ನವದೆಹಲಿ: ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಮಾಜಿ ಮಾಧ್ಯಮ ಸಲಹೆಗಾರ ಸಂಜಯ್ ಬರು ಅವರು ಆನ್ಲೈನ್ ಮದ್ಯಮಾರಾಟಗಾರನೋರ್ವನಿಂದ 24,000 ರೂ.ವಂಚನೆಗೆ ಒಳಗಾಗಿದ್ದಾರೆ.
ಫೇಸ್ಬುಕ್ನಲ್ಲಿ ಲಿಕರ್ ಲಾ ಕೇವ್ ವೈನ್ ಆ್ಯಂಡ್ ಸ್ಪಿರಿಟ್ ಎಂಬ ಹೆಸರಿನಲ್ಲಿ ಅಕೌಂಟ್ ಹೊಂದಿದ್ದ ಮದ್ಯ ಮಾರಾಟಗಾರನೋರ್ವನ ನಂಬರ್ ನೋಡಿದ ಸಂಜಯ್ ಬರು, ಅದಕ್ಕೆ ಕರೆ ಮಾಡಿ, ಆಲ್ಕೋಹಾಲ್ನ್ನು ಹೋಂ ಡಿಲೆವರಿ ನೀಡುವಂತೆ ಕೇಳಿದ್ದರು.
ಅದಕ್ಕೆ ಪ್ರತಿಯಾಗಿ ಆತ 24,000 ರೂ.ನ್ನು ಆನ್ಲೈನ್ನಲ್ಲಿ ಪಾವತಿ ಮಾಡಿ ಎಂದು ಹೇಳಿದ್ದ. ಅದನ್ನು ನಂಬಿದ ಸಂಜಯ್ ಬರು ಹಣ ಕಳಿಸಿದರು. ಆದರೆ 24,000 ರೂ.ವನ್ನು ವರ್ಗಾವಣೆ ಮಾಡುತ್ತಿದ್ದಂತೆ ಆ ಮಾರಾಟಗಾರನ ಫೋನ್ ನಂಬರ್ ಸ್ವಿಚ್ ಆಫ್ ಆಗಿತ್ತು. ತಾನು ಮೋಸಹೋಗಿದ್ದೇನೆಂದು ತಕ್ಷಣ ಅರಿತ ಬರು, ದೆಹಲಿಯ ಹೌಝ್ ಖಾಸ್ ಪೊಲೀಸ್ ಠಾಣೆಯಲ್ಲಿ ಸೈಬರ್ ಕ್ರೈಂ ದೂರು ನೀಡಿದರು. ಇದನ್ನೂ ಓದಿ:ಹರ್ಭಜನ್ ಸಿಂಗ್ ಟ್ರೋಲ್ ಮಾಡಿದ ಯುವಿ..!
ಪೊಲೀಸರು ತನಿಖೆ ನಡೆಸಿ, ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಈತ ಮೂಲತಃ ರಾಜಸ್ಥಾನದ ಭರತ್ಪುರದವನು. ಬ್ಯಾಂಕ್ನಲ್ಲಿ ಹಲವು ನಕಲಿ ಖಾತೆಗಳನ್ನು ತೆರೆದಿದ್ದಾನೆ. ಪೊಲೀಸರ ಕಣ್ಣು ತಪ್ಪಿಸಲು ಆಸ್ಸಾಂ, ಪಂಜಾಬ್, ಮಹಾರಾಷ್ಟ್ರ, ರಾಜಸ್ಥಾನಗಳ ಸಿಮ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯನ್ನು ಉಪಯೋಗಿಸುತ್ತಿದ್ದ ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಅಂತೆಯೇ ಬರು ಅವರು ವರ್ಗಾವಣೆ ಮಾಡಿದ ಹಣ ಆರೋಪಿಯ ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿದ್ದ ಖಾತೆಗೆ ಹೋಗಿತ್ತು. ಆ ಅಕೌಂಟ್ ಅಕಿಬ್ ಜವನ್ ಎಂಬ ಹೆಸರಿನಲ್ಲಿತ್ತು. ರಾಜಸ್ಥಾನದ ಭರತ್ಪುರದಲ್ಲಿರುವ ಮನೆಯಲ್ಲೇ ಅಕಿಬ್ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ‘ನನ್ನನ್ನು ಹುದ್ದೆಯಿಂದ ಕೆಳಗಿಳಿಸಲು ಭಾರತ ಪಿತೂರಿ ನಡೆಸುತ್ತಿದೆ’ ಎಂದು ಆರೋಪಿಸಿದ ನೇಪಾಳ ಪ್ರಧಾನಿ
ತನಿಖೆಯ ವೇಳೆ ಅಕಿಬ್ ಎಲ್ಲ ಸತ್ಯವನ್ನೂ ಬಿಚ್ಚಿಟ್ಟಿದ್ದಾನೆ. ಹೀಗೆ ಹಲವು ಖಾತೆಗಳನ್ನು ನಕಲಿ ಹೆಸರುಗಳಲ್ಲಿ ತೆರೆದಿದ್ದೆ. ಯಾರಾದರೂ ಫೋನ್ ಮಾಡಿದಾಗ ಹಣ ಹಾಕಲು ಅದರಲ್ಲಿ ಯಾವುದಾದರೊಂದು ಖಾತೆಯ ವಿವರ ಕೊಡುತ್ತಿದ್ದೆ. ಅಲ್ಲಿಂದ ನನ್ನ ಸ್ವಂತ ಅಕೌಂಟ್ಗೆ ಟ್ರಾನ್ಸ್ಫರ್ ಮಾಡಿಕೊಳ್ಳುತ್ತಿದ್ದೆ ಎಂದು ತಿಳಿಸಿದ್ದಾನೆ. (ಏಜೆನ್ಸೀಸ್)