ಇಸ್ಲಮಾಬಾದ್: ಆಯಸ್ಸು ಗಟ್ಟಿ ಇದ್ದರೆ ಯಮನೂ ಸಹ ಏನು ಮಾಡಲು ಆಗುವುದಿಲ್ಲ ಎಂಬ ಮಾತಿಗೆ ಪೂರಕವಾದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಭೂಕುಸಿತದಿಂದ ಜಾರಿದ ಬೃಹತ್ ಬಂಡೆಯೊಂದು ಹೊಸದಾಗಿ ಖರೀದಿಸಿದ ಕಾರಿನ ಮೇಲೆ ಉರುಳಿಬಿದ್ದು ಅಪ್ಪಚ್ಚಿಯಾದರೂ ಪವಾಡವೆಂಬಂತೆ ಚಾಲಕ ಬದುಕಿ ಬಂದಿದ್ದಾನೆ.
ರಶೀದ್ ಇಕ್ಬಾಲ್ (46) ಬದಕುಳಿದ ಕಾರು ಚಾಲಕ. ತನ್ನ ಹೊಸ ಸುಜಕಿ ಕಾರಿನಲ್ಲಿ ಮೂವರು ಪ್ರಯಾಣಿಕರನ್ನು ಕರೆದೊಯ್ಯುತ್ತಿರುವಾಗ ಇದ್ದಕ್ಕಿಂದಂತೆ ದೊಡ್ಡ ಬಂಡೆಯೊಂದ ಆತನ ಕಾರಿನ ಮೇಲೆ ಬಿದ್ದು, ಕಾರನ್ನು ಅಪ್ಪಚ್ಚಿ ಮಾಡಿತು. ದುರಾದೃಷ್ಟವಶಾತ್ ಮೂವರು ಪ್ರಯಾಣಿಕರು ದಾರುಣವಾಗಿ ಮೃತಪಟ್ಟರೆ, ಚಾಲಕ ಪ್ರವಾಡ ರೀತಿಯಲ್ಲಿ ಬದುಕುಳಿದಿದ್ದಾನೆ.
ಇದನ್ನೂ ಓದಿರಿ: ಕಾಮುಕ ತಂದೆಯನ್ನು ಬರ್ಬರವಾಗಿ ಕೊಂದಿದ್ದ ಸಹೋದರಿಯರಿಗೆ ಗುಡ್ ನ್ಯೂಸ್ ಕೊಟ್ಟ ನ್ಯಾಯಾಲಯ!
ಈ ಘಟನೆ ಮಾರ್ಚ್ 24ರಂದು ದಕ್ಷಿಣ ಪಾಕಿಸ್ತಾನದ ಅಜಾದ್ ಕಾಶ್ಮೀರ ವಲಯದ ಧಿರ್ಕೋಟ್ ಪಟ್ಟಣದಲ್ಲಿ ಸಂಭವಿಸಿದ ಭೂಕುಸಿತ ವೇಳೆ ನಡೆದಿದೆ. ಸುಮಾರು 1 ಟನ್ ತೂಕದ ಬಂಡೆ ನೇರವಾಗಿ ಇಕ್ಬಾಲ್ ಕಾರಿನ ಮೇಲೆಯೇ ಬಿದ್ದಿದೆ. ಪರಿಣಾಮ ಹೊಸ ಕಾರು ತಕ್ಷಣವೇ ಅಪ್ಪಚ್ಚಿಯಾಯಿತು. ಒಳಗಡೆಯಿದ್ದ ಮೂವರು ಪ್ರಯಾಣಿಕರು ಸ್ಥಳದಲ್ಲೆ ಬಂಡೆ ಅಡಿಗೆ ಸಿಲುಕಿ ಪ್ರಾಣಬಿಟ್ಟರೆ, ಬಹುದೊಡ್ಡ ಬಂಡೆಗೆ ಇಕ್ಬಾಲ್ ತಲೆಯು ಕೆಲವೇ ಅಂಚಿನಲ್ಲಿ ತಪ್ಪಿಸಿಕೊಂಡಿತು.
ಇದನ್ನು ನೋಡಿದ ಸ್ಥಳೀಯರು ತಕ್ಷಣ ಇಕ್ಬಾಲ್ ನೆರವಿಗೆ ಧಾವಿಸಿ, ಸುತ್ತಿಗೆ ಸಹಾಯದಿಂದ ಕಾರಿನ ಗಾಜನ್ನು ಒಡೆದು ಆತನ್ನು ಹೊರಗೆಳೆದು ಜೀವ ಉಳಿಸಿದ್ದಾರೆ. ಇಕ್ಬಾಲ್ ತಲೆಯನ್ನು ಹಿಡಿದುಕೊಂಡು ಬಂಡೆ ಕದಲದಂತೆ ಸೂಕ್ಷ್ಮವಾಗಿ ಎಲ್ಲೆಲ್ಲಿ ಜಾಗ ಮಾಡಲು ಸಾಧ್ಯವೋ ಅಲ್ಲಲ್ಲಿ ಆಯುಧಗಳಿಂದ ಸ್ಥಳಾವಕಾಶಮಾಡಿ ಇಕ್ಬಾಲ್ರನ್ನು ರಕ್ಷಿಸಿದರು.
ಸುಮಾರು 2 ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆಯಿತು. ಇಕ್ಬಾಲ್ರನ್ನು ರಕ್ಷಿಸಿದ ಬೆನ್ನಲ್ಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅಚ್ಚರಿಯೆಂದರೆ ಇಕ್ಬಾಲ್ಗೆ ಕೇವಲ ಸಣ್ಣಪುಟ್ಟ ಗಾಯಗಳಾಗಿವೆ. ಇನ್ನು ಕಾರಿನಲ್ಲಿ ಸಿಲುಕಿದ್ದ ಉಳಿದ ಮೂವರ ಮೃತದೇಹಗಳನ್ನು ಹೊರತೆಗೆಯಲು ಹರಸಾಹಸವನ್ನೇ ಪಡಬೇಕಾಯಿತು. (ಏಜೆನ್ಸೀಸ್)
ಲೇಡಿ ಸಿಂಗಮ್ ಖ್ಯಾತಿಯ ಮಹಿಳಾ ಅಧಿಕಾರಿ ಆತ್ಮಹತ್ಯೆ: ಡೆತ್ನೋಟ್ನಲ್ಲಿ ಅಧಿಕಾರಿಯ ಕರಾಳ ಮುಖ ಬಯಲು!
ಇಂದು ಸಂಜೆ ಫಿಲಂ ರಿಲೀಸ್ ಮಾಡ್ತಾರಂತೆ ಜಾರಕಿಹೊಳಿ! ಅದು ಯಾರ ಸಿನಿಮಾ?