ಲಾಹೋರ್: ಭೂಗತ ದೊರೆ ಹಾಗೂ ತನ್ನ ಸಂಬಂಧಿಯೂ ಆಗಿರುವ ದಾವೂದ್ ಇಬ್ರಾಹಿಂನನ್ನು ಪಾಕಿಸ್ತಾನದ ಮಾಜಿ ಕ್ರಿಕೆಟರ್ ಜಾವೇದ್ ಮಿಯಾಂದಾದ್ ಮನಸಾರೆ ಕೊಂಡಾಡಿದ್ದಾರೆ. ಮುಸ್ಲಿಮರಿಗಾಗಿ ದಾವೂದ್ ಸಾಕಷ್ಟು ಸೇವೆ ಸಲ್ಲಿಸಿದ್ದಾನೆ ಎಂದು ಮಿಯಾಂದಾದ್ ಹೇಳಿದ್ದಾರೆ.
ಪಾಕ್ ಪತ್ರಕರ್ತ ಹಸನ್ ನಿಸಾರ್ ಅವರ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ದಾವೂದ್ ಬಗ್ಗೆ ಮಿಯಾಂದಾದ್ ಮಾತನಾಡಿದ್ದಾರೆ. ದಾವೂದ್ ಮಗಳನ್ನು ಮಿಯಾಂದಾದ್ ಅವರು ತಮ್ಮ ಸೊಸೆಯನ್ನಾಗಿ ಮಾಡಿಕೊಂಡಿದ್ದಾರೆ. ನಾನು ದಾವೂದ್ ಸಂಬಂಧಿ ಎಂದು ಹೇಳಿಕೊಳ್ಳಲು ತುಂಬಾ ಹೆಮ್ಮೆಯಾಗುತ್ತದೆ ಎಂದು ಮಿಯಾಂದಾದ್ ಹೇಳಿದ್ದಾರೆ.
ಬಹಳ ಸಮಯದಿಂದಲೂ ನನಗೆ ದಾವೂದ್ ಬಗ್ಗೆ ಗೊತ್ತಿದೆ. ಆತನ ಮಗಳು ನನ್ನ ಪುತ್ರನನ್ನು ಮದುವೆಯಾಗಿರುವುದು ನನಗೆ ದೊರೆತ ಗೌರವ. ದಾವೂದ್ ಮಗಳು ಸುಶಿಕ್ಷಿತಳು. ಕಾನ್ವೆಂಟ್ ಮತ್ತು ಯೂನಿವರ್ಸಿಯಲ್ಲಿ ಓದಿದ್ದಾಳೆ ಎಂದು ಮಿಯಾಂದಾದ್ ತಿಳಿಸಿದರು.
ದಾವೂದ್ ಕುಟುಂಬದ ಬಗ್ಗೆ ಜನರಿಗೆ ‘ತಪ್ಪು ಅನಿಸಿಕೆ’ ಇದೆ. ಆದರೆ, ನಿಜವಾದ ದಾವೂದ್ ಇಬ್ರಾಹಿಂನನ್ನು ಅರ್ಥಮಾಡಿಕೊಳ್ಳುವುದು ಸುಲಭವಲ್ಲ. ಮುಸ್ಲಿಮರಿಗೆ ದಾವೂದ್ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಇದು ಕೊನೆಯವರೆಗೂ ನೆನಪಿನಲ್ಲಿ ಉಳಿಯಲಿದೆ ಎಂದು ಮಿಯಾಂದಾದ್ ಹೊಗಳಿದರು.
ಮಿಯಾಂದಾದ್ನ ಮಗ ಜುನೈದ್, ದಾವೂದ್ನ ಮಗಳು ಮಹ್ರುಖ್ಳನ್ನು ಮದುವೆಯಾಗಿದ್ದಾನೆ. 2005ರಲ್ಲಿ ದುಬೈನಲ್ಲಿ ಭಾರಿ ಭದ್ರತೆಯ ನಡುವೆ ಶಾಸ್ತ್ರೋಕ್ತವಾಗಿ ವಿವಾಹ ಸಮಾರಂಭವನ್ನು ನೆರವೇರಿಸಲಾಯಿತು.
ಅಂದಹಾಗೆ ದಾವೂದ್ ಇಬ್ರಾಹಿಂ ಭಾರತಕ್ಕೆ ಬೇಕಿರುವ ಮೋಸ್ಟ್ ವಾಂಟೆಡ್ ಭಯೋತ್ಪಾದಕ. 1993 ರಲ್ಲಿ ಮುಂಬೈನಲ್ಲಿ ಸುಮಾರು 260 ಜೀವಗಳನ್ನು ಬಲಿ ಪಡೆದ ಸರಣಿ ಸ್ಫೋಟದ ಮಾಸ್ಟರ್ ಮೈಂಡ್ ಈತ. ಭಾರತದಲ್ಲಿ ಸಾಕಷ್ಟು ಸಕ್ರಿಯವಾಗಿರುವ ಡಿ-ಕಂಪನಿ ಎಂಬ ಭಯಾನಕ ಕ್ರಿಮಿನಲ್ ಸಿಂಡಿಕೇಟ್ ಅನ್ನು ನಡೆಸುತ್ತಿದ್ದಾನೆ. ಸಂಘಟಿತ ಅಪರಾಧ ಮತ್ತು ನಕಲಿ ಸೃಷ್ಟಿ ಹಿನ್ನೆಲೆ ಇಂಟರ್ಪೋಲ್ನ ವಾಂಟೆಡ್ ಕ್ರಿಮಿನಲ್ಗಳ ಪಟ್ಟಿಯಲ್ಲಿ ದಾವೂದ್ ಹೆಸರು ಸಹ ಉಲ್ಲೇಖಿಸಲಾಗಿದೆ.
ಕಳೆದ ವರ್ಷ ಡಿಸೆಂಬರ್ನಲ್ಲಿ ದಾವೂದ್ ಇಬ್ರಾಹಿಂ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಪಾಕಿಸ್ತಾನದ ಕರಾಚಿಯಲ್ಲಿರುವ ಆಸ್ಪತ್ರೆಗೆ ದಾಖಲಾಗಿದ್ದ ಎಂಬ ವರದಿಗಳಾದವು. ವಿಷ ಹಾಕಿ ಕೊಲೆ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿತ್ತು. ಆದರೆ ಆ ವರದಿಗಳು ಈವರೆಗೂ ದೃಢಪಟ್ಟಿಲ್ಲ. (ಏಜೆನ್ಸೀಸ್)
ನಮ್ಮ ಹೀರೋನೇ ಗ್ರೇಟ್ ಅಂತಾ ಕಿತ್ತಾಡೋದಲ್ಲ, ಅಭಿಮಾನ ಅಂದ್ರೆ ಹೀಗಿರಬೇಕು! ಗಂಗೂಲಿ ಅಭಿಮಾನಿಯ ರೋಚಕ ಕತೆ
ಇಳಿ ವಯಸ್ಸಿನಲ್ಲಿ ಗಂಡು ಮಗು ಜನನ: ಸಿಧು ಮೂಸೆವಾಲ ತಂದೆ-ತಾಯಿಗೆ ಪಂಜಾಬ್ ಸರ್ಕಾರದಿಂದ ಕಿರುಕುಳ