ನವದೆಹಲಿ: ಕರೊನಾ COVID19 ವೈರಸ್ ಸೋಂಕು ತಡೆಯುವ ಚಿಕಿತ್ಸೆಗೆ ಔಷಧ ಅಭಿವೃದ್ಧಿಪಡಿಸುವ ಕೆಲಸ ಜಗತ್ತಿನಾದ್ಯಂತ ಪ್ರಗತಿಯಲ್ಲಿದೆ. ಅಲೋಪತಿಯಲ್ಲದೇ, ಆಯುರ್ವೇದ, ಯುನಾನಿ ಮತ್ತು ಇತರೆ ವೈದ್ಯಪದ್ಧತಿಯಲ್ಲಿ ಈ ವೈರಸ್ಗೆ ಈಗಾಗಲೇ ಔಷಧ ಇದೆ ಎಂದು ಪ್ರತಿಪಾದಿಸುವ ಕೆಲಸವೂ ನಡೆದಿದೆ. ಇದಕ್ಕೆ ಪೂರಕವಾಗಿ ಈಗ ಸರ್ಕಾರ ನಿಯಂತ್ರಿತ ಕ್ಲಿನಿಕಲ್ ಟ್ರಯಲ್ಗೆ ಮನಸ್ಸು ಮಾಡಿದ್ದು ಅಲ್ಲಿ, ಅಶ್ವಗಂಧವನ್ನು ಮುಂಜಾಗ್ರತಾ ಔಷಧವಾಗಿ ಬಳಸುವ ಕಡೆಗೆ ಗಮನಹರಿಸಿದೆ. ಇದು ಹೈ ರಿಸ್ಕ್ ಕೋವಿಡ್ 19 ರೋಗಿಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ನೀಡುತ್ತಿರುವುದರ ಜತೆಗೆ ಹೋಲಿಕೆಯಾಗಿ ಫಲಿತಾಂಶವನ್ನು ಪರಿಗಣಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ನಿರೀಕ್ಷಿಸಿ.. ಇನ್ನೊಂದು ಹಣಕಾಸಿನ ಪ್ಯಾಕೇಜ್!
ಆಯುಷ್, ಆರೋಗ್ಯ ಸಚಿವಾಲಯ, ಸೈನ್ಸ್ ಆ್ಯಂಡ್ ಟೆಕ್ನಾಲಜಿ ಸಚಿವಾಲಯಗಳ ಜಂಟಿ ಕಾರ್ಯಾಚರಣೆಯಾಗಿದ್ದು, ಕೌನ್ಸಿಲ್ ಆಫ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮೂಲಕ ನಡೆಸಲಾಗುತ್ತಿದೆ ಎಂದು ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಹೇಳಿದ್ದರು.
ಈ ಒಟ್ಟಾರೆ ನಿಯಂತ್ರಿತ ಕ್ಲಿನಿಕಲ್ ಟ್ರಯಲ್ಗಳು ನಮಗೆ ಪ್ರಿವೆಂಟಿವ್ ಇಂಟರ್ವೆನ್ಶನ್ಗೆ ಆಯುರ್ವೇದಿಕ್ ಔಷಧ ಬಳಸುವುದಕ್ಕೆ ನೆರವಾಗಲಿವೆ. ಯಷ್ಠಿಮಧು ಮತ್ತು ಗುಡುಚಿ, ಪಿಪ್ಪಲಿಗಳ ಮಿಶ್ರಣ ಹಾಗೂ ಪಾಲಿ ಹರ್ಬಲ್ ಫಾರ್ಮುಲಾಗಳನ್ನು ಅಶ್ವಗಂಧದ ಜತೆಗೆ ಸೇರಿಸಿ ಬಳಸಿದರೆ ಅದನ್ನು ಪ್ರೊಫಿಲ್ಯಾಕ್ಸಿಸ್ ಎಂದು ಪರಿಗಣಿಸಬಹುದು. ಇದು ಮೈಲ್ಡ್ ಆಗಿರುವ ಮತ್ತು ಸಾಧಾರಣವಾಗಿರುವ ಕೋವಿಡ್ 19 ರೋಗಿಗಳ ಚಿಕಿತ್ಸೆಗೆ ಬಳಸಬಹುದಾಗಿದೆ ಎಂದು ಆಯುಷ್ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಕೊಟೇಚಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: VIDEO: ವಿದ್ಯಾರ್ಥಿಗಳೇ ಚಿಂತೆ ಬಿಟ್ಟು ಓದಿನೆಡೆಗೆ ಗಮನಹರಿಸಿ: ವಿಜಯವಾಣಿ ಫೋನ್ ಇನ್ ಕಾರ್ಯಕ್ರಮದಲ್ಲಿ ಪ್ರೊ.ಸಿದ್ದು ಅಲಗೂರು
ಯುಜಿಸಿಯ ವೈಸ್ ಚೇರ್ಮನ್ ಡಾ.ಭೂಷಣ್ ಪಟವರ್ಧನ್ ನೇತೃತ್ವದ ಒಂದಷ್ಟು ಪರಿಣತರನ್ನು ಒಳಗೊಂಡ ಆಯುಷ್ ರಿಸರ್ಚ್ ಆ್ಯಂಡ್ ಡೆವಲಪ್ಮೆಂಟ್ ಟಾಸ್ಕ್ ಫೋರ್ಸ್ ಈ ಸಂಬಂಧ ಕ್ಲಿನಿಕಲ್ ರೀಸರ್ಚ್ ಪ್ರೊಟೊಕಾಲ್ಗಳನ್ನು ರೂಪಿಸಿದೆ. ಕೋವಿಡ್ 19 ರೋಗಿಗಳಿಗೆ ಅಶ್ವಗಂಧ, ಯಷ್ಟಿಮಧು, ಗುಡುಚಿ ಮತ್ತು ಪಿಪ್ಪಲಿ ಹಾಗೂ ಆಯುಷ್ 64 ಉಂಟುಮಾಡುವ ಪರಿಣಾಮಗಳೇನು ಎಂಬುದರ ಅಧ್ಯಯನ ನಡೆಯುತ್ತಿದೆ ಎಂದು ಕೊಟೇಚಾ ವಿವರಿಸಿದ್ದಾರೆ.
ಇದನ್ನೂ ಓದಿ: ಎಚ್ಚರಿಕೆಯಿಂದ ಇರಿ – ಮೊಟ್ಟೆಗಳನ್ನು ನೋಡಿ ಬೆಚ್ಚಿ ಬಿದ್ದ ಜುವೆಲ್ಲರಿ ಶಾಪ್ ಮಾಲೀಕ !
ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ ಗುರುವಾರ ಸಂಜೀವನಿ ಎಂಬ ಮೊಬೈಲ್ ಆ್ಯಪನ್ನು ಬಿಡುಗಡೆ ಮಾಡಿದ್ದು, ಅದರ ಮೂಲಕ ಆಯುಷ್ ಅಡ್ವೊಕಸಿಯನ್ನು ಹೇಗೆ ಬಳಸಲಾಗುತ್ತಿದೆ. ಅದರ ಫಲಿತಾಂಶ ಏನು ಎಂಬಿತ್ಯಾದಿ ಡೇಟಾ ಸಂಗ್ರಹಿಸಿ ಆಯುರ್ವೇದ ಔಷಧಗಳ ಬಳಕೆ ಹೆಚ್ಚಿಸುವ ಕಡೆಗೆ ಗಮನಹರಿಸಲು ಸರ್ಕಾರ ತೀರ್ಮಾನಿಸಿದೆ. ಈ ಆ್ಯಪನ್ನು ಆಯುಷ್ ಮತ್ತು ಮಿನಿಸ್ಟ್ರಿ ಆಫ್ ಇಲೆಕ್ಟ್ರಾನಿಕ್ಸ್ ಆ್ಯಂಡ್ ಇನ್ಫಾರ್ಮೇಷನ್ ಟೆಕ್ನಾಲಜಿ ರೂಪಿಸಿದ್ದು 50 ಲಕ್ಷ ಜನರನ್ನು ತಲುಪುವ ಉದ್ದೇಶವಿದೆ ಎಂದು ಕೊಟೇಚಾ ಹೇಳಿದರು. (ಏಜೆನ್ಸೀಸ್)