ಬಸವಕಲ್ಯಾಣ: ರಾಜೇಶ್ವರ ಬಳಿ ದಾಳಿ ನಡೆಸಿದ ಪೊಲೀಸರು, ಅಕ್ರಮವಾಗಿ ಸಾಗಿಸುತ್ತಿದ್ದ ೯.೯೦ ಲಕ್ಷದ ಗುಟ್ಕಾ ಮತ್ತು ತಂಬಾಕು ಪದಾರ್ಥ ವಶಪಡಿಸಿಕೊಂಡು ಒಬ್ಬನನ್ನು ಬಂಧಿಸಿದ್ದಾರೆ. ಬೆಂಗಳೂರು ಮೂಲದ ಸೈಯದ್ ಶೋಯಬ್ ಬಂಧಿತ. ತೆಲಂಗಾಣದಿAದ ಮಹಾರಾಷ್ಟçದ ಪುಣೆಗೆ ಸಾಗಿಸುತ್ತಿದ್ದ. ಎಸ್ಪಿ ಚನ್ನಬಸವಣ್ಣ ಲಂಗೋಟಿ ಮಾರ್ಗದರ್ಶನದಲ್ಲಿ ಪಿಎಸ್ಐ ಅಂಬರೀಶ ವಾಗ್ಮೋಡೆ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.