ನವದೆಹಲಿ: ರಸ್ತೆಯಲ್ಲಿ ತನ್ನ ಕಾರಿಗೆ ದಾರಿ ಬಿಡಲಿಲ್ಲ ಎಂಬ ಕಾರಣಕ್ಕೆ ಚಾಲಕನೊಬ್ಬ ಮುಂದಿದ್ದ ಕಾರಿನ ಮೇಲೆ ಗುಂಡು ಹಾರಿಸಿರುವ ಪ್ರಸಂಗ ವರದಿಯಾಗಿದೆ. ದೆಹಲಿಯ ಕಂಟೋನ್ಮೆಂಟ್ ಪ್ರದೇಶದಲ್ಲಿ ನಡೆದ ಈ ಘಟನೆಯಲ್ಲಿ ಯುವಕನೊಬ್ಬನಿಗೆ ತಲೆಗೆ ಪೆಟ್ಟುಬಿದ್ದಿದೆ.
ದೆಹಲಿ-ಗುರುಗ್ರಾಂ ಗಡಿಯ ಟೋಲ್ನಲ್ಲಿ ನಿಂತಿದ್ದ ಕಾರಿನಲ್ಲಿ ನಾಲ್ಕು ಜನ ಯುವಕರಿದ್ದರು. ಪಕ್ಕಕ್ಕೆ ಬಂದ ನೀಲಿ ಕಾರಿನ ಚಾಲಕ, ಹಾರ್ನ್ ಮಾಡಿದರೂ ಜಾಗ ಕೊಡಲಿಲ್ಲ ಎನ್ನುತ್ತಾ, ದಿಢೀರನೇ ಗುಂಡು ಚಲಾಯಿಸಿದ. ಒಬ್ಬ ಯುವಕನಿಗೆ ತಲೆಗೆ ಗಾಯವಾಗಿದ್ದು ಕೂಡಲೇ ನಾಯ್ಡಾದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆತ ಈಗ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಹೆಚ್ಚುವರಿ ಡಿಸಿಪಿ ಅಮಿತ್ ಗೋಯಲ್ ತಿಳಿಸಿದ್ದಾರೆ.
ಇದನ್ನೂ ಓದಿ: ತಡರಾತ್ರಿ ಶುರುವಾಯ್ತು ಗಂಡ-ಹೆಂಡತಿ ಜಗಳ… ಮೂವರ ಕೊಲೆಯಲ್ಲಿ ಅಂತ್ಯ
ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಯುವಕರು ಗುಂಡು ಹಾರಿಸಿದ ಚಾಲಕನನ್ನು ಗುರುತಿಸಿದ ನಂತರ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯು ತಾನು ಆ ಸಮಯದಲ್ಲಿ ಮದ್ಯ ಸೇವಿಸಿದ್ದು, ಘಟನೆಯ ಬಗ್ಗೆ ಸ್ಪಷ್ಟವಾಗಿ ಏನೂ ನೆನಪಿಲ್ಲ ಎಂದು ಹೇಳಿರುವುದಾಗಿ ಡಿಸಿಪಿ ಗೋಯಲ್ ತಿಳಿಸಿದ್ದಾರೆ. (ಏಜೆನ್ಸೀಸ್)
ಅಫ್ಘಾನಿಸ್ತಾನದಿಂದ ಭಾರತ ಸರ್ಕಾರ ತೆರವುಗೊಳಿಸಿದ ಜನರೆಷ್ಟು? ಸಂಪೂರ್ಣ ಮಾಹಿತಿ ನೀಡಿದ ಸಚಿವ ಜೈಶಂಕರ್
ಕಾಶ್ಮೀರದ ಬಗ್ಗೆ ನಾಲಿಗೆ ಹರಿಬಿಟ್ಟವರನ್ನು ತೆಗೆದುಹಾಕಲು, ಪಿಪಿಸಿಸಿ ಅಧ್ಯಕ್ಷ ಸಿಧುಗೆ ಸೂಚನೆ
ತಾಲಿಬಾನ್ ಡೆಪ್ಯುಟಿ ಅಬ್ದುಲ್ ಘನಿ ಬರಾದರ್ ಅಫ್ಘಾನಿಸ್ತಾನದ ಹೊಸ ಅಧ್ಯಕ್ಷ?!