More

    ಪ್ರವಾಹವಿದ್ದರೂ ಜಾತ್ರೆ ಬಿಡದ ಜನರು! ನಡು ನೀರಲ್ಲೇ ನಿಂತು ಪ್ರಸಾದ ಸೇವನೆ!

    ಬಾಗಲಕೋಟೆ: ಕರ್ನಾಟಕದಾದ್ಯಂತ ಭಾರೀ ಮಳೆಯಾಗುತ್ತಿದ್ದು, ಹಲವು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದೆ. ಪ್ರವಾಹ ಬಂದು ಊರಲೆಲ್ಲಾ ನೀರು ನಿಂತಿದ್ದರೂ ಹೆದರದ ಜನರು ಊರಿನ ದೇವರ ಜಾತ್ರೆ ಮಾಡಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

    ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಢವಳೇಶ್ವರ ಗ್ರಾಮದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಘಟಪ್ರಭಾ ನದಿ ಅಬ್ಬರ ಹೆಚ್ಚಾಗಿದ್ದು, ಢವಳೇಶ್ವರ ಗ್ರಾಮದ ಹಲವು ಭಾಗ ಜಲಾವೃತವಾಗಿದೆ. ಜಲಾವೃತಗೊಂಡಿರುವ ಮನೆಗಳ ಸದಸ್ಯರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

    ಊರಿನಲ್ಲಿ ಪ್ರವಾಹ ಭೀತಿ ಹೆಚ್ಚಿರುವ ಈ ಸಮಯದಲ್ಲಿ ಗ್ರಾಮಸ್ಥರೆಲ್ಲ ಸೇರಿಕೊಂಡು ಜಾತ್ರೆ ಮಾಡಿದ್ದಾರೆ. ಗ್ರಾಮದ ದೇವಿಯಾಗಿರುವ ದ್ಯಾಮವ್ವ ದೇವಿ ಜಾತ್ರೆ ನಡೆಸಲಾಗಿದೆ. ಜನರು ನೀರಿನಲ್ಲೇ ನಿಂತು ದೇವಿ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿ ಮನೆಗೆ ತೆರಳುತ್ತಿದ್ದಾರೆ.

    ಟೋಕಿಯೊ ಒಲಿಂಪಿಕ್ಸ್ ಪದಕ ಪಟ್ಟಿಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ ಗೊತ್ತೇ?

    ಕ್ಲಬ್​ಹೌಸ್​ನಿಂದ ಲಕ್ಷಾಂತರ ಜನರ ಡೇಟಾ ಲೀಕ್?! ಸಂಸ್ಥೆ ಕೊಟ್ಟ ಉತ್ತರವೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts