ಬೆಂಗಳೂರು: ಜಾಗತಿಕವಾಗಿ ಜನರ ನೆಮ್ಮದಿಯನ್ನು ಕಿತ್ತುಕೊಂಡಿರುವ ಕರೊನಾ ವೈರಸ್ ಹೆಮ್ಮಾರಿಯನ್ನು ತಡೆಗಟ್ಟಲು ಈವರೆಗೂ ಲಸಿಕೆಯನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ. ಜಗತ್ತಿನಾದ್ಯಂತ ಸಾಕಷ್ಟು ಪ್ರಯತ್ನಗಳು ನಡೆಯುತ್ತಿದ್ದು, ಇದರ ನಡುವೆ ಒಂದು ಗುಡ್ ನ್ಯೂಸ್ ಕೇಳಿಬಂದಿದೆ.
ಕೆನಡಾದಲ್ಲಿ ನೆಲೆಸಿರುವ ಕನ್ನಡಿಗರೊಬ್ಬರು ಮಹಾಮಾರಿ ಕರೊನಾ ತೊಲಗಿಸುವ ಔಷಧಿಯ ಭರವಸೆಯನ್ನು ನೀಡಿದ್ದಾರೆ. ವಾಟರ್ ಲೂ ವಿಶ್ವವಿದ್ಯಾಲಯದಲ್ಲಿ ಇದಕ್ಕೆ ಸಂಬಂಧಿಸಿದ ಸಂಶೋಧನೆ ನಡೆಯುತ್ತಿದ್ದು, ಇದರ ನೇತೃತ್ವವನ್ನು ಕನ್ನಡಿಗ ಡಾ. ಪ್ರವೀಣ್ ರಾವ್ ವಹಿಸಿದ್ದಾರೆ.
ಇದನ್ನೂ ಓದಿ: ಅತ್ತಿಗೆ ಜತೆ ಸಂಸಾರ ನಡೆಸುತ್ತಿದ್ದವ ಅಣ್ಣನ ಮಗಳ ಜತೆ ಎಸ್ಕೇಪ್…!
ಲಸಿಕೆ ಕಂಡುಹಿಡಿಯುವ ಪ್ರಯತ್ನ ಅಂತಿಮ ಹಂತದಲ್ಲಿದೆ ಎಂಬ ಮಾಹಿತಿಯು ಲಭ್ಯವಾಗಿದ್ದು, ಕಿಲ್ಲರ್ ಕೋವಿಡ್-19 ತಡೆಯು ಸಾಮರ್ಥ್ಯ ಟೈಪ್-2 ಡಯಾಬಿಟೀಸ್ ಔಷಧಿಗೆ ಇದೆ ಎಂದು ಹೇಳಲಾಗುತ್ತಿದ್ದು, ಪ್ರಯೋಗದಿಂದಲೂ ಇದು ದೃಢಪಟ್ಟಿರುವುದು ತಿಳಿದುಬಂದಿದೆ. ಪ್ರಾರಂಭಿಕ ಹಂತದಲ್ಲೇ ಈ ಸಂಶೋಧನೆ ವಿಶ್ವದ ಗಮನ ಸೆಳೆದಿದ್ದು, ಪ್ರವೀಣ್ ರಾವ್ ನೇತೃತ್ವದಲ್ಲಿ ಸಂಶೋಧನೆ ಮುಂದುವರಿದಿದೆ.
ಅಂದಹಾಗೆ ಪ್ರವೀಣ್ ರಾವ್ ಉಡುಪಿ ಮೂಲದವರಾಗಿದ್ದು, ಮಣಿಪಾಲದ ಫಾರ್ಮಸಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಪದವಿ ಮುಗಿಸಿ ಕೆನಡಾದಲ್ಲಿ ಪಿಎಚ್ಡಿ ಪದವಿ ಮುಗಿಸಿದ್ದಾರೆ. ಸದ್ಯ ಕೆನಡಾದ ವಾಟರ್ ಲೂ ಯೂನಿವರ್ಸಿಟಿಯ ಸ್ಕೂಲ್ ಆಫ್ ಫಾರ್ಮಸಿಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ.
ಇದನ್ನೂ ಓದಿ: ಕುಟುಂಬದಿಂದ ದೂರಾದ ಕಿನ್ನರಿ!
ಲ್ಯಾಬ್ನ ಮೂಲ ಸಂಶೋಧನೆ ಬಗ್ಗೆ ದಿಗ್ವಿಜಯ ನ್ಯೂಸ್ಗೆ ತಿಳಿಸಿರುವ ಪ್ರವೀಣ್ ರಾವ್, ಮಾರ್ಚ್ನಿಂದ ಲ್ಯಾಬ್ನಲ್ಲಿ ಕೋವಿಡ್-19 ಸಂಶೋಧನೆ ನಡೆಸುತ್ತಿದ್ದೇವೆ. ಇದರ ನಡುವೆ ಜರ್ಮನಿಯ ವಿಜ್ಞಾನಿಗಳು ಕರೊನಾದ ಮುಖ್ಯವಾದ ಪ್ರೋಟೀನ್ ರಚನೆಯನ್ನು ಕಂಡುಹಿಡಿದರು. ಒಂದು ಬಾರಿ ಕರೊನಾ ಮಾನವನ ದೇಹದ ಒಳಗೆ ಹೋದರೆ, ವೈರಸ್ ದ್ವಿಗುಣಗೊಳ್ಳಲು ಪ್ರೋಟೀನ್ ಸಹಾಯ ಮಾಡುತ್ತದೆ. ಹೀಗಾಗಿ ಕೋವಿಡ್ ಪ್ರೋಟೀನ್ ಕ್ರಿಯೆಯನ್ನು ಔಷಧಿ ಮೂಲಕ ತಡೆದರೆ, ರೋಗವನ್ನು ತಡೆಯುವ ಸಾಧ್ಯತೆ ಇದೆ. ಹೀಗಾಗಿ ಇದರ ಬಗ್ಗೆ ಸಂಶೋಧನೆ ನಡೆಸಲು ಆರಂಭಿಸಿದೆವು ಎಂದರು.
ಇದನ್ನೂ ಓದಿ: ದೋಸೆ ತವಾದಿಂದ ಹೊಡೆದು ಪ್ರಿಯತಮೆಯನ್ನು ಕೊಂದು ಪೊಲೀಸರಿಗೆ ಶರಣಾದ ಪ್ರಿಯಕರ
ಮಾರುಕಟ್ಟೆಗೆ ಹೊಸ ಔಷಧ ತರಲು 10 ರಿಂದ 15 ವರ್ಷವಾಗುತ್ತದೆ. ಅಲ್ಲದೆ, ತುಂಬಾ ಖರ್ಚು ಸಹ ಆಗುತ್ತದೆ. ಈಗಾಗಲೇ ಜಗತ್ತಿನಲ್ಲಿ 5 ಸಾವಿರಕ್ಕೂ ಹೆಚ್ಚು ಔಷಧಗಳು ಲಭ್ಯವಿದೆ. ನಾವು ಎಲ್ಲ ಮದ್ದುಗಳ ಬಗ್ಗೆ ಸಂಶೋಧನೆ ಮಾಡಿದೆವು. ಈ ವೇಳೆ ಟೈಪ್-2 ಎಂಬ ಡಯಾಬಿಟೀಸ್ ರೋಗ ಗಮನಕ್ಕೆ ಬಂತು. ಈ ರೋಗಕ್ಕೆ ಬೇರೆ ಬೇರೆ ತರಹದ ಮದ್ದುಗಳಿವೆ. ಇದರ ಬಗ್ಗೆ ಸಂಶೋಧನೆ ಮಾಡುವಾಗ ಡಿಪಿಪಿ-4 ಇನ್ಹಿಬಿಟರ್ಸ್ (DPP-4 Inhibitors) ಎಂಬ ಒಂದು ವರ್ಗದ ಔಷಧ ಗಮನಕ್ಕೆ ಬಂತು. ಇವುಗಳ ಕೆಮಿಕಲ್ ರಚನೆ ನೋಡುವಾಗ ಅವುಗಳಿಗೆ ಕೋವಿಡ್-19 ಪ್ರೋಟೀನ್ ಅನ್ನು ತಡೆಹಿಡಿಯುವ ಸಾಮರ್ಥ್ಯವಿದೆ ಎಂಬುದು ತಿಳಿಯಿತು ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: ಹೀಗೂ ಆಗುವುದುಂಟು: ವಾಯುವಿಹಾರಕ್ಕೆ ಹೋದಾಗ ಲಕ್ಷಾಧಿಪತಿ, ಕಸದೊಂದಿಗೆ ಬಂದಾಗ ಕೋಟ್ಯಧಿಪತಿ..!
ಸದ್ಯ ಪ್ರಾಥಮಿಕ ಸಂಶೋಧನೆಯಲ್ಲಿದ್ದೇವೆ. ಈ ಬಗ್ಗೆ ತುಂಬಾ ಲ್ಯಾಬ್ ವರ್ಕ್ ಮಾಡಬೇಕಿದೆ. ಮುಂದಿನ ಹಂತದಲ್ಲಿ ಕೋವಿಡ್ ಇರುವ ಸೆಲ್ ಲೈನ್ ಉಪಯೋಗಿಸಿ, ಅದಕ್ಕೆ ಟೈಪ್-2 ಡಯಾಬಿಟೀಸ್ ನೀಡುವ ಮದ್ದನ್ನು ಬಳಸಿ ಇದಕ್ಕೆ ಕರೊನಾ ತಡೆಯುವ ಶಕ್ತಿ ಇದೆಯೇ ಎಂಬುದನ್ನು ನೋಡುತ್ತೇವೆ. ಬಳಿಕ ಔಷಧವನ್ನು ಪ್ರಾಣಿಗಳ ಮೇಲೆ ಪ್ರಯೋಗ ಮಾಡಿ ಖಚಿತಪಡಿಸಿಕೊಂಡು ಮಾನವನ ಉಪಯೋಗಕ್ಕೆ ನೀಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್)