ತಿರುವನಂತಪುರ: ಕೇರಳದಲ್ಲಿ ಇದುವರೆಗಿನ ವರದಿ ಪ್ರಕಾರ, ಪತ್ತೆಯಾದ 502 COVID19 ಕೇಸ್ಗಳ ಪೈಕಿ ಈಗ ಆ್ಯಕ್ಟಿವ್ ಆಗಿರುವ ಕೇಸ್ಗಳ ಸಂಖ್ಯೆ ಕೇವಲ 30. ಬುಧವಾರ ಯಾವುದೇ ಪಾಸಿಟಿವ್ ಕೇಸ್ಗಳು ದಾಖಲಾಗಿಲ್ಲ. ಆದರೆ ಏಳು ಜನರ ಮಾದರಿಗಳು ನೆಗೆಟಿವ್ ಬಂದಿದೆ. ಅಲ್ಲದೆ, ಪತ್ತನಂತಿಟ್ಟದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ 42 ದಿನಗಳ ಬಳಿಕ ಆ್ಯಕ್ಟಿವ್ ಕೇಸ್ ದೃಢಪಟ್ಟಿರುವುದೇ ಕೊನೆಯ ಆ್ಯಕ್ಟಿವ್ ಕೇಸ್ ಆಗಿ ದಾಖಲಾಗಿದೆ.
ಇದನ್ನೂ ಓದಿ: VIDEO: ವಿದ್ಯಾರ್ಥಿಗಳೇ ಚಿಂತೆ ಬಿಟ್ಟು ಓದಿನೆಡೆಗೆ ಗಮನಹರಿಸಿ: ವಿಜಯವಾಣಿ ಫೋನ್ ಇನ್ ಕಾರ್ಯಕ್ರಮದಲ್ಲಿ ಪ್ರೊ.ಸಿದ್ದು ಅಲಗೂರು
ಈ ಸಂಬಂಧ ಮಾತನಾಡಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಜ್ಯದಲ್ಲಿ ಎಂಟು ಜಿಲ್ಲೆಗಳು ಈಗಾಗಲೇ ಕೋವಿಡ್ 19 ಮುಕ್ತವಾಗಿವೆ. ಒಟ್ಟು 14,670 ಜನರನ್ನು ಕ್ವಾರಂಟೈನ್ನಲ್ಲಿ ಇರಿಸಿದ್ದು, ಈ ಪೈಕಿ 14,402 ಜನ ಮನೆಯಲ್ಲೇ ನಿಗಾದಲ್ಲಿದ್ದಾರೆ. 268 ಜನ ಸೂಚಿತ ಐಸೋಲೇಷನ್ ಸೌಲಭ್ಯ ಇರುವಲ್ಲಿ ಇದ್ದಾರೆ. ಇದುವರೆಗೆ 34,599 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಇದರಲ್ಲಿ 34,063 ನೆಗೆಟಿವ್ ಬಂದಿದೆ. ಹೆಚ್ಚುವರಿಯಾಗಿ 2,947 ಸ್ಯಾಂಪಲ್ಸ್ಗಳನ್ನು ಹೆಲ್ತ್ ಕೇರ್ ಸಿಬ್ಬಂದಿಯಿಂದ ಸಂಗ್ರಹಿಸಲಾಗಿದೆ. ಇದಲ್ಲದೆ, ಚಿಕಿತ್ಸೆ ಪಡೆಯುತ್ತಿರುವ ಏಳು ಕೋವಿಡ್ 19 ರೋಗಿಗಳ ಫಲಿತಾಂಶ ನೆಗೆಟಿವ್ ಬಂದಿದೆ. ಇವರಲ್ಲಿ ಆರು ಜನ ಕೊಟ್ಟಾಯಂ ಮತ್ತು ಒಬ್ಬರು ಇಡುಕ್ಕಿಯವರು. ಪ್ರಸ್ತುತ 30 ಕೋವಿಡ್ 19 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: PHOTOS: ಕಾಂಗೋ ಗೊರಿಲ್ಲಾಗಳ 12 ರಕ್ಷಕರನ್ನೇ ಕೊಂದು ಹಾಕಿದ್ರು ಬಂಡುಕೋರರು!
ಬೇರೆ ಬೇರೆ ರಾಜ್ಯಗಳಲ್ಲಿ ಬಾಕಿಯಾಗಿರುವ ಕೇರಳೀಯರನ್ನು ವಾಪಸ್ ಕೇರಳಕ್ಕೆ ಕರೆತರಲು ಆಯಾ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ದೆಹಲಿ, ಪಂಜಾಬ್, ಹಿಮಾಚಲ ಪ್ರದೇಶ, ಹರಿಯಾಣಗಳಲ್ಲಿ ಕೇರಳದ 723 ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ಅವರನ್ನು ಕಳುಹಿಸಲು ಆಯಾ ರಾಜ್ಯ ಸರ್ಕಾರಗಳಿಗೆ ವಾಹನದ ವ್ಯವಸ್ಥೆ ಮಾಡಿ ಕೊಡುವಂತೆ ಕೇಳಲಾಗಿದೆ. ವಿಶೇಷ ರೈಲು ಒದಗಿಸಿದರೆ ಉತ್ತಮ ಎಂದು ಹೇಳಿರುವುದಾಗಿ ಸಿಎಂ ಪಿಣರಾಯಿ ಹೇಳಿದರು.
ಇದನ್ನೂ ಓದಿ: ಎಚ್ಚರಿಕೆಯಿಂದ ಇರಿ – ಮೊಟ್ಟೆಗಳನ್ನು ನೋಡಿ ಬೆಚ್ಚಿ ಬಿದ್ದ ಜುವೆಲ್ಲರಿ ಶಾಪ್ ಮಾಲೀಕ !
ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಸೇರಿ ವಿವಿಧ ರಾಜ್ಯಗಳಲ್ಲಿ 6,802 ಕೇರಳೀಯರು ಸಿಲುಕಿಕೊಂಡಿದ್ದರು. ಅವರೆಲ್ಲರೂ ಈಗ ಕೇರಳ ತಲುಪಿದ್ದು ಈ ಪೈಕಿ 66 ಗರ್ಭಿಣಿಯರೂ ಇದ್ದಾರೆ. ವಯಲಾರ್ ಗಡಿಯಲ್ಲಿ ಹೆಚ್ಚಿನ ಜನದಟ್ಟಣೆ ಕಾಣಿಸಿದ್ದು, ಮರಳಿ ಊರಿಗೆ ತಲುಪುವ ಸಂಭ್ರಮ ಅಲ್ಲಿ ಕಾಣಿಸಿಕೊಂಡಿದೆ ಎಂದು ಪಿಣರಾಯಿ ವಿಜಯ್ ಸ್ಪಷ್ಟಪಡಿಸಿದ್ದಾರೆ. (ಏಜೆನ್ಸೀಸ್)