ನವದೆಹಲಿ: ಕರೊನಾ ವೈರಸ್ನಿಂದ ಮೃತಪಟ್ಟ ರೋಗಿಯ ವಿಚಾರದಲ್ಲಿ ತಪ್ಪು ಮಾಹಿತಿ ಹರಡುತ್ತಿದ್ದಾರೆ ಎಂದು ಆರೋಪಿಸಿ ವೈದ್ಯರೊಬ್ಬರ ಮೇಲೆ ಆರು ಮಂದಿ ಕಿಡಿಗೇಡಿಗಳು ಕ್ಲೀನಿಕ್ನ ಒಳಗಡೆಯೇ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯ ದ್ವಾರಕ ನಗರದ ಬಿಂದಾಪುರ್ ಏರಿಯಾದಲ್ಲಿ ಶನಿವಾರ ರಾತ್ರಿ ನಡೆದಿದೆ.
ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರನ್ನು ಸುಖ್ಜಿಂದರ್ ಮತ್ತು ಜೀತೆಂದರ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: VIDEO| ಸಮುದ್ರ ದಡದಲ್ಲಿ ಸಿಕ್ಕ ಸೂಟ್ಕೇಸ್ನಲ್ಲಿ ಹಣವಿದೆ ಅಂದುಕೊಂಡ ಯುವತಿಯರಿಗೆ ಕಾದಿತ್ತು ಶಾಕ್!
ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿರುವ ಸಂತ್ರಸ್ತ ವೈದ್ಯ ಡಾ. ಅವ್ತಾರ್ ಹನ್ಸ, ಸುಮಾರು ಐದರಿಂದ ಆರು ಮಂದಿ ಕ್ಲೀನಿಕ್ನಲ್ಲೇ ಎಳೆದಾಡಿ ಥಳಿಸಿದರು. ಅಲ್ಲದೇ ಕ್ಲೀನಿಕ್ನಲ್ಲಿದ್ದ ವಸ್ತುಗಳನ್ನು ದೋಚಿ, ರೋಗಿಗಳ ಮೇಲೂ ಹಲ್ಲೆ ನಡೆಸಿದರು ಎಂದು ಆರೋಪಿಸಿದ್ದಾರೆ.
ಆರೋಪಿ ಸುಖ್ಜಿಂದರ್ ತಂದೆ ಇತ್ತೀಚೆಗಷ್ಟೇ ಕೋವಿಡ್-19ನಿಂದ ಮೃತಪಟ್ಟಿದ್ದರು. ಹೀಗಾಗಿ ಸುಖ್ಜಿಂದರ್ ಕುಟುಂಬಕ್ಕೂ ಕರೊನಾ ಹರಡಿರುವ ಸಾಧ್ಯತೆ ಇದೆ ಎಂದು ನೆರೆಯವರಿಗೆ ಮುನ್ನೆಚ್ಛರಿಕಾ ಕ್ರಮವಾಗಿ ವೈದ್ಯರು ಮಾಹಿತಿ ನೀಡಿದ್ದರು. ಇದು ಸುಖ್ಜಿಂದರ್ ಕೋಪಕ್ಕೆ ಕಾರಣವಾಗಿದ್ದು, ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ ಎಂದು ಆಪಾದಿಸಿ, ತನ್ನ ಸಹಚರರೊಂದಿಗೆ ಸೇರಿ ಥಳಿಸಿದ್ದಾನೆ. ಇದನ್ನೂ ಓದಿ: ಸಚಿವ ಸುಧಾಕರ್ ತಂದೆಗೆ ಕರೊನಾ ಸೋಂಕು ಬೆನ್ನಲ್ಲೇ ಪತ್ನಿ, ಮಗಳಿಗೂ ಮಹಾಮಾರಿ ಕಂಟಕ
ಸಾಮಾನ್ಯವಾಗಿ ಕರೊನಾ ಸೋಂಕು ದೃಢವಾದರೆ ಸ್ಥಳೀಯರಿಗೆ ಎಚ್ಚರಿಕೆ ನೀಡುವುದು ವೈದ್ಯರ ಕರ್ತವ್ಯ. ಹಗಲಿರುಳು ಶ್ರಮಿಸುವ ಕರೊನಾ ವಾರಿಯರ್ಸ್ ಮೇಲೆಯೇ ಹಲ್ಲೆ ಮಾಡುವುದು ಎಷ್ಟು ಸರಿ? ಇಂತಹ ಜನರು ಯಾವಾಗ ಬುದ್ಧಿ ಕಲಿಯುತ್ತಾರೋ? ಆರೋಗ್ಯ ಬಿಕ್ಕಟ್ಟಿನ ಸಮಯದಲ್ಲಿ ಮನುಷ್ಯರಾಗಿ ವರ್ತಿಸುವುದು ತುಂಬಾ ಮುಖ್ಯವಾಗಿದೆ. (ಏಜೆನ್ಸೀಸ್)
ಟ್ರಂಪ್ ಸರ್ಕಾರದ ನಿರ್ಧಾರದಿಂದ ಭಾರತದ ಐಟಿ ಕಂಪನಿಗಳಿಗೆ ಹೊಡೆತ: ಹೆಚ್ಚಲಿದೆ ನಿರುದ್ಯೋಗ