ಉತ್ತರಾಖಂಡ:ಅಪ್ಪು ನಮನ್ನು ಅಗಲಿ 2 ತಿಂಗಳು ಕಳೆದಿವೆ. ಆದರೆ, ‘ಜೊತೆಗಿರದ ಜೀವ ಎಂದಿಗಿಂತ ಜೀವಂತ‘ ಎಂಬಂತೆ ಪುನೀತ್ ಅವರ ಕುಟುಂಬ, ಸ್ನೇಹಿತರು, ಅಭಿಮಾನಿಗಳು ಅಂತ ಎಲ್ಲರ ಮನದಲ್ಲಿ ಇಂದಿಗೂ ಜೀವಂತವಿದ್ದಾರೆ. ಇನ್ನು, ಅಪ್ಪು ಅಗಲಿಕೆಯ ನಂತರ ಹಲವರು ಅವರಿಗೆ ಬೇರೆ–ಬೇರೆ ವಿಶೇಷ ರೀತಿಗಳಲ್ಲಿ ನಮನ ಸಲ್ಲಿಸಿದ್ದಾರೆ. ಬೈಕ್ ರೈಡ್, ಸೈಕಲ್ ರೈಡ್, ಯಾತ್ರೆಗಳು ಎಂಬಂತೆ ಹಲವು ರೀತಿಗಳಲ್ಲಿ ನಮನ ಸಲ್ಲಿಸಿದ್ದಾರೆ. ಆದರೆ, ಇಲ್ಲೊಂದು ಅಪ್ಪು ಅಭಿಮಾನಿ ಬಳಗ ಸಮುದ್ರ ಮಟ್ಟದಿಂದ 12,500 ಅಡಿ ಎತ್ತರದಲ್ಲಿ ಪುನೀತ್ ರಾಜ್ಕುಮಾರ್ಗೆ ನಮನ ಸಲ್ಲಿಸಿದ್ದಾರೆ.
ಹೌದು, ಪರ್ವತ ಚಾರಣಿಗರಾದ ಅಪ್ಪು ಅಭಿಮಾನಿಗಳ ಗುಂಪೊಂದು ‘ಬ್ರಹ್ಮಟಲಶಿಖರ, ಉತ್ತರಾಖಂಡ‘ ತಲುಪಿದ್ದು, ಅಲ್ಲಿ ಅಪ್ಪು ಅವರ ಒಂದು ದೊಡ್ಡ ಬ್ಯಾನರ್ ಹಿಡಿದು ಪವರ್ ಸ್ಟಾರ್ಗೆ ವಿಶೇಷ ನಮನ ಸಲ್ಲಿಸಿದ್ದಾರೆ. 9 ಮಂದಿಯ ಈ ಅಪ್ಪು ಅಭಿಮಾನಿಗಳ ಗುಂಪು 12,500 ಅಡಿ ಎತ್ತರದಲ್ಲಿರುವ ಬ್ರಹ್ಮಟಲಶಿಖರದಲ್ಲಿ ಅಪ್ಪುಗೆ ನಮನ ಸಲ್ಲಿಸಿರುವುದು, ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಜೊತೆಗೆ, ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಮತ್ತು ಫೋಟೋ ಸಿಕ್ಕಾಟ್ಟೆ ವೈರಲ್ ಆಗುತ್ತಿದೆ. ಫೇಸ್ಬುಕ್ನಲ್ಲಿ ಅಪ್ಪು ಅಭಿಮಾನಿಗಳ ಪೇಜ್ ಒಂದು ಈ ಫೋಟೋ ಹಂಚಿಕೊಂಡಿದ್ದು, ಆ ಪೋಸ್ಟ್ಗೆ 20,000ಕ್ಕೂ ಅಧಿಕ ಲೈಕ್ಸ್ಗಳು ಪಡೆದಿದೆ. ಇಂತಹ ಸುದ್ದಿಗಳನ್ನು ಕಂಡರೆ ಅಪ್ಪು ತಮ್ಮ ಪ್ರೀತಿಯ ಅಭಿಮಾನಿಗಳ ಎದೆಯಲ್ಲಿ ಅಜರಾಮರ ಎನಿಸುತ್ತೆ.