ಸುಬ್ರಹ್ಮಣ್ಯ: ಪತ್ನಿ ಮನೆಗೆ ಹೋಗಿ ವಾಪಸ್ ಬೈಕ್ನಲ್ಲಿ ಬರುತ್ತಿದ್ದ ಪತಿ ಮಾರ್ಗಮಧ್ಯೆ ಸುಟ್ಟುಕರಕಲಾದ ದುರ್ಘಟನೆ ನಿಂತಿಕಲ್ ಸಮೀಪದ ಕಲ್ಲೇರಿನಲ್ಲಿ ಮಂಗಳವಾರ ಸಂಭವಿಸಿದೆ.
ಮಂಡೆಕೋಲು ಗ್ರಾಮದ ಮೈತ್ತಡ್ಕ ತಿಮ್ಮಪ್ಪ ಗೌಡರ ಪುತ್ರ ಉಮೇಶ್(45) ಮೃತರು. ಪತ್ನಿಯ ಮನೆ ಬಳ್ಪದ ಆಲ್ಕಬೆಗೆ ಹೋಗಿದ್ದ ಉಮೇಶ್, ಮಂಗಳವಾರ ಮುಂಜಾನೆ ಸ್ವಗ್ರಾಮಕ್ಕೆ ವಾಪಸ್ ಆಗುತ್ತಿದ್ದರು. ಈ ವೇಳೆ ವಿದ್ಯುತ್ ತಂತಿಯ ರೂಪದಲ್ಲಿ ಉಮೇಶ್ಗಾಗಿ ಕಾಯುತ್ತಿದ್ದ ಮೃತ್ಯು ಅವರ ಪ್ರಾಣವನ್ನೇ ತೆಗೆದಿದೆ.
ಇದನ್ನೂ ಓದಿರಿ ಹಸುಗೂಸನ್ನು ಬಾಳೆಎಲೆಯಲ್ಲಿ ಸುತ್ತಿ ಹೋಟೆಲ್ನ ಕಸದ ತೊಟ್ಟಿಯಲ್ಲಿ ಎಸೆದರು!
ಕಲ್ಲೇರಿ ಎಂಬಲ್ಲಿ ವಿದ್ಯುತ್ ತಂತಿ ರಸ್ತೆಗೆ ತಾಗಿತ್ತು. ಇದನ್ನರಿಯದ ಉಮೇಶ್ ಬೈಕ್ತಂತಿಯನ್ನು ಸ್ಪರ್ಶಿಸುತ್ತಿದ್ದಂತೆ ಸಜೀವ ದಹನವಾಗಿದ್ದಾರೆ. ಬೈಕ್ ಕೂಡ ಸುಟ್ಟುಕರಕಲಾಗಿದೆ. ಉಮೇಶ್ ವೃತ್ತಿಯಲ್ಲಿ ಎಲೆಕ್ಟ್ರೀಷಿಯನ್ ಆಗಿದ್ದರು. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.