ಶ್ರೀನಗರ: ‘ಶೌರ್ಯ ದಿನ’ದಂದು ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕಾಶ್ಮೀರದ ಅಭಿವೃದ್ಧಿ ಮತ್ತು ಏಕೀಕರಣದ ಬಗ್ಗೆ ಮಾತನಾಡಿದರು. ಈ ಮೂಲಕ ಪಿಒಕೆ (ಪಾಕಿಸ್ತಾನ್ ಆಕ್ಯುಪೈಡ್ ಕಾಶ್ಮೀರ್) ಯನ್ನು ವಶಕ್ಕೆ ತೆಗೆದುಕೊಳ್ಳುವ ಬಗ್ಗೆ ಸುಳಿವು ನೀಡಿದರು.
‘ಭಾರತದ ಗುರಿ ಗಿಲ್ಗಟ್ ಮತ್ತು ಬಾಲ್ಟಿಸ್ತಾನ್ ಪ್ರಾಂತ್ಯಗಳನ್ನು ಹಿಂದಕ್ಕೆ ತರುವುದು. ಪಾಕಿಸ್ತಾನ ಈ ಪ್ರದೇಶಗಳನ್ನು ಅಕ್ರಮವಾಗಿ ವಶದಲ್ಲಿಟ್ಟುಕೊಂಡಿದೆ. ಅಲ್ಲಿನ ಜನರ ಮೇಲೆ ಪಾಕಿಸ್ತಾನ ಎಸಗಿದ ದೌರ್ಜನ್ಯಕ್ಕೆ ಲೆಕ್ಕವಿಲ್ಲ’ ಎಂದು ತಮ್ಮ ಭಾಷಣದಲ್ಲಿ ಹೇಳಿದರು.
‘ನಾವು ಈಗಷ್ಟೇ ಜಮ್ಮು-ಕಾಶ್ಮೀರದಲ್ಲಿ ಅಭಿವೃದ್ಧಿಯನ್ನು ಪ್ರಾರಂಭಿಸಿದ್ದೇವೆ. ಅಭಿವೃದ್ಧಿ ಗಿಲ್ಗಿಟ್ ಬಾಲ್ಟಿಸ್ತಾನ್ಗೆ ತಲುಪಿದಾಗಲೇ ನಮ್ಮ ಗುರಿ ಪೂರ್ತಿಯಾಗುವುದು’ ಎಂದು ಹೇಳುವ ಮೂಲಕ ಪಿಒಕೆಯನ್ನು ವಶಕ್ಕೆ ಪಡೆಯುವ ಸುಳಿವು ನೀಡಿದರು. (ಏಜನ್ಸೀಸ್)