ಕಲಬುರಗಿ: ಸಾಲದ ಬಾಧೆ ತಾಳದೇ ರವಿಂದ್ರ ಭೋಗಶೆಟ್ಟಿ (38) ಎನ್ನುವ ರೈತರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಲಬುರಗಿ ತಾಲೂಕಿನ ಬೋಳೇವಾಡ ಗ್ರಾಮದ ರೈತ ರವೀಂದ್ರ, ತಮ್ಮದೇ ಹೊಲದಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇವರು ಈ ಹಿಂದೆ ಪಂಜಾಬ್ ನ್ಯಾಷನಲ್ ಬ್ಯಾಂಕ್, ಯುನಿಯನ್ ಬ್ಯಾಂಕ್ನಲ್ಲಿ 10 ಲಕ್ಷ ರೂ. ಹೆಚ್ಚು ಸಾಲ ಮಾಡಿದ್ದರು. ಈ ಬಾರಿ ನೆಟೆ ರೋಗದಿಂದ ತೊಗರಿ ಹಾನಿಗೀಡಾದ ನಂತರ ಇವರು ಕಂಗಾಲಾಗಿದ್ದರು,
ಮಾಡಿದ ಸಾಲ ತೀರಿಸುವ ದಾರಿ ಕಾಣದೇ ಬೇರೆ ವಿಧಿಯಿಲ್ಲ ಎಂದುಕೊಂಡು ಕಳೆ ನಿಯಂತ್ರಣಕ್ಕೆ ಸಿಂಪಡಣೆಗಾಗಿ ತಂದಿದ್ದ ಕ್ರಿಮಿನಾಷಕವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿಯ ವಿವಿ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.