More

    ರೈಲಿಗೆ ಬೆಂಕಿ ಬಿದ್ದಿದೆ ಎಂಬ ವದಂತಿ: ಪ್ರಾಣ ಉಳಿಸಿಕೊಳ್ಳಲು ಸೇತುವೆಯಿಂದ ನದಿಗೆ ಜಿಗಿದ ಜನ

    ಹರಿದ್ವಾರ: ವದಂತಿಯನ್ನು ನಿಜವೆಂದು ನಂಬಿ ಪ್ರಯಾಣಿಕರು ತಮ್ಮ ಪ್ರಾಣವನ್ನು ರಕ್ಷಿಸಿಕೊಳ್ಳಲು ಸೇತುವೆಯಿಂದ ನೀರಿಗೆ ಜಿಗಿದ ವಿಚಿತ್ರ ಘಟನೆ ಉತ್ತರಖಂಡದ ಹರಿದ್ವಾರದ ಬಳಿ ನಡೆದಿದೆ.

    ಭಾನುವಾರದಂದು ಲಕ್ಸರ್ ಪ್ರದೇಶದ ನಿಲ್ದಾಣದ ಬಳಿ ಲಕ್ನೋ-ಚಂಡೀಗಢ ಸದ್ಭಾವನಾ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ವದಂತಿಯು ಪ್ರಯಾಣಿಕರಲ್ಲಿ ಭೀತಿಯನ್ನು ಸೃಷ್ಟಿಸಿದ್ದು, ಕೂಡಲೇ ರೈಲು ಬಂಗಂಗಾ ನದಿಯ ಮೇಲಿನ ರೈಲ್ವೆ ಸೇತುವೆಯ ಮೇಲೆ ಸ್ವಲ್ಪ ಸಮಯದ ನಂತರ ನಿಂತಿದೆ. 

    ಇದನ್ನೂ ಓದಿ: ತನ್ನ ಅನುಪಸ್ಥಿತಿಯಲ್ಲಿ ಮಗನ ಅಂತ್ಯ ಸಂಸ್ಕಾರ: ಹೆಂಡತಿ ಸೇರಿದಂತೆ 13 ಜನರ ಪ್ರಾಣ ತೆಗೆದ ಸೈನಿಕ

    ಗಾಬರಿಗೊಂಡ ಪ್ರಯಾಣಿಕರು ನೀರಿಗೆ ಜಿಗಿದಿದ್ದು ಕೆಲವರು ಈಜಿ ದಡ ಸೇರಿದ್ದಾರೆ. ಇನ್ನು ಕೆಲವರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸೇತುವೆ ಅಂಚಿ ಕಾಲ್ನಡಿಗೆಯಲ್ಲಿ ಸಾಗಿ ದಂಡೆಯನ್ನು ಸೇರಿದ್ದಾರೆ.

    ಈ ಕುರಿತು ಲಕ್ಸರ್ ಸ್ಟೇಷನ್ ಸೂಪರಿಂಟೆಂಡೆಂಟ್ ಎಸ್​​.ಕೆ. ತಿವಾರಿ ಮಾತನಾಡಿದ್ದು, ಯಾರೋ ಕಿಡಿಗೇಡಿಗಳು ರೈಲಿನಲ್ಲಿ ಸರಪಳಿಯನ್ನು ಎಳೆದಿದ್ದಾರೆ. ಅದರ ಪರಿಣಾಮವಾಗಿ ಚಕ್ರಗಳು ಜ್ಯಾಮ್​​ ಆಗಿ ಹೊಗೆಯನ್ನು ಹೊರಸೂಸಿದ್ದು, ಈ ಘಟನೆಯು ಬೆಂಕಿಯ ಬಗ್ಗೆ ವದಂತಿಗಳನ್ನು ಹರಡಿದೆ. ಸೇತುವೆಯ ಮೇಲೆ ರೈಲು ಸುಮಾರು ಅರ್ಧ ಗಂಟೆ ನಿಂತಿತ್ತು, ರೈಲ್ವೇ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರೈಲಿನ ಬ್ರೇಕ್‌ಗಳನ್ನು ಸರಿಪಡಿಸಿದ ನಂತರ ರೈಲು ಚಲಿಸಲು ಅನುವು ಮಾಡಿಕೊಟ್ಟರು ಎಂದು ಹೇಳಿದ್ದಾರೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts