ಕಲಬುರಗಿ: ಹಾಡಹಗಲೇ ನಕಲಿ ಗನ್ ಹಿಡಿದು ಐಸಿಐಸಿಐ ಬ್ಯಾಂಕ್ಗೆ ಎಂಟ್ರಿ ಕೊಟ್ಟ ವ್ಯಕ್ತಿಯೊಬ್ಬ ಕೆಲಕಾಲ ಆತಂಕ ಸೃಷ್ಟಿಸಿದ್ದ ಘಟನೆ ನಗರದಲ್ಲಿ ಶನಿವಾರ ಸಂಭವಿಸಿದೆ.
ಮದ್ಯದ ಅಮಲಿನಲ್ಲಿ ಗಂಜ್ನ ಐಸಿಐಸಿಐ ಬ್ಯಾಂಕ್ ಒಳಗೆ ನುಗ್ಗಿದ ಕುಡುಕನೊಬ್ಬ ಕುರ್ಚಿ ರಿಪೇರಿ ಮಾಡುವ ನೆಪದಲ್ಲಿ ಬ್ಯಾಂಕ್ನ ಡೆಪ್ಯೂಟಿ ಬ್ರ್ಯಾಂಚ್ ಮ್ಯಾನೇಜರ್ ಚೇಂಬರ್ ಹೊಕ್ಕಿದ್ದ.
ಇದನ್ನೂ ಓದಿರಿ ಪತ್ನಿ ಮನೆಗೆ ಹೋಗಿ ವಾಪಸ್ ಬರುತ್ತಿದ್ದ ಪತಿ ರಸ್ತೆಯಲ್ಲೇ ಸುಟ್ಟುಕರಕಲಾದ!
ಬ್ಯಾಂಕ್ನ ಡಿಬಿಎಂ, ತಾವು ಯಾವುದೇ ಚೇರ್ ರಿಪೇರಿ ಇದೆ ಅಂತಾ ಹೇಳಿಲ್ಲ. ಆದರೂ ನೀವೇಕೆ ಬಂದ್ರಿ? ನಿಜಕ್ಕೂ ನೀನ್ಯಾರು ಎಂದು ಪ್ರಶ್ನಿಸಿದ್ದಾರೆ. ಕೂಡಲೇ ಆತನ ಬಗ್ಗೆ ಅನುಮಾನ ಬಂದು ಬ್ರ್ಯಾಂಚ್ ಮ್ಯಾನೇಜರ್ಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಬ್ಯಾಂಕ್ ಒಳಗೆ ಅಪರಿಚಿತ ನುಗ್ಗಿರುವ ಬಗ್ಗೆ ತಕ್ಷಣ ಬ್ರ್ಯಾಂಚ್ ಮ್ಯಾನೇಜರ್ರಿಂದ ಪೊಲೀಸರಿಗೆ ಮಾಹಿತಿ ಹೋಗಿದ್ದು, ಸ್ಥಳಕ್ಕೆ ಬಂದ ಪೊಲೀಸರು ದುಷ್ಕರ್ಮಿಗೆ ಲಾಠಿ ರುಚಿ ತೋರಿಸಿದರು.
ನಕಲಿ ಗನ್ ಹಿಡಿದು ಬ್ಯಾಂಕ್ಗೆ ಬಂದ ವ್ಯಕ್ತಿಯನ್ನು ಕಲಬುರಗಿಯ ಮಿಜಗುರಿ ನಿವಾಸಿ ಸುಲ್ತಾನ್ ಎಂದು ಗೊತ್ತಾಗಿದೆ. ‘ಎಣ್ಣೆ’ನಶೆಯಲ್ಲಿ ಬ್ಯಾಂಕ್ಗೆ ನುಗ್ಗಿದ್ದ ಹಿನ್ನೆಲೆಯಲ್ಲಿ ಬ್ಯಾಂಕ್ ಸಿಬ್ಬಂದಿ ದೂರು ದಾಖಲಿಸಿಲ್ಲ. ಆದರೆ, ಸುಲ್ತಾನ್ ಮನೆಯವರಿಂದ ಚೌಕ್ ಪೊಲೀಸರು ಮುಚ್ಚಳಿಕೆ ಬರೆಸಿಕೊಂಡು ಆತನನ್ನು ಬಿಡುಗಡೆ ಮಾಡಿದ್ದಾರೆ.
ಕಾಂಗ್ರೆಸ್ ವಿರುದ್ಧ ಅಖಂಡ ಶ್ರೀನಿವಾಸ್ ಮೂರ್ತಿ ಆಕ್ರೋಶ… ಸುಟ್ಟಿರೋದು ನನ್ನ ಮನೆ, ಡಿಕೆಶಿಯದ್ದಲ್ಲ!