ಬಾಗಲಕೋಟೆ: ಕರ್ನಾಟಕದಾದ್ಯಂತ ಭಾರೀ ಮಳೆಯಾಗುತ್ತಿದ್ದು, ಹಲವು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದೆ. ಪ್ರವಾಹ ಬಂದು ಊರಲೆಲ್ಲಾ ನೀರು ನಿಂತಿದ್ದರೂ ಹೆದರದ ಜನರು ಊರಿನ ದೇವರ ಜಾತ್ರೆ ಮಾಡಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಢವಳೇಶ್ವರ ಗ್ರಾಮದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಘಟಪ್ರಭಾ ನದಿ ಅಬ್ಬರ ಹೆಚ್ಚಾಗಿದ್ದು, ಢವಳೇಶ್ವರ ಗ್ರಾಮದ ಹಲವು ಭಾಗ ಜಲಾವೃತವಾಗಿದೆ. ಜಲಾವೃತಗೊಂಡಿರುವ ಮನೆಗಳ ಸದಸ್ಯರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಊರಿನಲ್ಲಿ ಪ್ರವಾಹ ಭೀತಿ ಹೆಚ್ಚಿರುವ ಈ ಸಮಯದಲ್ಲಿ ಗ್ರಾಮಸ್ಥರೆಲ್ಲ ಸೇರಿಕೊಂಡು ಜಾತ್ರೆ ಮಾಡಿದ್ದಾರೆ. ಗ್ರಾಮದ ದೇವಿಯಾಗಿರುವ ದ್ಯಾಮವ್ವ ದೇವಿ ಜಾತ್ರೆ ನಡೆಸಲಾಗಿದೆ. ಜನರು ನೀರಿನಲ್ಲೇ ನಿಂತು ದೇವಿ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿ ಮನೆಗೆ ತೆರಳುತ್ತಿದ್ದಾರೆ.
ಟೋಕಿಯೊ ಒಲಿಂಪಿಕ್ಸ್ ಪದಕ ಪಟ್ಟಿಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ ಗೊತ್ತೇ?
ಕ್ಲಬ್ಹೌಸ್ನಿಂದ ಲಕ್ಷಾಂತರ ಜನರ ಡೇಟಾ ಲೀಕ್?! ಸಂಸ್ಥೆ ಕೊಟ್ಟ ಉತ್ತರವೇನು?