ಬೆಂಗಳೂರು: ರಾಜಧಾನಿಯಲ್ಲಿನ ಸಂಚಾರ ದಟ್ಟಣೆಯಿಂದ ಏನೆಲ್ಲ ಸಮಸ್ಯೆ ಆಗುತ್ತದೆ, ಎಂಥವರೂ ಎಂಥೆಂಥ ಪರದಾಟ ಅನುಭವಿಸಬೇಕಾಗಿ ಬರುತ್ತದೆ ಎಂಬುದಕ್ಕೆ ಇದೊಂದು ತಾಜಾ ಉದಾಹರಣೆ. ಇಲ್ಲೊಬ್ಬರು ವೈದ್ಯರು ಬೆಂಗಳೂರಿನ ಟ್ರಾಫಿಕ್ ಕಾರಣಕ್ಕೆ ರಸ್ತೆಯಲ್ಲಿ 3 ಕಿ.ಮೀ. ಓಡಿ ಆಸ್ಪತ್ರೆಗೆ ತಲುಪಿದ್ದಾರೆ.
ಸರ್ಜಾಪುರದ ಮಣಿಪಾಲ್ ಆಸ್ಪತ್ರೆಯ ಗ್ಯಾಸ್ಟ್ರೊಎಂಟೆರಾಲಜಿ ಸರ್ಜನ್ ಡಾ.ಗೋವಿಂದ್ ನಂದಕುಮಾರ್ ಈ ಸಾಹಸ ಮಾಡಿದ್ದಾರೆ. ಸರ್ಜರಿಗೆ ಸಮಯ ನಿಗದಿಯಾಗಿದ್ದ ದಿನ ಆಸ್ಪತ್ರೆಗೆ ತೆರಳುತ್ತಿದ್ದ ಇವರು ಮಾರ್ಗಮಧ್ಯೆ ಟ್ರಾಫಿಕ್ನಲ್ಲಿ ಸಿಕ್ಕಿ ಹಾಕಿಕೊಂಡಿದ್ದು, ಅಲ್ಲಿಂದ ಆಸ್ಪತ್ರೆಯವರೆಗೆ 3 ಕಿ.ಮೀ. ಓಡಿಹೋಗಿ ಸರ್ಜರಿ ನಡೆಸಿದ್ದಾರೆ.
ಇವರು ಸರ್ಜಾಪುರದ ಮಣಿಪಾಲ್ ಆಸ್ಪತ್ರೆಯಲ್ಲಿ ಆ. 30ರಂದು ಮಧ್ಯವಯಸ್ಕ ಮಹಿಳೆಯೊಬ್ಬರಿಗೆ ತುರ್ತು ಲ್ಯಾಪರೊಸ್ಕೋಪಿಕ್ ಗಾಲ್ಬ್ಲಾಡರ್ ಸರ್ಜರಿ ನಡೆಸುವುದು ನಿಗದಿಯಾಗಿತ್ತು. ಅದಕ್ಕೆಂದೇ ಸಾಕಷ್ಟು ಸಮಯ ಮುಂಚಿತವಾಗಿ ಮನೆಯಿಂದ ಹೊರಟ್ಟಿದ್ದ ಇವರು ಸರ್ಜಾಪುರ-ಮಾರತಹಳ್ಳಿ ಮಾರ್ಗದಲ್ಲಿ ಟ್ರಾಫಿಕ್ ಸಿಲುಕಿಕೊಂಡಿದ್ದರು.
ತುರ್ತು ಸರ್ಜರಿ ಆಗಿದ್ದರಿಂದ ನಿಗದಿತ ಸಮಯಕ್ಕೆ ಹೋಗಿದ್ದರೆ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಇದ್ದಿದ್ದರಿಂದ ಎರಡನೇ ಯೋಚನೆ ಮಾಡದೆ ಕಾರ್ ಜವಾಬ್ದಾರಿ ಡ್ರೈವರ್ಗೆ ಒಪ್ಪಿಸಿ, ಅಲ್ಲಿಂದ 3 ಕಿ.ಮೀ. ದೂರದಲ್ಲಿದ್ದ ಆಸ್ಪತ್ರೆಗೆ ಓಡಿಕೊಂಡೇ ಹೋಗಿದ್ದೆ. ನಂತರ ಆಕೆಗೆ ಸರ್ಜರಿ ನಡೆಸಲಾಗಿದ್ದು, ಆಕೆ ನಂತರ ನಿಗದಿತ ಸಮಯಕ್ಕೆ ಡಿಸ್ಚಾರ್ಜ್ ಆಗಿದ್ದು, ಸದ್ಯ ಆರಾಮಾಗಿ ಇದ್ದಾರೆ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ. ಇವರು ಓಡುತ್ತ ಆಸ್ಪತ್ರೆಗೆ ತಲುಪಿದ ದೃಶ್ಯಾವಳಿಯ ವಿಡಿಯೋ ತುಣುಕು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಲಾರಂಭಿಸಿದೆ.
ವಿಷ್ಣುವರ್ಧನ್ ಜನ್ಮದಿನಂದು ‘ಯಜಮಾನೋತ್ಸವ’; ನಡೆಯಲಿದೆ ದಾಖಲೆಯ ಕಟೌಟ್ ಜಾತ್ರೆ..
ಲೋಕಾಯುಕ್ತ ದಾಳಿ: 4 ಲಕ್ಷ ರೂ. ಸಮೇತ ಸಿಕ್ಕಿಬಿದ್ದ ಜಂಟಿ ಆಯುಕ್ತರ ಆಪ್ತ ಸಹಾಯಕ…