More

    ಡಾರ್ಲಿಂಗ್ ಪ್ರಭಾಸ್ ಅಭಿಮಾನಿ ಆತ್ಮಹತ್ಯೆ! ‘ರಾಧೆ-ಶ್ಯಾಮ್’ ವಿಮರ್ಶೆ ಓದಿ ಖಿನ್ನತೆ…

    ಆಂಧ್ರ ಪ್ರದೇಶ / ಕರ್ನೂಲ್: ವ್ಯಕ್ತಿ ಪೂಜೆ ಅಥವಾ ಸಿನಿತಾರೆಯರ ಪೂಜೆಯ ಪರಾಕಾಷ್ಟೆಕ್ಕೆ ದಕ್ಷಿಣ ಭಾರತದಲ್ಲಿ ಉದಾಹರಣೆಗಳು ಸಿಕ್ಕಾಪಟ್ಟೆ ಇವೆ. ಅದರಲ್ಲಿಯೂ, ಆಂಧ್ರದಲ್ಲಿ ಸಿನಿ ಸೆಲೆಬ್ರಿಟಿಗಳು ಅಂದರೆ ಅಭಿಮಾನಿಗಳು ಸಾಯೋದಿಕ್ಕೂ ರೆಡಿ ಎನ್ನಬಹುದು. ಯಾಕೆಂದರೆ, ಒಬ್ಬ ವ್ಯಕ್ತಿಯ ಆರಾಧಕ ತನ್ನ ಬುದ್ಧಿ ಸ್ಥಿಮಿತ ಕಳೆದುಕೊಳ್ಳುತ್ತಾನೆ ಎಂಬ ಮಾತಿದೆ. ನಟ ಜೂ.ಎನ್‌ಟಿಆರ್ ಅಭಿಮಾನಿಯೊಬ್ಬ ನಟ ಪವನ್ ಕಲ್ಯಾಣ್ ಅಭಿಮಾನಿಗೆ ಚಾಕುವಿನಿಂದ ಇರಿದು ಕೊಂದ ಘಟನೆ ಕೆಲ ವರ್ಷಗಳ ಹಿಂದಷ್ಟೆ ನಡೆದಿತ್ತು. ಈಗ, ಇಂತಹ ಅತಿರೇಕದ ಪ್ರೇಮಕ್ಕೆ ನಟ ಪ್ರಭಾಸ್ ಅಭಿಮಾನಿಯೊಬ್ಬ ಸಾಕ್ಷಿಯಾಗಿದ್ದಾನೆ. ಮಾರ್ಚ್ 11 ರಂದು ನಟ ಡಾರ್ಲಿಂಗ್ ಪ್ರಭಾಸ್ ಅವರ ರಾಧೆಶ್ಯಾಮ್ಚಿತ್ರ ಬಿಡುಗಡೆಯಾಗಿತ್ತು. ಈ ಸಿನಿಮಾದ ಬಗ್ಗೆ ಕೆಲವು ಕೆಟ್ಟ ವಿಮರ್ಶೆಗಳು ಓದಿರುವ ಕಾರಣ, ಇನ್ನು ಸಿನಿಮಾ ಚೆನ್ನಾಗಿಲ್ಲವೆಂದು ಜನ ಮಾತನಾಡಿಕೊಳ್ಳುತ್ತಿದ್ದಾರೆಂದು ಬೇಸರಗೊಂಡು ಪ್ರಭಾಸ್ ಕಟ್ಟಾಭಿಮಾನಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
    ಆಂಧ್ರ ಪ್ರದೇಶದ, ಕರ್ನೂಲಿನ 24 ವರ್ಷದ ರವಿ ತೇಜ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಭಾಸ್ ಕಟ್ಟಾಭಿಮಾನಿ ಎಂದು ಗುರುತಿಸಲಾಗಿದೆ. ಹೌದು, ದಕ್ಷಿಣ ಭಾರತದ ಬಾಹುಬಲಿ, ನಟ ಡಾರ್ಲಿಂಗ್ ಪ್ರಭಾಸ್ ಅಭಿನಯದ ಸಾಹೋಸಿನಿಮಾದಲ್ಲಿ ಒಂದು ಡೈಲಾಗ್ ಇದೆ. ತಮ್ಮತ್ತ ಗುಂಡು ಹಾರಿಸುತ್ತಿರುವವರ ಕುರಿತು ನಟಿ ಶ್ರದ್ಧಾ ಕಪೂರ್ ಪ್ರಭಾಸ್ ಅವರನ್ನು ಯಾರವರು?’ ಎಂದು ಕೇಳುತ್ತಾರೆ. ಅದಕ್ಕೆ, ಪ್ರಭಾಸ್ ಅವರು ನನ್ನ ಫ್ಯಾನ್ಸ್ಎನ್ನುತ್ತಾರೆ. ಇನ್ನು, ನಟಿ ಇಷ್ಟೊಂದು ವೈಯಲೆಂಟ್ ಅಭಿಮಾನಿಗಳಾ?’ ಎಂದು ಕೇಳಿದಾಗ, ‘ಅವರು ನನ್ನ ಡೈ ಹಾರ್ಡ್ ಫ್ಯಾನ್ಸ್ಎನ್ನುತ್ತಾರೆ ಡಾರ್ಲಿಂಗ್. ಈ ಡೈಲಾಗ್​ನಂತೆಯೇ ಪ್ರಭಾಸ್ ಅವರ ಅಭಿಮಾನಿ ಅತ್ಮಹತ್ಯೆ ಮಾಡಿಕೊಂಡಿರುವುದು ಸದ್ಯ ಎಲ್ಲರನ್ನೂ ಶಾಕ್ ಮಾಡಿದೆ. ಕರ್ನೂಲಿನ ತಿಲಕ್‌ ನಗರದ ನಿವಾಸಿಯಾಗಿದ್ದ 24 ವರ್ಷದ ರವಿ ತೇಜ ಆತ್ಮಹತ್ಯೆ ಮಾಡಿಕೊಂಡು ತನ್ನ ಕುಟುಂಬವನ್ನು ಶೋಕ ಸಾಗರಕ್ಕೆ ದೂಡಿದ್ದಾನೆ.
    ರವಿ ತೇಜ ಅವರು ನಟ ಪ್ರಭಾಸ್‌ ಅವರ ಕಟ್ಟಾಭಿಮಾನಿಯಾಗಿದ್ದ. ‘ರಾಧೆಶ್ಯಾಮ್ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ. ಆದರೆ ಸಿನಿಮಾ ಚೆನ್ನಾಗಿಲ್ಲದೇ ಇರುವುದು ರವಿ ತೇಜ ಅನ್ನು ಖಿನ್ನತೆಗೆ ಗುರಿ ಮಾಡಿತ್ತು. ಹೀಗಾಗಿ, ತನ್ನ ಮನೆಯಲ್ಲಿಯೇ ಆತ ಆತ್ಮಹತ್ಯೆಗೆ ಶರಣಾಗಿದ್ದಾನಂತೆ. ಅಂದಹಾಗೆ, ಕಳೆದ ವರ್ಷವೂ ಕೆಲವು ಪ್ರಭಾಸ್ ಅಭಿಮಾನಿಗಳು ಆತ್ಮಹತ್ಯೆ ಪತ್ರ ಬರೆದಿದ್ದರು. ಇದೇ, ‘ರಾಧೆಶ್ಯಾಮ್’ ಸಿನಿಮಾದ ಬಿಡುಗಡೆಯ ಅಪ್​ಡೇಟ್ ಮಾಡದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು. ಇನ್ನು, ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಸಿನಿಮಾದ ಟೀಸರ್ ಬಿಡುಗಡೆ ಮಾಡಿತ್ತು ಈ ಚಿತ್ರತಂಡ. ಇದೀಗ, ತಮ್ಮ ಅಭಿಮಾನಿಯ ಈ ಅತಿರೇಕದ ವರ್ತನೆಯ ಬಗ್ಗೆ ನಟ ಪ್ರಭಾಸ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಈ ಘಟನೆಯಿಂದ ಮತ್ತೆ ಪ್ರಭಾಸ್‌ ಮೇಲೆ ಹಾಗೂ ಪ್ರಭಾಸ್‌ರ ಮುಂದಿನ ಸಿನಿಮಾಗಳನ್ನು ನಿರ್ದೇಶನ ಮಾಡುವ ನಿರ್ದೇಶಕರ ಮೇಲೆ ಒತ್ತಡ ಹೆಚ್ಚಾಗುತ್ತೆ ಎನ್ನಬಹುದು

    ಹಿಂದಿ ಚಿತ್ರಕ್ಕೆ ತೆರಿಗೆ ವಿನಾಯತಿ ನೀಡಿದ್ದೀರಿ, ‘ಜೇಮ್ಸ್’ಗೂ ನೀಡಿ: ಸಿಎಂಗೆ ಅಪ್ಪು ಅಭಿಮಾನಿಗಳ ಒತ್ತಾಯ

    The Kashmir Filesಗೆ ತೆರಿಗೆ ವಿನಾಯತಿ ನೀಡಿದ ಸಿಎಂ, ಸ್ಪೀಕರ್ ವತಿಯಿಂದ ಸಚಿವರು-ಶಾಸಕರಿಗೆ ಸ್ಪೆಷಲ್ ಶೋ!

    ನಾನು ತುಂಬ ಲಕ್ಕಿ, ವಿಚ್ಛೇದನವಾದರೂ ಈಗಲೂ ಇಬ್ಬರು ಪತ್ನಿಯರೂ ನನ್ನ ಜತೆಗಿದ್ದಾರೆ: ಅಮಿರ್ ಖಾನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts