ನವದೆಹಲಿ: ‘ಬಹುಶಃ ಬಾಲಿವುಡ್ನಲ್ಲಿ ಯಾರಾದರೂ ಅತೀ ಹೆಚ್ಚು ಕಾಲ ಮಾದಕವಸ್ತುಗಳನ್ನು ಬಳಸಿದ್ದಾರೆಂದರೆ ಅದು ರವಿಕಿಶನ್ ಎಂದು ಎಲ್ಲರಿಗೂ ಗೊತ್ತಿದೆ. ಅವರ ದಿನ ಶುರುವಾಗುತ್ತಿದ್ದುದೇ ಶಿವನ ಭಜನೆಯಿಂದ …’ ಎಂದು ಇತ್ತೀಚೆಗಷ್ಟೇ ನಟ-ನಿರ್ದೇಶಕ ಅನುರಾಗ್ ಕಶ್ಯಪ್ ಹೇಳಿದ್ದರು.
ಇದನ್ನೂ ಓದಿ: ಅನುರಾಗ್ ಕಶ್ಯಪ್ ದೊಡ್ಡ ಸ್ರ್ರೀವಾದಿ ಎಂದ ತಾಪ್ಸಿ … ಯಾಕೆ?
ಇದಕ್ಕೆ ಪ್ರತಿಕ್ರಿಯಿಸಿರುವ ನಟ ಮತ್ತು ಸಂಸದ ರವಿಕಿಶನ್, ಅನುರಾಗ್ ಅವರಿಂದ ತಾವು ಇಂತಹ ಮಾತುಗಳನ್ನು ಖಂಡಿತವಾಗಿಯೂ ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ಅನುರಾಗ್ ಅವರಿಂದ ನಾನು ಇಂತಹ ಮಾತುಗಳನ್ನು ನಿರೀಕ್ಷಿಸಿರಲಿಲ್ಲ. ನಾನು ಶಿವನ ಭಕ್ತ. ಅದೇ ಕಾರಣಕ್ಕೆ ಬೆಳಿಗ್ಗೆಯೇ ಶಿವನ ಜಪ ಮಾಡುತ್ತೇನೆ. ಆದರೆ, ಡ್ರಗ್ಸ್ ಸಮರದಲ್ಲಿ ನನ್ನನ್ನು ಅವರು ಸಪೋರ್ಟ್ ಮಾಡಲಿಲ್ಲ ಎಂಬ ಬೇಸರವಿದೆ. ಹಾಗೆಯೇ, ನಾನು ಹಿಂದೊಮ್ಮೆ ಮಾದಕವಸ್ತುಗಳನ್ನು ಬಳಸುತ್ತಿದ್ದೆ ಮತ್ತು ಸಂಸದನಾದ ಮೇಲೆ ಅವೆಲ್ಲವನ್ನೂ ಬಿಟ್ಟಿದ್ದೇನೆ ಎನ್ನುವ ಅವರ ಮಾತುಗಳಿಂದ ಬೇಸರವಾಗಿದೆ. ಇದು ಸುಳ್ಳು’ ಎಂದು ರವಿಕಿಶನ್ ಹೇಳಿಕೊಂಡಿದ್ದಾರೆ.
ಇದಕ್ಕೂ ಮುನ್ನ ಕಳೆದ ಸೋಮವಾರ ಸಂಸತ್ತಿನಲ್ಲಿ ಮಾತನಾಡುವ ಸಂದರ್ಭದಲ್ಲಿ, ‘ದೇಶದ ಯುವಜನತೆಯನ್ನು ದಿಕ್ಕುತಪ್ಪಿಸಲು ನೆರೆರಾಷ್ಟ್ರಗಳು ಸಂಚು ರೂಪಿಸುತ್ತಿವೆ. ಪಾಕಿಸ್ತಾನ ಮತ್ತು ಚೀನಾದಿಂದ ಅಕ್ರಮವಾಗೊ ಪಂಜಾಬ್ ಮತ್ತು ನೇಪಾಳದ ಮೂಲಕ ಇಲ್ಲಿಗೆ ಡ್ರಗ್ಸ್ ತರಲಾಗುತ್ತಿದೆ. ಡ್ರಗ್ಸ್ ಚಟ ಹೆಚ್ಚಾಗುತ್ತಿದೆ. ಅದರಲ್ಲೂ ಚಿತ್ರರಂಗದಲ್ಲೂ ಜಾಸ್ತಿಯಾಗಿದೆ. ಈ ವಿಷಯವಾಗಿ ಎನ್ಸಿಬಿ ಒಳ್ಳೆಯ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಇನ್ನೂ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ರವಿಕಿಶನ್ ಹೇಳಿದ್ದರು.
ಇದನ್ನೂ ಓದಿ: ಸುಶಾಂತ್ ಬದುಕಿದ್ದರೆ ಈ ಸರ್ಕಸ್ ನೋಡಿ ನಗುತ್ತಿದ್ದರು: ಸೋನು
ಇದಕ್ಕೆ ಪ್ರತಿಯಾಗಿ ಮಾತನಾಡಿದ್ದ ಅನುರಾಗ್ ಕಶ್ಯಪ್, ‘ರವಿಕಿಶನ್ ಅವರು ನನ್ನ ‘ಮುಕ್ಕಾಬಾಜ್’ ಚಿತ್ರದಲ್ಲಿ ನಟಿಸಿದ್ದರು. ರವಿಕಿಶನ್ ಅವರ ದಿನ ಶುರುವಾಗುತ್ತಿದ್ದುದೇ ಮಾದಕವಸ್ತುಗಳಿಂದ. ಬಹುಶಃ ಬಾಲಿವುಡ್ನಲ್ಲಿ ಯಾರಾದರೂ ಅತೀ ಹೆಚ್ಚು ಕಾಲ ಮಾದಕವಸ್ತುಗಳನ್ನು ಬಳಸಿದ್ದಾರೆಂದರೆ ಅದು ರವಿಕಿಶನ್ ಎಂದು ಎಲ್ಲರಿಗೂ ಗೊತ್ತಿದೆ. ಈಗವರು ಬಿಟ್ಟಿರಬಹುದು. ಆದರೆ, ಆ ಬಗ್ಗೆ ಮಾತನಾಡಿದ್ದು ಆಶ್ಚರ್ಯವಾಯಿತು’ ಎಂದು ಅನುರಾಗ್ ಹೇಳಿದ್ದರು.
Photos: ಬಾಲಕೃಷ್ಣ, ವಸುದೇವನ ಅವತಾರದಲ್ಲಿ ಯಶ್ ಮತ್ತು ಪುತ್ರ ಯಥರ್ವ…