More

    ರಮ್ಯಾ ಹೋದರು, ಅಮಿತ್​ ತ್ರಿವೇದಿ ಬಂದರು ; ಉತ್ತರಕಾಂಡ ಚಿತ್ರಕ್ಕೆ ಹೊಸ ಎಂಟ್ರಿ!

    ವಿಜಯವಾಣಿ ಸುದ್ದಿಜಾಲ ಬೆಂಗಳೂರು

    ಡಾಲಿ ಧನಂಜಯ ನಾಯಕನಾಗಿರುವ, ರೋಹಿತ್​ ಪದಕಿ ಆ್ಯಕ್ಷನ್​&ಕಟ್​ ಹೇಳುತ್ತಿರುವ ಚಿತ್ರ “ಉತ್ತರಕಾಂಡ’. ಉತ್ತರ ಕರ್ನಾಟಕ ಸೊಗಡಿನ ಈ ಚಿತ್ರಕ್ಕಾಗಿ ಕೆಲ ದಿನಗಳಿಂದ ಆಡಿಷನ್​ ನಡೆಯುತ್ತಿದೆ. ಮತ್ತೊಂದೆಡೆ ಈ ಚಿತ್ರದ ಮೂಲಕ ನಾಯಕಿಯಾಗಿ ಕಮ್​ಬ್ಯಾಕ್​ ಮಾಡಬೇಕಿದ್ದ ನಟಿ ರಮ್ಯಾ ಕೆಲ ದಿನಗಳ ಹಿಂದಷ್ಟೇ ಚಿತ್ರದಿಂದ ಹೊರನಡೆದಿರುವುದಾಗಿ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಇದೀಗ “ಉತ್ತರಕಾಂಡ’ ತಂಡಕ್ಕೆ ಹೊಸ ಪ್ರತಿಭೆಯ ಎಂಟ್ರಿಯಾಗಿದೆ. ಹಾಗಂತ ನಾಯಕಿಯ ಪಾತ್ರಕ್ಕಲ್ಲ. ಸದ್ಯ ಚಿತ್ರತಂಡ ನಾಯಕಿಯ ಹುಡುಕಾಟದಲ್ಲಿದ್ದು, ಅದರ ನಡುವೆಯೇ ಬಾಲಿವುಡ್​ ಸಂಗೀತ ನಿರ್ದೇಶಕ ಅಮಿತ್​ ತ್ರಿವೇದಿ ಚಿತ್ರತಂಡ ಸೇರಿಕೊಂಡಿದ್ದಾರೆ.

    ರಮ್ಯಾ ಹೋದರು, ಅಮಿತ್​ ತ್ರಿವೇದಿ ಬಂದರು ; ಉತ್ತರಕಾಂಡ ಚಿತ್ರಕ್ಕೆ ಹೊಸ ಎಂಟ್ರಿ!

    ಹಿಂದಿಯಲ್ಲಿ “ದೇವ್​ ಡಿ’, “ಕ್ವೀನ್​’, “ವೇಕ್​ ಅಪ್​ ಸಿಡ್​’, “ಇಂಗ್ಲಿಷ್​ ವಿಂಗ್ಲಿಷ್​’, “ಕಾಯ್​ ಪೋ ಚೇ’, “ಉಡ್ತಾ ಪಂಜಾಬ್​’, “ಅಂಧಾದುನ್​’, ತೆಲುಗಿನ “ಸೈರಾ ನರಸಿಂಹ ರೆಡ್ಡಿ’ ಸೇರಿ ಮಲಯಾಳಂ ಚಿತ್ರಗಳಿಗೂ ಸಂಗೀತ ನೀಡಿರುವ ಖ್ಯಾತಿ ಅಮಿತ್​ಗೆ ಸಲ್ಲುತ್ತದೆ. ಇದೀಗ “ಉತ್ತರಕಾಂಡ’ ಚಿತ್ರಕ್ಕೆ ಅವರು ಸಂಗೀತ ನೀಡಲಿದ್ದಾರೆ. ಚಿತ್ರದ ಬಗ್ಗೆ ನಿರ್ದೇಶಕ ರೋಹಿತ್​ ಪದಕಿ, “ಚಿತ್ರದಲ್ಲಿ ನಾವು ಉತ್ತರ ಕರ್ನಾಟಕದ ನಾಟಿ ಮತ್ತು ಹಳ್ಳಿಗಾಡಿನ ಕಥೆ ಹೇಳಲಿದ್ದೇವೆ. ಇಂತಹ ಸ್ಥಳಿಯ ಭಾವನೆಗಳ ಕಥೆಗೆ ಅಮಿತ್​ ಸಂಗೀತ ಮೆರುಗು ನೀಡಲಿದೆ’ ಎಂದು ಹೇಳೀಕೊಂಡರು.

    ರಮ್ಯಾ ಹೋದರು, ಅಮಿತ್​ ತ್ರಿವೇದಿ ಬಂದರು ; ಉತ್ತರಕಾಂಡ ಚಿತ್ರಕ್ಕೆ ಹೊಸ ಎಂಟ್ರಿ!

    ಸಂಗೀತ ನಿರ್ದೇಶಕ ಅಮಿತ್​ ತ್ರಿವೇದಿ, “ಈ ಚಿತ್ರದ ಕಥಾವಸ್ತು ಮತ್ತು ಭಾವನೆ ನನಗೆ ಸಂಪೂರ್ಣವಾಗಿ ಅರ್ಥವಾಗಿದೆ. “ಉತ್ತರಕಾಂಡ’ದಲ್ಲಿ ಕೆಲಸ ಮಾಡಲು ಉತ್ಸುಕನಾಗಿದ್ದೇನೆ’ ಎಂದಿದ್ದಾರೆ. ಇದೊಂದು ಆ್ಯಕ್ಷನ್​ ಡ್ರಾಮಾ ಚಿತ್ರವಾಗಿದ್ದು, ಇದೇ ತಿಂಗಳ 15ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.

    ರಮ್ಯಾ ಹೋದರು, ಅಮಿತ್​ ತ್ರಿವೇದಿ ಬಂದರು ; ಉತ್ತರಕಾಂಡ ಚಿತ್ರಕ್ಕೆ ಹೊಸ ಎಂಟ್ರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts