More

    ಗೌರಿಶಂಕರ್​ ‘ಕೆರೆಬೇಟೆ’ಗೆ ಸಾಥ್​ ನೀಡಿದ ಡಾಲಿ ಧನಂಜಯ, ದಿನಕರ್​ ತೂಗುದೀಪ

    ವಿಜಯವಾಣಿ ಸುದ್ದಿಜಾಲ ಬೆಂಗಳೂರು

    ‘ಜೋಕಾಲಿ’, ‘ರಾಜಹಂಸ’ ಸಿನಿಮಾಗಳಲ್ಲಿ ನಾಯಕನಾಗಿದ್ದ ಗೌರಿಶಂಕರ್ ಅಭಿನಯಿಸಿರುವ ರಾಜ್‌ಗುರು ಆೃಕ್ಷನ್-ಕಟ್ ಹೇಳಿರುವ ಹಳ್ಳಿ ಸೊಗಡಿನ ಸಿನಿಮಾ ‘ಕೆರೆಬೇಟೆ’. ಮಲೆನಾಡಿನ ಭಾಗದಲ್ಲಿ ಮೀನು ಬೇಟೆಯಾಡುವ ಪದ್ಧತಿಗೆ ಕೆರೆಬೇಟೆ ಎಂದು ಹೆಸರು. ಅದನ್ನೇ ಮುಖ್ಯ ಎಳೆಯಾಗಿ ಇಟ್ಟುಕೊಂಡು ಮಾಡಿರುವ ಚಿತ್ರವಿದು. ಬುಧವಾರ (ಜ.3) ಚಿತ್ರದ ಟೀಸರ್‌ಅನ್ನು ಮಲ್ಲತ್ತಹಳ್ಳಿಯ ಕೆರೆದಂಡೆಯಲ್ಲಿ ವಿಭಿನ್ನವಾಗಿ ಡಾಲಿ ಧನಂಜಯ ಹಾಗೂ ದಿನಕರ್ ತೂಗುದೀಪ್ ರಿಲೀಸ್ ಮಾಡಿ ಶುಭಕೋರಿದರು.

    ಇದನ್ನೂ ಓದಿ : ಸಂಗೀತಾ ಮದುವೆ ಫಿಕ್ಸ್; ಬಿಗ್​​ ಮನೆಯಲ್ಲೇ ಮ್ಯಾರೇಜ್ ಡೇಟ್​​ ಅನೌನ್ಸ್, ನನಗಿಷ್ಟವಿಲ್ಲ ಎಂದ ನಟಿ…!

    ಗೌರಿಶಂಕರ್​ 'ಕೆರೆಬೇಟೆ'ಗೆ ಸಾಥ್​ ನೀಡಿದ ಡಾಲಿ ಧನಂಜಯ, ದಿನಕರ್​ ತೂಗುದೀಪ

    ನಟ ಧನಂಜಯ, ‘ಇದು ನಮ್ಮ ನೆಲದ ಸಿನಿಮಾ. ಹಾಗಾಗಿ ಇದು ಸೋಲಲ್ಲ. ಈ ಸಿನಿಮಾ ಮೂಲಕ ಎಲ್ಲರಿಗೂ ಕೆರೆಬೇಟೆ ಬಗ್ಗೆ ಗೊತ್ತಾಗಲಿದೆ’ ಎಂದರು. ಇನ್ನು ದಿನಕರ್ ತೂಗುದೀಪ, ‘ನಾನು ಈ ಸಿನಿಮಾ ನೋಡಿದ್ದೇನೆ, ತುಂಬ ಚೆನ್ನಾಗಿ ಮೂಡಿಬಂದಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿರುವ ರಾಜ್ಗುರು, ‘ನಾನು ಮಲೆನಾಡಿನ ಹುಡುಗ. ಚಿಕ್ಕ ವಯಸ್ಸಿನಿಂದ ಕೆರೆಬೇಟೆ ನೋಡಿಕೊಂಡು ಬೆಳೆದವನು. ಈ ಸಿನಿಮಾ ಮಾಡಬೇಕು ಎನ್ನುವುದು ನನ್ನ ಕನಸಾಗಿತ್ತು’ ಎಂದರು.

    ಇದನ್ನೂ ಓದಿ : ಮಾಫಿಯಾದಲ್ಲೊಂದು ರೊಮ್ಯಾಂಟಿಕ್ ಸಾಂಗ್ ; ಪ್ರಜ್ವಲ್ ದೇವರಾಜ್, ಅದಿತಿ ಪ್ರಭುದೇವ ನಟಿಸುತ್ತಿರುವ ಕ್ರೈಂ ಥ್ರಿಲ್ಲರ್

    ಗೌರಿಶಂಕರ್​ 'ಕೆರೆಬೇಟೆ'ಗೆ ಸಾಥ್​ ನೀಡಿದ ಡಾಲಿ ಧನಂಜಯ, ದಿನಕರ್​ ತೂಗುದೀಪ

    ನಾಯಕ ಗೌರಿಶಂಕರ್, ‘ಶ್ರದ್ಧೆಯಿಂದ ಸಿನಿಮಾ ಮಾಡಿದ್ದೇವೆ. ಚೆನ್ನಾಗಿ ಆಗಿದೆ. ಎಲ್ಲರೂ ನೋಡಿ’ ಎಂದು ಕೇಳಿಕೊಂಡರು. ಗೌರಿಶಂಕರ್‌ಗೆ ಬಿಂದು ಶಿವರಾಮ್ ಜೋಡಿಯಾಗಿದ್ದು, ಅವರಿಗಿದು ಮೊದಲ ಸಿನಿಮಾ. ಉಳಿದಂತೆ ಸಂಪತ್, ಗೋಪಾಲ್ ದೇಶಪಾಂಡೆ, ಹರಿಣಿ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ. ಈಗಾಗಲೇ ಸಿಗಂದೂರು, ಸೊರಬ ಭಾಗಗಳಲ್ಲಿ ಚಿತ್ರೀಕರಣ ಪೂರ್ಣಗೊಳಿಸಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತಂಡ ಬಿಜಿಯಾಗಿದೆ.

    ಗೌರಿಶಂಕರ್​ 'ಕೆರೆಬೇಟೆ'ಗೆ ಸಾಥ್​ ನೀಡಿದ ಡಾಲಿ ಧನಂಜಯ, ದಿನಕರ್​ ತೂಗುದೀಪ
    ಗೌರಿಶಂಕರ್​ 'ಕೆರೆಬೇಟೆ'ಗೆ ಸಾಥ್​ ನೀಡಿದ ಡಾಲಿ ಧನಂಜಯ, ದಿನಕರ್​ ತೂಗುದೀಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts