ಬೆಂಗಳೂರು: ಕನ್ನಡಿಗರಲ್ಲದವರು ಕನ್ನಡದಲ್ಲೇ ಮಾತನಾಡುವುದನ್ನು ಕೇಳುವುದು ದೊಡ್ಡ ಖುಷಿ. ಅದರಲ್ಲೂ ಕನ್ನಡೇತರ ಖ್ಯಾತನಾಮರು ಕನ್ನಡದಲ್ಲೊಂದು ಸಾಲು ಹೇಳಿದರೂ ತುಂಬಾ ಸಂತೋಷವಾಗುತ್ತದೆ. ಅಂಥದ್ದೊಂದು ಸಂಗತಿ ಕನ್ನಡ ರಾಜ್ಯೋತ್ಸವ ಆಚರಿಸುವ ನವೆಂಬರ್ನಲ್ಲಿ ನಡೆದರೆ ಅಪ್ಪಟ ಕನ್ನಡಾಭಿಮಾನಿಗಳಿಗೆ ಅದು ಅತ್ಯಂತ ದೊಡ್ಡ ಖುಷಿ ಎಂದರೂ ತಪ್ಪೇನಲ್ಲ.
ಕನ್ನಡಿಗರಿಗೆ ಅಂಥ ಒಂದು ಖುಷಿಯನ್ನು ನಟಿ ಸಂಯುಕ್ತ ಹೊರನಾಡು ಒದಗಿಸಿದ್ದಾರೆ. ಖ್ಯಾತ ಕ್ರಿಕೆಟಿಗ, 1983ರಲ್ಲಿ ಭಾರತ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಪಿಲ್ ದೇವ್ ಖುದ್ದು ಕನ್ನಡ ಮಾತನಾಡುವಂತೆ ಮಾಡಿದ್ದಾರೆ ನಟಿ ಸಂಯುಕ್ತ. ‘ನಂಗೆ ಕನ್ನಡ ತುಂಬಾ ಇಷ್ಟ..’ ಎಂಬ ಸಾಲನ್ನು ಕಪಿಲ್ ದೇವ್ ಅವರಿಗೆ ಹೇಳಿಕೊಟ್ಟ ಸಂಯುಕ್ತ, ಬಳಿಕ ಕಪಿಲ್ ದೇವ್ ಆ ಸಾಲನ್ನು ಹೇಳುವಂತೆ ಮಾಡಿದ್ದಾರೆ. ಮಾತ್ರವಲ್ಲ, ಅದರ ವಿಡಿಯೋ ಕೂಡ ಹಂಚಿಕೊಂಡಿರುವ ಅವರು, ಕನ್ನಡಿಗರು ಖುಷಿ ಪಡುವಂತೆ ಮಾಡಿದ್ದಾರೆ.
ಇದನ್ನೂ ಓದಿ: ವಿಶ್ವಕಪ್ ಫೈನಲ್ ಪಂದ್ಯಕ್ಕೆ ನನ್ನನ್ನು ಆಹ್ವಾನಿಸಿರಲಿಲ್ಲ: ಕಪಿಲ್ ದೇವ್
ಚೆನ್ನೈನಲ್ಲಿ ಇಂದು ಸಂಜೆ ಆಯೋಜಿಸಲಾಗಿರುವ ‘ಮೆಮೊಯರ್ಸ್ ಆಫ್ ಎ ಫುಡ್ಡೀ’ ಎಂಬ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಭೇಟಿಯಾದ ಕಪಿಲ್ ದೇವ್ ಅವರನ್ನು ಮಾತನಾಡಿಸಿದ ಸಂಯುಕ್ತ, ಅವರಿಂದ ಕನ್ನಡದಲ್ಲಿ ಈ ಸಾಲನ್ನು ಹೇಳಿಸಿದ್ದಾರೆ. ಆಹಾರಗಳ ಕುರಿತ ಈ ಪುಸ್ತಕದಲ್ಲಿ ಕಪಿಲ್ ದೇವ್, ಸಂಯುಕ್ತ ಹೊರನಾಡು ಮಾತ್ರವಲ್ಲದೆ ಇತರ ಕೆಲವು ಗಣ್ಯರ ಕುರಿತ ಬರಹಗಳೂ ಇವೆ.
ತುಂಬಾ ಧನ್ಯವಾದಗಳು @therealkapildev sir 🤍 pic.twitter.com/auwrXDrGMN
— Samyukta Hornad (@samyuktahornad) November 22, 2023
ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ: ಕಪ್ ಗೆದ್ದ ಕ್ರಿಕೆಟ್ ತಂಡದ ಹಿಂದಿರುವ ಕರಾವಳಿ ಮಹಿಳೆ ಯಾರು?
ರಾಜಕೀಯಕ್ಕೆ ಇಳಿಯಲಿದ್ದಾರಾ ಜೂನಿಯರ್ ಅಂಬರೀಷ್?; ರಾಜಕೀಯ ಪ್ರವೇಶದ ಕುರಿತು ಅಭಿಷೇಕ್ ಹೇಳಿದ್ದೇನು?