ರಾಯಚೂರು: ರಾಜ್ಯಾದ್ಯಂತ ಶುಕ್ರವಾರ ಬಿಡುಗಡೆಯಾದ ಡಾ.ಪುನೀತ್ ರಾಜ್ಕುಮಾರ್ ಅಭಿನಯದ ‘ಗಂಧದ ಗುಡಿ’ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಎಲ್ಲ ಥಿಯೇಟರ್ಗಳ ಮುಂದೆಯೂ ಅಪ್ಪು ಕಟೌಟ್ಗಳು ರಾರಾಜಿಸುತ್ತಿವೆ. ಆದರೆ ರಾಯಚೂರಿನ ಪದ್ಮನಾಭ ಚಿತ್ರ ಮಂದಿರದ ಮುಂದೆ ಹಾಕಿರುವ ಅಪ್ಪು ಕಟೌಟ್ ಬಹಳ ಡಿಫರೆಂಟಾಗಿ ಮೂಡಿ ಬಂದಿದ್ದು, ಗಮನ ಸೆಳೆಯುತ್ತಿದೆ.
ಶ್ರೀಕೃಷ್ಣ, ವಿಷ್ಣುದೇವ, ಶಿವನ ಅವತಾರದಲ್ಲಿ ಪುನೀತ್ರ ಭಾವಚಿತ್ರವನ್ನ ಮುದ್ರಿಸಿ ಥಿಯೇಟರ್ ಮುಂದೆ ಹಾಕಿ ಸಂಭ್ರಮಿಸಿದ್ದಾರೆ. ಪಾರ್ವತಿ ದೇವಿ ಜಾಗದಲ್ಲಿ ಅಶ್ವಿನಿ ಪುನೀತ್ರಾಜ್ಕುಮಾರ್ರ ಭಾವಚಿತ್ರವಿದೆ. ಅಭಿಮಾನಿಗಳು ಸಾಕ್ಷಾತ್ ದೇವರಂತೆ ಅಪ್ಪುವನ್ನು ಆರಾಧಿಸಿ ಅಭಿಮಾನ ಮೆರೆದಿದ್ದಾರೆ. ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಈ ರೀತಿ ಬ್ಯಾನರ್ನಲ್ಲಿ ದೈವ ರೂಪದಲ್ಲಿ ಪುನೀತ್ ಕಂಡು ಬಂದಿರುವುದು ಇದೇ ಮೊದಲು.
ಇನ್ನು ಗಂಧದಗುಡಿ ಸಿನಿಮಾವನ್ನು ವಿಶೇಷವಾಗಿ ಸ್ವಾಗತಿಸಿರುವ ಅಪ್ಪು ಅಭಿಮಾನಿಗಳು, ಚಿತ್ರ ವೀಕ್ಷಣೆಗೆ ಬಂದವರಿಗೆ ಉಪ್ಪಿಟ್ಟನ್ನು ಉಣಬಡಿಸಿದ್ದಾರೆ. ಹಾಗೇ ಬಂದವರಿಗೆ ತಲಾ ಒಂದೊಂದು ಸಸಿಗಳನ್ನು ಕೊಟ್ಟು ಪರಿಸರ ಕಾಳಜಿಯನ್ನು ತೋರಿ, ಪುನೀತ್ ರಾಜ್ಕುಮಾರ್ ಹಾಗೂ ಗಂಧದ ಗುಡಿ ಸಿನಿಮಾಗೆ ಗೌರವ ತೋರಿದ್ದಾರೆ.