ಕಲಬುರಗಿ: ರಾಜ್ಯದಲ್ಲಿ ಆಗಾಗ ನೈತಿಕ ಪೊಲೀಸ್ಗಿರಿ, ಧಾರ್ಮಿಕ ಸಂಘರ್ಷದಂಥ ಪ್ರಕರಣಗಳು ನಡೆಯುತ್ತಿರುತ್ತವೆ. ಇದೀಗ ಅಂಥ ಇನ್ನೊಂದು ನೈತಿಕ ಪೊಲೀಸ್ಗಿರಿ ಎನ್ನುವಂಥ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಮುಸ್ಲಿಂ ಮಹಿಳೆಗೆ ಡ್ರಾಪ್ ಕೊಡಲು ಮುಂದಾಗಿದ್ದಕ್ಕೆ ಹಿಂದೂ ವ್ಯಕ್ತಿಯೊಬ್ಬರಿಗೆ ಮಾರಣಾಂತಿಕ ಹಲ್ಲೆ ನಡೆಸಿರುವ ಪ್ರಕರಣವೊಂದು ನಡೆದಿದೆ. ಕಲಬುರಗಿಯ ಜೇವರ್ಗಿ ತಾಲೂಕಿನ ಚಿಗರಳ್ಳಿ ಬಳಿ ಜು. 15ರಂದು ಈ ಪ್ರಕರಣ ನಡೆದಿತ್ತು.
ಇದನ್ನೂ ಓದಿ: ಯಾವುದೇ ಕಾರಣಕ್ಕೂ ಹನುಮ ಜಯಂತಿ ನಿಲ್ಲಬಾರದು; ಮುಂದಿನ ಸಲ ಇನ್ನೂ ಅದ್ಧೂರಿ ಆಗಿರಬೇಕು: ಚಕ್ರವರ್ತಿ ಸೂಲಿಬೆಲೆ
ಜೇವರ್ಗಿ ತಾಲೂಕಿನ ವರಧಿ ಗ್ರಾಮದ ನಿವಾಸಿ ಶ್ಯಾಮರಾಯ್ ಮೇಲೆ ಹಲ್ಲೆ ನಡೆದಿದೆ. ಇವರು ತಮ್ಮದೇ ಗ್ರಾಮದ ಮುಸ್ಲಿಂ ಮಹಿಳೆಯೊಬ್ಬರನ್ನು ಬೈಕ್ನಲ್ಲಿ ಕೂರಿಸಿಕೊಂಡು ಡ್ರಾಪ್ ಕೊಡಲು ಹೊರಟಿದ್ದಾಗ ಅಡ್ಡಗಟ್ಟಿ ಹಲ್ಲೆ ಮಾಡಲಾಗಿದೆ.
ಇದನ್ನೂ ಓದಿ: INDIAಗೆ ಯಾರ ನೇತೃತ್ವ?: ಮಲ್ಲಿಕಾರ್ಜುನ ಖರ್ಗೆ ಉತ್ತರ ಇದು..
ಜೇವರ್ಗಿಯ ಡಿಕೆ ಗ್ಯಾಂಗ್ ಎಂಬ ಗುಂಪಿನ ಮೂರ್ನಾಲ್ಕು ಯುವಕರು ಒಂದಾಗಿ ಈ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಹಲ್ಲೆಗೊಳಗಾದ ಶ್ಯಾಮರಾಯ್ ಮಹಾರಾಷ್ಟ್ರದ ಸೊಲ್ಲಾಪುರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಕುಟುಂಬಸ್ಥರು ಜೇವರ್ಗಿ ಠಾಣೆಗೆ ದೂರು ನೀಡಿದ್ದಾರೆ.
ಮಕ್ಕಳನ್ನು ಡೌನ್ಲೋಡ್ ಮಾಡಿಕೊಳ್ಳುವ ಕಾಲ ಬರಬಹುದಾ?; ಇದೇನಿದು ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟಿಸೋ ಪ್ರಯತ್ನ!