More

    ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ : ಪಾಕಿಸ್ತಾನ ಮೂಲದ ಅಕೌಂಟ್ ನಂಬರ್ ನೀಡಿ ಹಣಕ್ಕೆ ಬೇಡಿಕೆ

    ಬೆಂಗಳೂರು: ಹಣ ಕಳಿಸದಿದ್ದರೆ ರಾಜ್ಯ ಹೈಕೋರ್ಟ್​ನ ನ್ಯಾಯಮೂರ್ತಿಗಳ ಕೊಲೆ ಮಾಡುವುದಾಗಿ ವಾಟ್ಸ್​​​ಆ್ಯಪ್​ ಸಂದೇಶದ ಮೂಲಕ‌ ಅಪರಿಚಿತರು ಬೆದರಿಕೆ ಹಾಕಿದ್ದಾರೆ.

    ಇದನ್ನೂ ಓದಿ: ರೈಲಿಗೆ ಬೆಂಕಿ ಬಿದ್ದಿದೆ ಎಂಬ ವದಂತಿ: ಪ್ರಾಣ ಉಳಿಸಿಕೊಳ್ಳಲು ಸೇತುವೆಯಿಂದ ನದಿಗೆ ಜಿಗಿದ ಜನ

    ಈ ಕುರಿತಾಗಿ ಹೈಕೋರ್ಟ್​ನ ಸಾರ್ವಜನಿಕ ಸಂಪರ್ಕಾಧಿಕಾರಿ(P.R.O) ಮುರಳಿಧರ್​​ ಎಂಬುವರ ಮೊಬೈಲ್​​​ಗೆ​​ ಅಪರಿಚಿತ ನಂಬರ್​ನಿಂದ ಬೆದರಿಕೆ ಸಂದೇಶ ಬಂದಿದ್ದು, ನ್ಯಾಯಮೂರ್ತಿಗಳಾದ ಮಹಮ್ಮದ್ ನವಾಜ್, ಎಚ್​​​.ಟಿ.‌ನರೇಂದ್ರ ಪ್ರಸಾದ್, ಅಶೋಕ್​​​.ಜಿ. ನಿಜಗಣ್ಣನವರ್, ಎಚ್​​.ಪಿ. ಸಂದೇಶ್, ಕೆ ನಟರಾಜನ್ ಹಾಗೂ ವೀರಪ್ಪನವರ ಕೊಲೆ ಮಾಡುವುದಾಗಿ ತಿಳಿಸಲಾಗಿದೆ.

    ಹಿಂದಿ, ಉರ್ದು ಮತ್ತು ಇಂಗ್ಲಿಷ್​​ ಭಾಷೆಯಲ್ಲಿ ಸಂದೇಶ ಕಳುಹಿಸಿರುವ ಅಪರಿಚಿತರು, ಪಾಕಿಸ್ತಾನದ ಮೂಲದ ಅಕೌಂಟ್ ನಂಬರ್ ನೀಡಿ 50 ಲಕ್ಷ ಹಣ ನೀಡಬೇಕು ಇಲ್ಲವಾದರೆ ದುಬೈ ಗ್ಯಾಂಗ್​​​ನಿಂದ ಕೊಲೆ ಮಾಡುವುದಾಗಿ ಬೆದರಿಕೆಯನ್ನು ಹಾಕಿದ್ದಾರೆ. ಈ ಹಿನ್ನೆಲೆ ಮುರಳಿಧರ್​​ ಸೆಂಟ್ರಲ್​​ಸೆನ್​​ ಪೊಲೀಸ್​​​ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಗಳು, ತನಿಖೆಯನ್ನು ಮುಂದುವರೆಸಿದ್ದಾರೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts