ಗಂಗಾವತಿ: ಶಹಾಪುರದ ಟೋಲ್ಗೇಟ್ನಲ್ಲಿ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದವರಿಗೆ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರ ಸಂಘದ ಸದಸ್ಯರು ನಗರದ ಮಿನಿವಿಧಾನ ಸೌಧದ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಯು.ನಾಗರಾಜಗೆ ಮನವಿ ಸಲ್ಲಿಸಿದರು.
ತಾಲೂಕು ಘಟಕದ ಅಧ್ಯಕ್ಷ ಶರಣೇಗೌಡ ಪೊ.ಪಾಟೀಲ್ ಮಾತನಾಡಿ, ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಚಿದಾನಂದರನ್ನು ಶಹಾಪುರದ ಟೋಲ್ಗೇಟ್ನಲ್ಲಿ ಹಲ್ಲೆ ನಡೆಸಿದ್ದು, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಪೊಲೀಸರ ನಿಯಂತ್ರಣಕ್ಕೂ ಬಾರದ ರೌಡಿಗಳ ಗುಂಪು ಮಾರಣಾಂತಿಕ ಹಲ್ಲೆ ನಡೆಸಿದೆ. ಹಲ್ಲೆ ಪ್ರಕರಣದಲ್ಲಿ ಟೋಲ್ಗೇಟ್ ಸಿಬ್ಬಂದಿ ಕೈವಾಡವಿದ್ದು, ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ. ಅವೈಜ್ಞಾನಿಕ ಟೋಲ್ಗೇಟ್ ತೆರವುಗೊಳಿಸುವ ಜತೆಗೆ ಹಲ್ಲೆ ನಡೆಸಿದ ರೌಡಿಗಳಿಗೆ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದರು.
ಪದಾಧಿಕಾರಿಗಳಾದ ರಾಮಣ್ಣ, ಭಾಗ್ಯಶ್ರೀ, ರುದ್ರಗೌಡ, ಈಶ್ವರ ಶ್ರೇಷ್ಠಿ, ಆಂಜನೇಯ, ರಮೇಶ ಗಬ್ಬೂರು, ಶಿವಶಂಕರ ಕಲ್ಮಠ ಇತರರಿದ್ದರು.