More

    ‘ನಂಗೆ ಕನ್ನಡ ತುಂಬಾ ಇಷ್ಟ..’ ಎಂದು ಕ್ರಿಕೆಟಿಗ ಕಪಿಲ್​ದೇವ್ ಅವರಿಂದ ಹೇಳಿಸಿದ್ರು ಕನ್ನಡದ ನಟಿ!

    ಬೆಂಗಳೂರು: ಕನ್ನಡಿಗರಲ್ಲದವರು ಕನ್ನಡದಲ್ಲೇ ಮಾತನಾಡುವುದನ್ನು ಕೇಳುವುದು ದೊಡ್ಡ ಖುಷಿ. ಅದರಲ್ಲೂ ಕನ್ನಡೇತರ ಖ್ಯಾತನಾಮರು ಕನ್ನಡದಲ್ಲೊಂದು ಸಾಲು ಹೇಳಿದರೂ ತುಂಬಾ ಸಂತೋಷವಾಗುತ್ತದೆ. ಅಂಥದ್ದೊಂದು ಸಂಗತಿ ಕನ್ನಡ ರಾಜ್ಯೋತ್ಸವ ಆಚರಿಸುವ ನವೆಂಬರ್​ನಲ್ಲಿ ನಡೆದರೆ ಅಪ್ಪಟ ಕನ್ನಡಾಭಿಮಾನಿಗಳಿಗೆ ಅದು ಅತ್ಯಂತ ದೊಡ್ಡ ಖುಷಿ ಎಂದರೂ ತಪ್ಪೇನಲ್ಲ.

    ಕನ್ನಡಿಗರಿಗೆ ಅಂಥ ಒಂದು ಖುಷಿಯನ್ನು ನಟಿ ಸಂಯುಕ್ತ ಹೊರನಾಡು ಒದಗಿಸಿದ್ದಾರೆ. ಖ್ಯಾತ ಕ್ರಿಕೆಟಿಗ, 1983ರಲ್ಲಿ ಭಾರತ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಪಿಲ್​ ದೇವ್ ಖುದ್ದು ಕನ್ನಡ ಮಾತನಾಡುವಂತೆ ಮಾಡಿದ್ದಾರೆ ನಟಿ ಸಂಯುಕ್ತ. ‘ನಂಗೆ ಕನ್ನಡ ತುಂಬಾ ಇಷ್ಟ..’ ಎಂಬ ಸಾಲನ್ನು ಕಪಿಲ್ ದೇವ್ ಅವರಿಗೆ ಹೇಳಿಕೊಟ್ಟ ಸಂಯುಕ್ತ, ಬಳಿಕ ಕಪಿಲ್ ದೇವ್ ಆ ಸಾಲನ್ನು ಹೇಳುವಂತೆ ಮಾಡಿದ್ದಾರೆ. ಮಾತ್ರವಲ್ಲ, ಅದರ ವಿಡಿಯೋ ಕೂಡ ಹಂಚಿಕೊಂಡಿರುವ ಅವರು, ಕನ್ನಡಿಗರು ಖುಷಿ ಪಡುವಂತೆ ಮಾಡಿದ್ದಾರೆ.

    ಇದನ್ನೂ ಓದಿ: ವಿಶ್ವಕಪ್​ ಫೈನಲ್ ಪಂದ್ಯಕ್ಕೆ ನನ್ನನ್ನು ಆಹ್ವಾನಿಸಿರಲಿಲ್ಲ: ಕಪಿಲ್ ದೇವ್

    ಚೆನ್ನೈನಲ್ಲಿ ಇಂದು ಸಂಜೆ ಆಯೋಜಿಸಲಾಗಿರುವ ‘ಮೆಮೊಯರ್ಸ್ ಆಫ್ ಎ ಫುಡ್ಡೀ’ ಎಂಬ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಭೇಟಿಯಾದ ಕಪಿಲ್​ ದೇವ್ ಅವರನ್ನು ಮಾತನಾಡಿಸಿದ ಸಂಯುಕ್ತ, ಅವರಿಂದ ಕನ್ನಡದಲ್ಲಿ ಈ ಸಾಲನ್ನು ಹೇಳಿಸಿದ್ದಾರೆ. ಆಹಾರಗಳ ಕುರಿತ ಈ ಪುಸ್ತಕದಲ್ಲಿ ಕಪಿಲ್ ದೇವ್, ಸಂಯುಕ್ತ ಹೊರನಾಡು ಮಾತ್ರವಲ್ಲದೆ ಇತರ ಕೆಲವು ಗಣ್ಯರ ಕುರಿತ ಬರಹಗಳೂ ಇವೆ.

    'ನಂಗೆ ಕನ್ನಡ ತುಂಬಾ ಇಷ್ಟ..' ಎಂದು ಕ್ರಿಕೆಟಿಗ ಕಪಿಲ್​ದೇವ್ ಅವರಿಂದ ಹೇಳಿಸಿದ್ರು ಕನ್ನಡದ ನಟಿ!

    ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ: ಕಪ್ ಗೆದ್ದ ಕ್ರಿಕೆಟ್ ತಂಡದ ಹಿಂದಿರುವ ಕರಾವಳಿ ಮಹಿಳೆ ಯಾರು?

    ರಾಜಕೀಯಕ್ಕೆ ಇಳಿಯಲಿದ್ದಾರಾ ಜೂನಿಯರ್ ಅಂಬರೀಷ್?; ರಾಜಕೀಯ ಪ್ರವೇಶದ ಕುರಿತು ಅಭಿಷೇಕ್ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts