More

    15-20 ವರ್ಷಗಳಲ್ಲಿ ನಡೆಯಬಹುದು ಅಂದುಕೊಂಡಿದ್ದು ಇಂದೇ ಸಂಭವಿಸಿತು!; ನಟ ಅಲ್ಲು ಅರ್ಜುನ್ ಬದುಕಲ್ಲೊಂದು ವಿಸ್ಮಯ..

    ಬೆಂಗಳೂರು: ಪ್ರತಿಯೊಬ್ಬರೂ ಏನಾದರೂ ಒಂದು ಅಂದುಕೊಂಡಿರುತ್ತಾರೆ. ಮಾತ್ರವಲ್ಲ, ಅಂದುಕೊಂಡಿದ್ದು ಇಷ್ಟು ಸಮಯದಲ್ಲಿ ಸಂಭವಿಸಬಹುದು ಎಂಬ ಕನಸನ್ನು ಕಾಣುತ್ತಾರೆ. ಕೆಲವರ ಬದುಕಲ್ಲಿ ಅಂದುಕೊಂಡಂತೆ ನಡೆಯುವುದೇ ಇಲ್ಲ. ಇನ್ನು ಕೆಲವರ ಜೀವನದಲ್ಲಿ ಅಂದುಕೊಂಡಿದ್ದು ಅಂದುಕೊಂಡಿದ್ದಕ್ಕಿಂತಲೂ ಬೇಗ ಸಂಭವಿಸಿಬಿಡುತ್ತದೆ. ಅಂಥದ್ದೊಂದು ವಿದ್ಯಮಾನ ನಟ ಅಲ್ಲು ಅರ್ಜುನ್​ ಜೀವನದಲ್ಲಿ ಇಂದು ಸಂಭವಿಸಿದೆ.

    ತೆಲುಗು ಚಿತ್ರನಟ ಅಲ್ಲು ಅರ್ಜುನ್​ ಹಾಗೂ ಅವರ ಪುತ್ರಿ ಅರ್ಹ ಇಬ್ಬರೂ ಶೂಟಿಂಗ್ ವೇಳೆ ಭೇಟಿಯಾಗಿದ್ದಾರೆ. ಇಬ್ಬರೂ ಬೇರೆ ಬೇರೆ ಸಿನಿಮಾಗಳ ಶೂಟಿಂಗ್​ನಲ್ಲಿದ್ದು, ಎರಡರ ಚಿತ್ರೀಕರಣವೂ ಒಂದೇ ಸ್ಥಳದಲ್ಲಿ ನಡೆಯುತ್ತಿದ್ದುದರಿಂದ ಕಾಕತಾಳೀಯ ಎಂಬ ರೀತಿಯಲ್ಲಿ ಇಬ್ಬರ ಭೇಟಿ ನಡೆದಿದೆ.

    ಇವತ್ತು ನಾನು ಹಾಗೂ ನನ್ನ ಮಗಳು ಇಬ್ಬರೂ ಒಂದೇ ಸ್ಥಳದಲ್ಲಿ ಬೇರೆ ಬೇರೆ ಸಿನಿಮಾಗಳ ಚಿತ್ರೀಕರಣದಲ್ಲಿದ್ದೆವು. ಈ ಸಂದರ್ಭದಲ್ಲಿ ಅವಳ ಸೆಟ್​ಗೆ ಹೋಗಿ ನಾನು ಭೇಟಿಯಾದೆ. ಬಹುಶಃ ಇಂಥದ್ದೊಂದು ಭೇಟಿ ಇನ್ನು 15-20 ವರ್ಷಗಳಲ್ಲಿ ಸಂಭವಿಸಬಹುದು ಅಂತ ಅಂದುಕೊಂಡಿದ್ದೆ. ಆದರೆ ಅದು ಅತಿಬೇಗ ಆಗಿಹೋಗಿದೆ. ಪುಷ್ಪ ಮೀಟ್​ ಭರತ ಇನ್​​ ಶಾಕುಂತಲಂ, ಎಂತಹ ಕಾಕತಾಳೀಯ ಎಂದು ಅವರು ಹೇಳಿಕೊಂಡಿದ್ದಾರೆ. ಅಂದಹಾಗೆ ಅಲ್ಲು ಅರ್ಜುನ್​ ಪುಷ್ಪ ಚಿತ್ರದಲ್ಲಿ ಹಾಗೂ ಅವರ ಪುತ್ರಿ ಶಾಕುಂತಲಂ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. (ಏಜೆನ್ಸೀಸ್​)

    ‘ವಿಜಯಾನಂದ’ ಚಿತ್ರಕ್ಕೆ ಕಲಾವಿದರ ಹುಡುಕಾಟ: 7ರಿಂದ 70 ವರ್ಷದೊಳಗಿನವರಿಗೆ ಅವಕಾಶ…

    ಇದು ನರೇಂದ್ರ ಮೋದಿಯವರ ಜಮಾನ..: ಗೃಹಸಚಿವರಾದ ಬೆನ್ನಿಗೇ ಗುಡುಗಿದ ಆರಗ ಜ್ಞಾನೇಂದ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts