ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರ ಚುನಾವಣಾ ಆಯೋಗ ಮದ್ರಾಸ್ ಹೈಕೋರ್ಟ್ ವಿರುದ್ಧ ಸುಪ್ರೀಂಕೋರ್ಟ್ನಲ್ಲಿ ದೂರು ದಾಖಲಿಸಿದೆ. ಚುನಾವಣಾ ಆಯೋಗದ ಈ ನಡೆ ಆಶ್ಚರ್ಯ ತರಿಸಿದೆ.
ಕೋವಿಡ್ ಎರಡನೇ ಅಲೆಯಿದ್ದರೂ ತಮಿಳುನಾಡಿನಲ್ಲಿ ಚುನಾವಣಾ ರಾಲಿ, ಸಮಾವೇಶಗಳನ್ನು ತಡೆಯದ ಚುನಾವಣಾ ಆಯೋಗದ ಮೇಲೆ ಕೊಲೆ ಪ್ರಕರಣವನ್ನು ದಾಖಲಿಸಬೇಕು ಎಂದು ಮದ್ರಾಸ್ ಹೈಕೋರ್ಟ್ ಕಳೆದ ಏಪ್ರಿಲ್ 26 ರಂದು ಪಿಐಎಲ್ ವಿಚಾರಣೆ ವೇಳೆ ಹೇಳಿತ್ತು.
ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಸುಪ್ರೀಂಗೆ ದೂರು ನೀಡಿರುವ ಚುನಾವಣಾ ಆಯೋಗ, ಒಂದು ಸ್ವಾಯತ್ತ ಸಂಸ್ಥೆ ಮತ್ತೊಂದು ಸ್ವಾಯತ್ತ ಸಂಸ್ಥೆ ಮೇಲೆ ಯಾವುದೇ ಪೂರ್ವಾಪರ ವಿಚಾರಿಸದೇ ಅವಮಾನಕರವಾದ ಹಾಗೂ ಅವಹೇಳನಕಾರಿಯಾದ ಕಮೆಂಟ್ ಮಾಡಿದೆ. ಈ ಬಗ್ಗೆ ಪರಿಶೀಲಿಸಬೇಕು ಎಂದು ಮನವಿ ಸಲ್ಲಿಸಿದೆ.
ಮೇ 2 ರಂದು ಭಾನುವಾರ ನಾಲ್ಕು ರಾಜ್ಯಗಳಿಗೆ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳಲಿದೆ. ಫಲಿತಾಂಶದ ಬಳಿಕ ಯಾವುದೇ ರೀತಿಯ ವಿಜಯೋತ್ಸವಕ್ಕೆ ಅವಕಾಶ ಇಲ್ಲ ಎಂದು ಚುನಾವಣಾ ಆಯೋಗ ಆದೇಶ ಮಾಡಿದೆ.
ದಾಂಪತ್ಯ ಸುಖವಾಗಿರಬೇಕೆ? ಈ ನಿಯಮ ಪಾಲಿಸಿ ಎಂದು ಪತಿಯ ಜತೆ ಡಾನ್ಸ್ ಮಾಡ್ತಾ ಸನ್ನಿ ಲಿಯೋನ್ ಕೊಟ್ರು ಟಿಪ್ಸ್…