ಇಸ್ಲಮಾಬಾದ್: ಕರೊನಾ ವೈರಸ್ ವಿಚಾರದಲ್ಲಿ ವಿಳಂಬ ನೀತಿ ಅನುಸರಿಸಿದ ಇಮ್ರಾನ್ ಖಾನ್ ನೇತೃತ್ವದ ಪಾಕ್ ಸರ್ಕಾರಕ್ಕೆ ಸ್ವದೇಶಿ ಹಾಗೂ ವಿದೇಶಿಗರಿಂದ ಬಹಳ ಟೀಕೆ ವ್ಯಕ್ತವಾಗುತ್ತಿವೆ.
ಯಾವುದೇ ಸ್ಕ್ರೀನಿಂಗ್ ಮತ್ತು ಕ್ವಾರಂಟೈನ್ನಂತಹ ಕ್ರಮಗಳನ್ನು ತೆಗದುಕೊಳ್ಳದ ಕಾರಣ ಪಾಕ್ನಲ್ಲಿ ಕರೊನಾ ವೇಗವಾಗಿ ಹರಡಿದೆ. ಈವರೆಗೆ 2400 ಮಂದಿಗೆ ಸೋಂಕು ತಗುಲಿದ್ದು, 34 ಮಂದಿ ಸಾವಿಗೀಡಾಗಿದ್ದಾರೆ.
ಹೆಚ್ಚು ಪ್ರಕರಣಗಳು ಕರೊನಾ ಬಾಧಿತ ಇರಾನ್ನಿಂದ ಮರಳಿದ ಶಿಯಾ ಯಾತ್ರಿಗಳಲ್ಲಿ ಕಂಡುಬಂದಿದೆ. ಯಾತ್ರಿಗಳನ್ನು ಸ್ಕ್ರೀನಿಂಗ್ಗೆ ಒಳಪಡಿಸದೇ ಬಲಚೂಸ್ತಾನ್ ಗಡಿಯಲ್ಲಿನ ಶಿಬಿರಗಳಲ್ಲಿ ಆಶ್ರಯ ನೀಡಿದ್ದರಿಂದ ನೂರಾರು ಮಂದಿಗೆ ಸೋಂಕು ತಕ್ಷಣ ಹರಡಿದೆ. ಅಲ್ಲದೆ, ಶಿಬಿರದಲ್ಲಿ ಯಾವುದೇ ವೈದ್ಯಕೀಯ ಸೌಲಭ್ಯ ಕೂಡ ಇಲ್ಲದಿರುವುದು ಕಂಡುಬಂದಿದೆ.
ಶುಕ್ರವಾರದ ಪ್ರಾರ್ಥನೆಗಾಗಿ ಮಸೀದಿಗಳ ಬಳಿ ಜನ ಸೇರುತ್ತಾರೆಂಬುದನ್ನು ತಿಳಿದರೂ ಲಾಕ್ಡೌನ್ನಂತಹ ಕಠಿಣ ಕ್ರಮಗಳನ್ನು ಪಾಕ್ ಸರ್ಕಾರ ತೆಗೆದುಕೊಳ್ಳಲಿಲ್ಲ. ಆದರೆ, ಸೌದಿ ಅರೇಬಿಯಾದಂತಹ ರಾಷ್ಟ್ರದಲ್ಲಿ ಬಹುದೊಡ್ಡ ಮಸೀದಿ ಮೆಕ್ಕಾವನ್ನೇ ಲಾಕ್ಡೌನ್ ಮಾಡಿ ಉಮ್ರಾ ಯಾತ್ರಿಗಳನ್ನು ತಡೆಯಿಡಿಲಾಯಿತು. ಆದರೆ, ಇಂತಹ ಕಠಿಣ ಕ್ರಮಗಳನ್ನು ಪಾಕ್ನಲ್ಲಿ ತೆಗೆದುಕೊಳ್ಳಲಿಲ್ಲ ಎಂದು ತಮ್ಮ ಸರ್ಕಾರದ ವಿರುದ್ಧವೇ ಪಾಕ್ ಜನರು ತಿರುಗಿ ಬಿದ್ದಿದ್ದಾರೆ.
ಮಾರ್ಚ್ ತಿಂಗಳ ಆರಂಭದಲ್ಲಿ ದೇಶದಲ್ಲಿ 19 ಕೋವಿಡ್ ಪ್ರಕರಣಗಳು ವರದಿಯಾಗಿತ್ತು. ಹೀಗಿದ್ದರೂ ವಿದೇಶದಿಂದ ಬಂದವರು ಸೇರಿದಂತೆ ಸುಮಾರು 250,000 ಪುರುಷರು ಲಾಹೋರ್ ಬಳಿಯ ರೈವಿಂಡ್ ತಬ್ಲಿಘಿ ಜಮಾತ್ ಧಾರ್ಮಿಕ ಕಾರ್ಯಕ್ರಮ ನಿಮಿತ್ತ 5 ದಿನಗಳ ಕಾಲ ಒಟ್ಟುಗೂಡಿದ್ದರು. ಆದರೆ, ಇದಕ್ಕೆ ಸಾರ್ವಜನಿಕರ ವ್ಯಾಪಕ ವಿರೋಧವು ಕೂಡ ಕೇಳಿಬಂದಿತ್ತು.
ಜಮಾತ್ನಲ್ಲಿ ಪಾಲ್ಗೊಂಡಿದ್ದ ವಿವಿಧ ದೇಶದ 550 ಸದಸ್ಯರನ್ನು ಆಯಾ ದೇಶಗಳಲ್ಲಿ ಕ್ವಾರಂಟೈನ್ಗೆ ಗುರಿಪಡಿಸಲಾಗಿದೆ. ಚೀನಾದ ನಾಗರಿಕರೊಬ್ಬರಲ್ಲಿ ಪಾಸಿಟಿವ್ ವರದಿ ಕಂಡುಬಂದಿದ್ದರಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಹೀಗಾಗಿ ವಿದೇಶದಲ್ಲೂ ಪಾಕ್ ಕ್ರಮದ ಬಗ್ಗೆ ಆಕ್ಷೇಪ ಕೇಳಿಬಂದಿದೆ. ಇಸ್ಲಾಮಿಕ್ ಸಂಘಟನೆಗಳ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂಬ ಭಯದಿಂದ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಪಾಕ್ ಸರ್ಕಾರ ಹಿಂದೇಟು ಹಾಕಿದೆ. ಹೀಗಾಗಿ ಪಾಕ್ನಲ್ಲಿ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿವೆ. (ಏಜೆನ್ಸೀಸ್)
ಸೋಂಕು ಹರಡುವಿಕೆಗೆ ಯಾವುದೇ ಸಮುದಾಯವನ್ನು ಗುರಿ ಮಾಡುವುದು ಸರಿಯಲ್ಲ: ಸದ್ಗುರು
ಜನಿಸಿದ ಅವಳಿ ಮಕ್ಕಳಿಗೆ ಕರೊನಾ, ಕೋವಿಡ್ ಎಂದು ಹೆಸರಿಡಲು ರಾಯ್ಪುರ್ ದಂಪತಿ ಕೊಟ್ಟ ಕಾರಣ ಹೀಗಿದೆ…