ರಾಮನಗರ: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಆರೋಪ-ಪ್ರತ್ಯಾರೋಪಗಳ ಸುರಿಮಳೆಯ ಜತೆಜತೆಗೆ ಸ್ಫೋಟಕ ಹೇಳಿಕೆಯೂ ಕೇಳಿಬರುತ್ತಿದೆ. ಇದೀಗ ಮಾಗಡಿ ಕ್ಷೇತ್ರ ಶಾಸಕರ ಕರಿತು ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಹೊಸ ಬಾಂಬ್ ಸಿಡಿಸಿದ್ದಾರೆ. ಜೆಡಿಎಸ್ ಶಾಸಕರಾಗಿ ಆಯ್ಕೆಯಾದ ಬಳಿಕ ಬಿಜೆಪಿ ಸೇರಲು ಮಂಜುನಾಥ್ ಅವರು ಸಿ.ಪಿ.ಯೋಗೇಶ್ವರ್ ಜೊತೆ ಮಾತುಕತೆ ನಡೆಸಿದ್ದರಂತೆ!
ಕಳೆದ 2018ರ ಚುನಾವಣೆಯಲ್ಲಿ ಜೆಡಿಎಸ್ನಿಂದ ಗೆದ್ದು ಬಿಜೆಪಿ ಪಕ್ಷಕ್ಕೆ ಸೇರಲು ಶಾಸಕ ಎ.ಮಂಜುನಾಥ್ ಮುಂದಾಗಿದ್ದರು. ಈ ಸಂಬಂಧ ಸಿ.ಪಿ.ಯೋಗೇಶ್ವರ್ ಜೊತೆ ಮಾತುಕತೆ ನಡೆಸಿದ್ದರು. ಬಾಲಕೃಷ್ಣ ಅವರು ಬಿಜೆಪಿಗೆ ಬಂದ್ರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಯಿಂದ ಸ್ಪರ್ಧೆ ಮಾಡುವೆ. ಬಾಲಕೃಷ್ಣ ಕಾಂಗ್ರೆಸ್ ತೊರೆದು ಬಿಜೆಪಿಗೆ ಬರಬೇಕು. ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿ ಎಂದು ಸ್ವತಃ ಮಂಜುನಾಥ್ ಅವರೇ ಹೇಳಿದ್ದರು ಎಂದು ಬಾಲಕೃಷ್ಣ ಹೇಳಿದ್ದಾರೆ.
ಈ ಕುರಿತು ಯೋಗೇಶ್ವರ್ ಹಾಗೂ ನನ್ನ(ಬಾಲಕೃಷ್ಣ) ಜೊತೆ ಹಲವು ಬಾರಿ ಮಂಜುನಾಥ್ ಮಾತುಕತೆ ನಡೆಸಿದ್ದರು. ಯೋಗೇಶ್ವರ್ರ ಕಾರಿನಲ್ಲಿ ಬೆಂಗಳೂರು ಸುತ್ತಾಡಿದ್ದರು. ಕೊನೆಗೆ ತಮ್ಮ ಧರ್ಮಪತ್ನಿ ಬಳಿ ಮಾತಾಡಿ ಮುಂದಿನ ನಿರ್ಣಯ ತೆಗೆದುಕೊಳ್ಳುವುದಾಗಿಯೂ ಹೇಳಿದ್ದರು. ಜನರ ಭಯದಿಂದ ಜೆಡಿಎಸ್ ಪಕ್ಷದಲ್ಲಿಯೇ ಎ.ಮಂಜುನಾಥ್ ಇದ್ದಾರೆ. ದೇವೇಗೌಡ ಮತ್ತು ಕುಮಾರಸ್ವಾಮಿ ಮೇಲಿನ ಗೌರವದಿಂದ ಮಂಜುನಾಥ್ ಜೆಡಿಎಸ್ನಲ್ಲೇನೂ ಇಲ್ಲ ಎಂದು ಬಾಲಕೃಷ್ಣ ಅಣಕಿಸಿದ್ದಾರೆ.
ಒಡತಿಗಾಗಿ 4 ದಿನ ಆಸ್ಪತ್ರೆಯ ಬಾಗಿಲು ಕಾದ ಪಪ್ಪಿ… ಒಡತಿ ಬದುಕಿ ಬರಲೇ ಇಲ್ಲ… ಶಿವಮೊಗ್ಗದಲ್ಲಿ ಮನಕಲಕುವ ಘಟನೆ
ಸ್ಯಾಂಟ್ರೋ ರವಿ ‘ಪಿಂಪ್’ ಮಾತ್ರವಲ್ಲ… ಬಗೆದಷ್ಟೂ ಬಯಲಾಗ್ತಿದೆ ಈತನ ಕರಾಳ ಮುಖ…