More

    ಕರ್ನಾಟಕ ಜಾನಪದ ಅಕಾಡೆಮಿಯ ರಾಜ್ಯ ಮಟ್ಟದ ವಾರ್ಷಿಕ ಗೌರವ ಪ್ರಶಸ್ತಿ ಪಟ್ಟಿ ಬಿಡುಗಡೆ

    ಚಾಮರಾಜನಗರ: ಕರ್ನಾಟಕ ಜಾನಪದ ಅಕಾಡೆಮಿಯ 2020ನೇ ಸಾಲಿನ ರಾಜ್ಯ ಮಟ್ಟದ ವಾರ್ಷಿಕ ಗೌರವ ಪ್ರಶಸ್ತಿ ಮತ್ತು ಜಾನಪದ ತಜ್ಞ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಮಂಜಮ್ಮ ಜೋಗತಿ ಅವರು ಚಾಮರಾಜನಗರದಲ್ಲಿ ಆಯ್ಕೆ ಪಟ್ಟಿ ಪ್ರಕಟಿಸಿದರು. ಇದೇ ಮೊದಲನೇ ಬಾರಿಗೆ ಬೆಂಗಳೂರಿನಿಂದ ಹೊರ ಜಿಲ್ಲೆಯಲ್ಲಿ ಪ್ರಶಸ್ತಿ ಪಟ್ಟಿ ಬಿಡುಗಡೆ ಮಾಡಲಾಗಿದೆ.

    ಇದನ್ನೂ ಓದಿ: ಬೆಂಕಿ ಹಚ್ಚಿಕೊಂಡು ಸಾವಿನ ಮನೆಯ ಕದ ತಟ್ಟಿದ 22ರ ಯುವತಿ! ಆ ರಾತ್ರಿ ಏನಾಯ್ತು?

    ಪ್ರಸಕ್ತ ಸಾಲಿನಲ್ಲಿ ರಾಜ್ಯದ 30 ಜಿಲ್ಲೆಗಳ 30 ಹಿರಿಯ ಜಾನಪದ ಕಲಾವಿದರಿಗೆ ಹಾಗೂ ಇಬ್ಬರು ಜಾನಪದ ತಜ್ಞರಿಗೆ ವಾರ್ಷಿಕ ಗೌರವ ಪ್ರಶಸ್ತಿ ನೀಡಲಾಗುವುದು. ಕಲಾವಿದರಿಗೆ ನೀಡುವ ಗೌರವ ಪ್ರಶಸ್ತಿಯ ಮೊತ್ತ 25,000 ರೂ.ಗಳೊಂದಿಗೆ ಇಬ್ಬರು ಕ್ಷೇತ್ರ ತಜ್ಞರಿಗೆ ತಲಾ 50 ಸಾವಿರ ರೂಗಳ ಪ್ರಶಸ್ತಿ ಮೊತ್ತದ ಜತೆಗೆ ಪುರಸ್ಕೃತರಿಗೆ ಸ್ಮರಣಿಕೆ ನೀಡಿ ಗೌರವಿಸಲಾಗುವುದು.

    ಇದನ್ನೂ ಓದಿ: ಡಿಪ್ಲೋಮಾ, ಬಿಇ ಮಾಡಿದ ಫ್ರೆಷರ್ಸ್‌ಗೆ ಕೆಪಿಟಿಸಿಎಲ್‌ನಲ್ಲಿ ಖಾಲಿ ಇವೆ 200 ಹುದ್ದೆಗಳು

    ಪ್ರಶಸ್ತಿಗೆ ಆಯ್ಕೆಯಾದರವ ಪಟ್ಟಿ ಇಂತಿದೆ:
    ಡಾ.ಜೀ.ಶಂ.ಪ ಪ್ರಶಸ್ತಿ – ಮಂಗಳೂರಿನ ಡಾ.ಗಾಯತ್ರಿ ನಾವಡ (ಜಾನಪದ ತಜ್ಞ ಪ್ರಶಸ್ತಿ )
    ಡಾ.ಗದ್ದಗೀಮಠ ಪ್ರಶಸ್ತಿ –ಕಲಬುರ್ಗಿ ವಿ.ವಿ.ಯ ನಿವೃತ್ತ ಪ್ರಾಧ್ಯಾಪಕ ಡಾ.ಬಸವರಾಜು ಸಬರದ (ಜಾನಪದ ತಜ್ಞ ಪ್ರಶಸ್ತಿ )
    ಜಾನಪದ ಗಾಯನ – ಎಂಕೆ ಸಿದ್ದರಾಜು, ಬೆಂಗಳೂರು
    ಸೋಬಾನೆ ಪದ – ಹೊನ್ನಗಂಗಮ್ಮ, ಬೆಂಗಳೂರು ಗ್ರಾಮಾಂತರ.
    ತಮಟೆ ವಾದನ – ತಿಮ್ಮಯ್ಯ, ರಾಮನಗರ
    ಭಜನೆತತ್ವ – ಕೆ.ಎನ್.ಚೆಂಗಪ್ಪ, ಕೋಲಾರ
    ಕೀಲು ಕುದುರೆ – ನಾರಾಯಣಪ್ಪ, ಚಿಕ್ಕಬಳ್ಳಾಪುರ
    ವೀರಭದ್ರನ ಕುಣಿತ – ಸಿ.ವಿ.ವೀರಣ್ಣ, ತುಮಕೂರು
    ಸೋಬಾನೆ ಹಾಡುಗಾರಿಕೆ – ಭಾಗ್ಯಮ್ಮ, ದಾವಣಗೆರೆ
    ಮದುವೆ ಹಾಡು – ಕೆಂಚಮ್ಮ, ಚಿತ್ರದುರ್ಗ
    ಜಾನಪದ ಹಾಡುಗಾರಿಕೆ – ಕೆ.ಯುವರಾಜು, ಶಿವಮೊಗ್ಗ
    ಕಂಸಾಳೆ ಹಾಡುಗಾರಿಕೆ – ಕುಮಾರಸ್ವಾಮಿ, ಮೈಸೂರು
    ಕೋಲಾಟ – ಭೂಮಿಗೌಡ, ಮಂಡ್ಯ
    ಹಾಡುಗಾರಿಕೆ – ಗ್ಯಾರಂಟಿ ರಾಮಣ್ಣ, ಹಾಸನ
    ಚೌಡಿಕೆ ಪದ – ಭೋಗಪ್ಪ ಎಂ.ಸಿ. ಚಿಕ್ಕಮಗಳೂರು
    ಗೊಂಬೆ ಕುಣಿತ – ಗೋಪಾಲಕೃಷ್ಣ, ದಕ್ಷಿಣ ಕನ್ನಡ
    ಕರಗ ಕೋಲಾಟ – ರಮೇಶ್ ಕಲ್ಮಾಡಿ, ಉಡುಪಿ
    ಬೊಳೋಪಾಟ್ – ಕೆ.ಕೆ.ಪೊನ್ನಪ್ಪ, ಕೊಡಗು
    ಸೋಬಾನೆ ಪದ – ಹೊನ್ನಮ್ಮ, ಚಾಮರಾಜನಗರ
    ತತ್ವಪದ – ಮುತ್ತಪ್ಪ ಅಲ್ಲಪ್ಪ ಸವದಿ
    ತತ್ವಪದ – ಮಲ್ಲೇಶಪ್ಪ ಫಕೀರಪ್ಪ ತಡಸದ, ಧಾರವಾಡ
    ಡೊಳ್ಳಿನ ಹಾಡುಗಾರಿಕೆ – ಸುರೇಶ ರಾಮಚಂದ್ರ ಜೋಶಿ, ವಿಜಯಪುರ
    ತತ್ವಪದ ಮತ್ತು ಭಜನೆ – ಕೃಷ್ಣಪ್ಪ ಮಲ್ಲಪ್ಪ ಬೆಣ್ಣೂರ, ಬಾಗಲಕೋಟೆ
    ಲಾವಣಿ ಪದ – ಸಹದೇವಪ್ಪ ಈರಪ್ಪ ನಡಗೇರಾ, ಉತ್ತರಕನ್ನಡ
    ತತ್ವಪದ – ಬಸವರಾಜ ತಿರುಕಪ್ಪ ಶಿಗ್ಗಾಂವಿ, ಹಾವೇರಿ
    ಪುರವಂತಿಕೆ – ಮುತ್ತಪ್ಪ ರೇವಣಪ್ಪ ರೋಣದ, ಗದಗ
    ಹಲಗೆವಾದನ – ಸಾಯಬಣ್ಣ , ಕಲಬುರ್ಗಿ
    ಚಕ್ರಿಭಜನೆ – ವೈಜಿನಾಥಯ್ಯ, ಬೀದರ್
    ಹಗಲುವೇಷ – ಜಂಬಣ್ಣ, ರಾಯಚೂರು
    ಗೋಂದಲಿಗರು – ತಿಪ್ಪಣ್ಣ ಅಂಬಾಜಿ ಸುಗತೇಕರ, ಕೊಪ್ಪಳ
    ಗೋಂದಳಿ ಪದ – ಗೋಂದಳಿ ರಾಮಪ್ಪ, ಬಳ್ಳಾರಿ
    ಮದುವೆ ಹಾಡು- ಗೋಗಿ ಬಸವಲಿಂಗಮ್ಮ, ಯಾದಗಿರಿ

    ಕರ್ನಾಟಕ ಜಾನಪದ ಅಕಾಡೆಮಿಯ ರಾಜ್ಯ ಮಟ್ಟದ ವಾರ್ಷಿಕ ಗೌರವ ಪ್ರಶಸ್ತಿ ಪಟ್ಟಿ ಬಿಡುಗಡೆ ಕರ್ನಾಟಕ ಜಾನಪದ ಅಕಾಡೆಮಿಯ ರಾಜ್ಯ ಮಟ್ಟದ ವಾರ್ಷಿಕ ಗೌರವ ಪ್ರಶಸ್ತಿ ಪಟ್ಟಿ ಬಿಡುಗಡೆ

    ಅಮ್ಮ ಸತ್ತಿಲ್ಲ, ಮಲಗಿದ್ದಾಳೆ! 20 ದಿನದಿಂದ ಶವವನ್ನೇ ಪೂಜಿಸುತ್ತಿರುವ ಮಕ್ಕಳು! ಕಣ್ಣೀರು ತರಿಸುತ್ತೆ ಈ ಮಕ್ಕಳ ನಂಬಿಕೆ

    54ರ ಫಾಸ್ಟರ್ ಜತೆ 24ರ ಯುವತಿ ಮದುವೆ: ಇಲ್ಲಿದೆ ಎಕ್ಸ್​ಕ್ಲೂಸಿವ್​ ಫೋಟೋಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts