More

    ದೇವರ ಅವತಾರದಲ್ಲಿ ಅಪ್ಪು, ಶಿವ-ಪಾರ್ವತಿ ಫೋಟೋದಲ್ಲಿ ಪುನೀತ್​-ಅಶ್ವಿನಿ! ಡಿಫರೆಂಟ್ ಕಟೌಟ್​ ಹಾಕಿ ಅಭಿಮಾನ ಮೆರೆದ ಫ್ಯಾನ್ಸ್​

    ರಾಯಚೂರು: ರಾಜ್ಯಾದ್ಯಂತ ಶುಕ್ರವಾರ ಬಿಡುಗಡೆಯಾದ ಡಾ.ಪುನೀತ್​​ ರಾಜ್​ಕುಮಾರ್​​​ ಅಭಿನಯದ ‘ಗಂಧದ ಗುಡಿ’ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಎಲ್ಲ ಥಿಯೇಟರ್​​ಗಳ ಮುಂದೆಯೂ ಅಪ್ಪು ಕಟೌಟ್​​ಗಳು ರಾರಾಜಿಸುತ್ತಿವೆ. ಆದರೆ ರಾಯಚೂರಿನ ಪದ್ಮನಾಭ ಚಿತ್ರ ಮಂದಿರದ ಮುಂದೆ ಹಾಕಿರುವ ಅಪ್ಪು ಕಟೌಟ್​​ ಬಹಳ ಡಿಫರೆಂಟಾಗಿ ಮೂಡಿ ಬಂದಿದ್ದು, ಗಮನ ಸೆಳೆಯುತ್ತಿದೆ.

    ಶ್ರೀಕೃಷ್ಣ, ವಿಷ್ಣುದೇವ, ಶಿವನ ಅವತಾರದಲ್ಲಿ ಪುನೀತ್​ರ ಭಾವಚಿತ್ರವನ್ನ ಮುದ್ರಿಸಿ ಥಿಯೇಟರ್​​ ಮುಂದೆ ಹಾಕಿ ಸಂಭ್ರಮಿಸಿದ್ದಾರೆ. ಪಾರ್ವತಿ ದೇವಿ ಜಾಗದಲ್ಲಿ ಅಶ್ವಿನಿ ಪುನೀತ್​ರಾಜ್​ಕುಮಾರ್​ರ ಭಾವಚಿತ್ರವಿದೆ. ಅಭಿಮಾನಿಗಳು ಸಾಕ್ಷಾತ್​ ದೇವರಂತೆ ಅಪ್ಪುವನ್ನು ಆರಾಧಿಸಿ ಅಭಿಮಾನ ಮೆರೆದಿದ್ದಾರೆ. ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಈ ರೀತಿ ಬ್ಯಾನರ್​ನಲ್ಲಿ ದೈವ ರೂಪದಲ್ಲಿ ಪುನೀತ್​ ಕಂಡು ಬಂದಿರುವುದು ಇದೇ ಮೊದಲು.

    ದೇವರ ಅವತಾರದಲ್ಲಿ ಅಪ್ಪು, ಶಿವ-ಪಾರ್ವತಿ ಫೋಟೋದಲ್ಲಿ ಪುನೀತ್​-ಅಶ್ವಿನಿ! ಡಿಫರೆಂಟ್ ಕಟೌಟ್​ ಹಾಕಿ ಅಭಿಮಾನ ಮೆರೆದ ಫ್ಯಾನ್ಸ್​

    ಇನ್ನು ಗಂಧದಗುಡಿ ಸಿನಿಮಾವನ್ನು ವಿಶೇಷವಾಗಿ ಸ್ವಾಗತಿಸಿರುವ ಅಪ್ಪು ಅಭಿಮಾನಿಗಳು, ಚಿತ್ರ ವೀಕ್ಷಣೆಗೆ ಬಂದವರಿಗೆ ಉಪ್ಪಿಟ್ಟನ್ನು ಉಣಬಡಿಸಿದ್ದಾರೆ. ಹಾಗೇ ಬಂದವರಿಗೆ ತಲಾ ಒಂದೊಂದು ಸಸಿಗಳನ್ನು ಕೊಟ್ಟು ಪರಿಸರ ಕಾಳಜಿಯನ್ನು ತೋರಿ, ಪುನೀತ್​​ ರಾಜ್​ಕುಮಾರ್​​ ಹಾಗೂ ಗಂಧದ ಗುಡಿ ಸಿನಿಮಾಗೆ ಗೌರವ ತೋರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts