ಬೆಂಗಳೂರು: ಹಣ ಕಳಿಸದಿದ್ದರೆ ರಾಜ್ಯ ಹೈಕೋರ್ಟ್ನ ನ್ಯಾಯಮೂರ್ತಿಗಳ ಕೊಲೆ ಮಾಡುವುದಾಗಿ ವಾಟ್ಸ್ಆ್ಯಪ್ ಸಂದೇಶದ ಮೂಲಕ ಅಪರಿಚಿತರು ಬೆದರಿಕೆ ಹಾಕಿದ್ದಾರೆ.
ಇದನ್ನೂ ಓದಿ: ರೈಲಿಗೆ ಬೆಂಕಿ ಬಿದ್ದಿದೆ ಎಂಬ ವದಂತಿ: ಪ್ರಾಣ ಉಳಿಸಿಕೊಳ್ಳಲು ಸೇತುವೆಯಿಂದ ನದಿಗೆ ಜಿಗಿದ ಜನ
ಈ ಕುರಿತಾಗಿ ಹೈಕೋರ್ಟ್ನ ಸಾರ್ವಜನಿಕ ಸಂಪರ್ಕಾಧಿಕಾರಿ(P.R.O) ಮುರಳಿಧರ್ ಎಂಬುವರ ಮೊಬೈಲ್ಗೆ ಅಪರಿಚಿತ ನಂಬರ್ನಿಂದ ಬೆದರಿಕೆ ಸಂದೇಶ ಬಂದಿದ್ದು, ನ್ಯಾಯಮೂರ್ತಿಗಳಾದ ಮಹಮ್ಮದ್ ನವಾಜ್, ಎಚ್.ಟಿ.ನರೇಂದ್ರ ಪ್ರಸಾದ್, ಅಶೋಕ್.ಜಿ. ನಿಜಗಣ್ಣನವರ್, ಎಚ್.ಪಿ. ಸಂದೇಶ್, ಕೆ ನಟರಾಜನ್ ಹಾಗೂ ವೀರಪ್ಪನವರ ಕೊಲೆ ಮಾಡುವುದಾಗಿ ತಿಳಿಸಲಾಗಿದೆ.
ಹಿಂದಿ, ಉರ್ದು ಮತ್ತು ಇಂಗ್ಲಿಷ್ ಭಾಷೆಯಲ್ಲಿ ಸಂದೇಶ ಕಳುಹಿಸಿರುವ ಅಪರಿಚಿತರು, ಪಾಕಿಸ್ತಾನದ ಮೂಲದ ಅಕೌಂಟ್ ನಂಬರ್ ನೀಡಿ 50 ಲಕ್ಷ ಹಣ ನೀಡಬೇಕು ಇಲ್ಲವಾದರೆ ದುಬೈ ಗ್ಯಾಂಗ್ನಿಂದ ಕೊಲೆ ಮಾಡುವುದಾಗಿ ಬೆದರಿಕೆಯನ್ನು ಹಾಕಿದ್ದಾರೆ. ಈ ಹಿನ್ನೆಲೆ ಮುರಳಿಧರ್ ಸೆಂಟ್ರಲ್ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಗಳು, ತನಿಖೆಯನ್ನು ಮುಂದುವರೆಸಿದ್ದಾರೆ.(ಏಜೆನ್ಸೀಸ್)