೆ.

    ಇದನ್ನೂ ಓದಿ: INDIAಗೆ ಯಾರ ನೇತೃತ್ವ?: ಮಲ್ಲಿಕಾರ್ಜುನ ಖರ್ಗೆ ಉತ್ತರ ಇದು..

    ಜೇವರ್ಗಿಯ ಡಿಕೆ ಗ್ಯಾಂಗ್​ ಎಂಬ ಗುಂಪಿನ ಮೂರ್ನಾಲ್ಕು ಯುವಕರು ಒಂದಾಗಿ ಈ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಹಲ್ಲೆಗೊಳಗಾದ ಶ್ಯಾಮರಾಯ್ ಮಹಾರಾಷ್ಟ್ರದ ಸೊಲ್ಲಾಪುರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಕುಟುಂಬಸ್ಥರು ಜೇವರ್ಗಿ ಠಾಣೆಗೆ ದೂರು ನೀಡಿದ್ದಾರೆ.

    ಮಕ್ಕಳನ್ನು ಡೌನ್​ಲೋಡ್ ಮಾಡಿಕೊಳ್ಳುವ ಕಾಲ ಬರಬಹುದಾ?; ಇದೇನಿದು ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟಿಸೋ ಪ್ರಯತ್ನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts