ಚಾಮರಾಜನಗರ: ಮಹಾಮಾರಿ ಕರೊನಾ ವೈರಸ್ ನಿಯಂತ್ರಿಸಲು ಜನರು ವಿವಿಧ ತಂತ್ರಗಳ ಮೊರೆ ಹೋಗುತ್ತಿದ್ದಾರೆ. ಅದಕ್ಕೆ ಪೊಲೀಸರು ಸಹ ಹೊರತಾಗಿಲ್ಲ. ಸದ್ಯ ಹೆಚ್ಚು ಪ್ರಚಾರದಲ್ಲಿರುವ ತಂತ್ರವೆಂದರೆ ಅದು ಸ್ಟೀಮ್.
ಇದೀಗ ಗುಂಡ್ಲುಪೇಟೆ ಪೊಲೀಸರು ಒಂದು ಹೆಜ್ಜೆ ಮುಂದೆ ಹೋಗಿದ್ದು, ಆಯುರ್ವೇದಿಕ್ ಸ್ಟೀಮ್ ಮೂಲಕ ಕರೊನಾದಿಂದ ರಕ್ಷಣೆ ಪಡೆದುಕೊಳ್ಳಲು ಮುಂದಾಗಿದ್ದಾರೆ.
ಜನರ ನಡುವೆ ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮುಂದಾಗಿರುವ ಗುಂಡ್ಲುಪೇಟೆ ಠಾಣಾಧಿಕಾರಿಗಳು ಆಯುರ್ವೇದಿಕ್ ಸ್ಟೀಮ್ ಮೊರೆ ಹೋಗಿದ್ದಾರೆ.
ಒಂದು ಕುಕ್ಕರ್ಗೆ ನೀರು, ಅರಿಶಿನ, ಮೆಣಸು, ಜೀರಿಗೆ ಹಾಕಿ ಕುದಿಸಿ ಸ್ಟೀಮ್ ತೆಗೆದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಒಮ್ಮೆಗೆ ನಾಲ್ಕು ಜನ ಪೊಲೀಸರು ಸ್ಟೀಮ್ ತೆಗೆದುಕೊಳ್ಳುವಂತೆ ಪೈಪ್ಗಳನ್ನು ಅಳವಡಿಸಲಾಗಿದೆ.
ಕರ್ತವ್ಯಕ್ಕೆ ಹಾಜರಾಗುವ ಮೊದಲು ಹಾಗೂ ಕರ್ತವ್ಯ ಮುಗಿಸಿ ಮನೆಗೆ ಹೋಗುವ ಮುನ್ನ ಪೊಲೀಸ್ ಸಿಬ್ಬಂದಿ ಈ ಆಯುರ್ವೇದಿಕ್ ಸ್ಟೀಮ್ ತೆಗೆದುಕೊಳ್ಳುತ್ತಿದ್ದಾರೆ.
ಸಬ್ ಇನ್ಸ್ಪೆಕ್ಟರ್ ರಾಜೇಂದ್ರ ಹಾಗೂ ಹೆಡ್ ಕಾನ್ಸ್ಟೇಬಲ್ ಸುರೇಶ್ ಅವರ ಯೋಜನೆಗೆ ಪೊಲೀಸ್ ಸಿಬ್ಬಂದಿ ಫುಲ್ ಖುಷ್ ಆಗಿದ್ದಾರೆ. (ದಿಗ್ವಿಜಯ ನ್ಯೂಸ್)
ಯಾರೋ ಬಂದು ಸ್ಫೂರ್ತಿ ತುಂಬಲೆಂದು ಕಾಯಬಾರದು: ಸೆಲೆಬ್ರಿಟಿ ಕಾರ್ನರ್ನಲ್ಲಿ ತಾರಾ ಅನೂರಾಧಾ
ಕಾಬೂಲ್ನ ಹೆಣ್ಣುಮಕ್ಕಳ ಶಾಲೆ ಬಳಿ ಬಾಂಬ್ ಸ್ಫೋಟ: ವಿದ್ಯಾರ್ಥಿನಿಯರು ಸೇರಿ 30 ಮಂದಿ ದುರ್ಮರಣ
ಪಿಎಂ ಕೊಟ್ರೂ ಜನರಿಗೆ ಸಿಗ್ತಿಲ್ಲ!: ಧೂಳು ಹಿಡಿದಿವೆ ಕೇಂದ್ರದಿಂದ ಬಂದ ವೆಂಟಿಲೇಟರ್ಗಳು