More

    ಸೇವಾ ಮನೋಭಾವದಿಂದ ಮನಸಿಗೆ ನೆಮ್ಮದಿ

    ಶಿಗ್ಗಾಂವಿ: ಉತ್ತಮ ವಾತಾವರಣ ಕಲ್ಪಿಸಿಕೊಂಡು ಜೀವನದಲ್ಲಿ ದಾನ, ಧರ್ಮ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಅಂದಾಗ ಮನಸಿಗೆ ಶಾಂತಿ ಸಿಗುತ್ತದೆ ಎಂದು ಹಿರೇಮಣಕಟ್ಟಿ ಮುರುೇಂದ್ರಮಠದ ಶ್ರೀ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
    ತಾಲೂಕಿನ ಶಾಡಂಬಿ ಗ್ರಾಮದಲ್ಲಿ ಆಯೋಜಿಸಿದ್ದ ಗ್ರಾಮದೇವಿ ನೂತನ ದೇವಸ್ಥಾನ ಕಳಸಾರೋಹಣ, ದೇವಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಲೋಕಾರ್ಪಣೆ ಮತ್ತು ಜಾತ್ರಾ ಮಹೋತ್ಸವದ ನಾಲ್ಕನೇ ದಿನದ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
    ಕಿರಣ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಾತ್ರಾ ಮಹೋತ್ಸವ ಅತ್ಯಂತ ಉತ್ಸಾಹದಿಂದ ನಡೆಯಲು ಶ್ಯಾಡಂಬಿ ಗ್ರಾಮದ ಸಕಲ ಹಿರಿಯರ ಒಗ್ಗಟ್ಟು ಮತ್ತು ಶ್ರಮ ಕಾರಣ. ಎಲ್ಲರೂ ಸುಮಾರು 2 ತಿಂಗಳಿಂದ ಹಗಲಿರುಳು ಜಾತ್ರೆಯ ಯಶಸ್ಸಿಗೆ ಶ್ರಮಿದ್ದಾರೆ ಎಂದರು. ಪ್ರಗತಿಪರ ರೈತರಾದ ಸಂತೋಷ ಕವಲೂರ ಜ್ಯೋತಿ ಬೆಳಗಿಸಿದರು. ಪ್ರಸನ್ನ ಕೃಷ್ಣಾಜಿ ದೇವಕರ ಅಧ್ಯಕ್ಷತೆ ವಹಿಸಿದ್ದರು. ಧರ್ಮಕಾರ್ಯದ ದಾನಿಗಳಾದ ವರುಣಗೌಡ ಪಾಟೀಲ ಹಾಗೂ ಕಿರಣಗೌಡ ಪಾಟೀಲ ಅವನ್ನು ಸನ್ಮಾನಿಸಲಾಯಿತು. ಬಸನಗೌಡ ಬ್ಯಾಹಟ್ಟಿ, ಬಿ.ಎಸ್. ಹಿರೇಮಠ, ಸುಮಂತ ಪಾಟೀಲ, ಶರೀಫ ಮಾಕಪ್ಪನವರ, ಕಿರಣ ಪಾಟೀಲ, ಮಲ್ಲಿಕಾರ್ಜುನ ಅಗಸರ, ರುದ್ರಪ್ಪ ಕಾಳಿ, ಮಲ್ಲಿಕಾರ್ಜುನ ಅಗಸರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts