More

    ಮೋದಿಯನ್ನು ಹೊಗಳಿದ ಗುಲಾಂ ನಬಿ ಆಜಾದ್​ ಪ್ರತಿಕೃತಿ ದಹನ ಮಾಡಿದ ಕಾಂಗ್ರೆಸ್​ ಕಾರ್ಯಕರ್ತರು!

    ಶ್ರೀನಗರ: ಯಾವುದೇ ಪಕ್ಷದವರು ತಮ್ಮ ಪ್ರತಿಪಕ್ಷದ ನಾಯಕನನ್ನು ವಿರೋಧಿಸಿ ಅವರ ಪ್ರತಿಕೃತಿ ಸುಟ್ಟು ಹಾಕುವ ಸುದ್ದಿಗಳನ್ನು ಕೇಳಿರುತ್ತೀರಿ, ನೋಡಿರುತ್ತೀರಿ. ಆದರೆ ಕಾಂಗ್ರೆಸ್​ನ ಹಿರಿಯ ನಾಯಕರೊಬ್ಬರು ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳಿದರು ಎನ್ನುವ ಕಾರಣಕ್ಕೆ ಅವರದ್ದೇ ಪ್ರತಿಕೃತಿಯನ್ನು ಅವರ ಪಕ್ಷದ ಕಾರ್ಯಕರ್ತರೇ ಸುಟ್ಟು ಹಾಕಿರುವ ಘಟನೆ ಜಮ್ಮು ಕಾಶ್ಮೀರದಲ್ಲಿ ನಡೆದಿದೆ.

    ಇತ್ತೀಚೆಗೆ ರಾಜ್ಯ ಸಭೆಯಿಂದ ನಿವೃತ್ತರಾದ ಕಾಂಗ್ರೆಸ್​ನ ಹಿರಿಯ ನಾಯಕ ಗುಲಾಂ ನಬಿ ಆಜಾದ್​ ಅವರ ಪ್ರತಿಕೃತಿಯನ್ನು ಜಮ್ಮು ಕಾಶ್ಮೀರದ ಕಾಂಗ್ರೆಸ್​ ಕಾರ್ಯಕರ್ತರು ದಹಿಸಿ ಆಕ್ರೋಶ ಹೊರಹಾಕಿದ್ದಾರೆ. ಕಳೆದ ಶನಿವಾರದಂದು ಕಾಂಗ್ರೆಸ್​ನ ಜಿ 23 ಸಭೆ ನಡೆದಿತ್ತು. ಅದರಲ್ಲಿ ಕಾಂಗ್ರೆಸ್​ ಶಕ್ತಿ ಕುಂದುತ್ತಿರುವುದಾಗಿ ಹಿರಿಯ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದಾದ ಮಾರನೇ ದಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಗುಲಾಂ ನಬಿ ಅವರು ಮೋದಿಯವರು ನಮ್ಮ ದೇಶದ ಹೆಮ್ಮೆಯ ಚಾಯ್​ವಾಲಾ. ಅವರು ಪ್ರಧಾನಿ ಸ್ಥಾನಕ್ಕೇರಿದರೂ ತಮ್ಮ ಬೇರನ್ನು ಮರೆತಿಲ್ಲ ಎಂದು ಹೊಗಳಿದ್ದರು. ಈ ಹೇಳಿಕೆಯ ಬಗ್ಗೆ ಕಾಂಗ್ರೆಸ್​ ಕಾರ್ಯಕರ್ತರು ಆಕ್ಷೇಪ ತೆಗೆದಿದ್ದಾರೆ. ಆಜಾದ್​ ಅವರನ್ನು ಪಕ್ಷದಿಂದ ಹೊರಹಾಕಬೇಕು ಎಂದು ಆಗ್ರಹಿಸಲಾರಂಭಿಸಿದ್ದಾರೆ.

    ಕಾಂಗ್ರೆಸ್​ ಕಾರ್ಯಕರ್ತರು ಪಕ್ಷದ ಹಿರಿಯ ನಾಯಕನ ಪ್ರತಿಕೃತಿ ದಹಿಸುತ್ತಿರುವ ದೃಶ್ಯ ಮತ್ತು ಅವರ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವ ದೃಶ್ಯದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಪಕ್ಷವು ಅವರನ್ನು ಗೌರವದ ಸ್ಥಾನದಲ್ಲಿ ನೋಡುತ್ತದೆ, ಆದರೆ ಅವರು ಕಾಂಗ್ರೆಸ್​ನ್ನು ಬಿಟ್ಟು ಬಿಜೆಪಿಯನ್ನು ಬೆಂಬಲಿಸಲಾರಂಭಿಸಿದ್ದಾರೆ ಎಂದು ಕಾರ್ಯಕರ್ತರು ದೂರಿರುವುದಾಗಿ ವರದಿಯಾಗಿದೆ. (ಏಜೆನ್ಸೀಸ್​)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    19ರ ಹರೆಯದ ಯುವತಿಗೆ 1800 ಕೋಟಿ ರೂಪಾಯಿಯ ಲಾಟರಿ! ಆದರೆ ಅದರಲ್ಲೂ ಇದೆ ಬಿಗ್​ ಟ್ವಿಸ್ಟ್​!

    ಇಂದಿರಾ ಗಾಂಧಿ ಕುಟುಂಬದ ಕುಡಿಗೆ ಟೀ ಎಸ್ಟೇಟ್​ನಲ್ಲಿ ಕೆಲಸ! ವೈರಲ್​ ಆಯ್ತು ಪ್ರಿಯಾಂಕಾ ವಿಡಿಯೋ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts