More

    ಮಾಜಿ ಯೋಧರು ಸಮಾಜಸೇವೆ ಮಾಡಲಿ

    ಬೆಳಗಾವಿ: ಮಾಜಿ ಸೈನಿಕರು ಸ್ವಾನುಭವ, ಸೇವಾ ಮನೋಭಾವದ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

    ತಾಲೂಕಿನ ಕಂಗ್ರಾಳಿ ಬಿ.ಕೆ. ಗ್ರಾಮದಲ್ಲಿ ಭಾನುವಾರ ಮಾಜಿ ಸೈನಿಕರ ಅಭಿವೃದ್ಧಿ ಸೇವಾ ಸಂಘ ಉದ್ಘಾಟಿಸಿ ಅವರು ಮಾತನಾಡಿದರು. ಬೆಳಗಾವಿ ಜಿಲ್ಲೆಯಲ್ಲಿ ಅದರಲ್ಲೂ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸೈನಿಕರು, ಮಾಜಿ ಸೈನಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದು ನಮಗೆಲ್ಲ ಹೆಮ್ಮೆಯ ಸಂಗತಿ.
    ಬಹಳ ದೊಡ್ಡ ತ್ಯಾಗ ಮಾಡಿ ದೇಶಸೇವೆಯಲ್ಲಿ ತೊಡಗಿಸಿಕೊಂಡವರು ನಿವೃತ್ತರಾಗಿ ಈಗ ಸಂಘಟನೆ ಮಾಡಿಕೊಂಡಿದ್ದೀರಿ. ನಿಮಗೆಲ್ಲ ಸಹಕಾರ
    ಕೊಡಲು ಸಿದ್ಧಳಿದ್ದೇನೆ. ಜತೆಗೆ ನೀವು ಸೇವೆಯ ಮೂಲಕ ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡಲು ಸಾಧ್ಯವಿದೆ ಎಂದರು.

    ದೇಶಕ್ಕಾಗಿ ನೀವು ಮಾಡಿರುವ ಕೆಲಸವನ್ನು ಕೇವಲ ಮಾತಿನಿಂದ ಹೇಳಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ನಾವೆಲ್ಲ ಒಟ್ಟಾಗಿ ಕೆಲಸ ಮಾಡೋಣ, ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರೋಣ ಎಂದರು. ಮಾಜಿ ಸೈನಿಕರ ಅಭಿವೃದ್ಧಿ ಸಂಘದ ಅಧ್ಯಕ್ಷ ರಾಮಾ ತಾರಿಹಾಳ್ಕರ್, ಉಪಾಧ್ಯಕ್ಷ ಅರುಣ ಪಾಟೀಲ, ಗ್ರಾಪಂ ಅಧ್ಯಕ್ಷೆ ಕೌಸರ್ ಜಹಾನ್ ಸೈಯದ್, ಕಾಕತಿ ಸಿಪಿಐ ಉಮೇಶ, ಬಸಪ್ಪ ತಳವಾರ, ಅರ್ಚನಾ ಪಾಟೀಲ, ಸಂಧ್ಯಾ ಚೌಗುಲೆ, ಪಿಡಿಒ ಗೋವಿಂದ ರಂಗಪ್ಪಗೋಳ, ಹಿಂಡಾಲ್ಕೊ ಸಿನಿಯರ್ ಮ್ಯಾನೇಜರ್ ದಿನೇಶ್ ನಾಯ್ಕ್, ಗ್ರಾಪಂ ಸಿಬ್ಬಂದಿ ದಯಾನಂದ ಕುಗಜಿ, ಗ್ರಾಪಂ ಕಾರ್ಯದರ್ಶಿ ಸಿ.ಕೆ.ತಳವಾರ, ಗ್ರಾಪಂ ಸದಸ್ಯರು, ಮಾಜಿ ಸೈನಿಕ ಸೇವಾ ಸಂಘದ ಎಲ್ಲ ಸದಸ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts