ನವದೆಹಲಿ : ಹದಿನೆಂಟು ವರ್ಷದ ಒಳಗಿನ ಮಕ್ಕಳ ಮೇಲೆ ನಡೆಯುತ್ತಿರುವ ಕರೊನಾ ಲಸಿಕೆಯ ಕ್ಲಿನಿಕಲ್ ಟ್ರಯಲ್ಗಳು ಇನ್ನೇನು ಮುಗಿಯುವ ಹಂತದಲ್ಲಿದೆ. ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ಸರ್ಕಾರವು ನೀತಿ ರಚಿಸಲಿದ್ದು, ತಜ್ಞರು ಅನುಮತಿ ನೀಡಿದಾಗ ಮಕ್ಕಳಿಗೆ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.
ದೆಹಲಿ ಹೈಕೋರ್ಟ್ನಲ್ಲಿ ಅಪ್ರಾಪ್ತ ವಯಸ್ಕನ ಪರವಾಗಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆಯ ವೇಳೆ, ಇಂದು(ಜುಲೈ 16) ಸರ್ಕಾರದ ಪರ ಈ ಹೇಳಿಕೆ ನೀಡಲಾಯಿತು ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಕರೊನಾ ಮೂರನೇ ಅಲೆಯಲ್ಲಿ ಮಕ್ಕಳಿಗೆ ಅಪಾಯವಿರುವ ಭಯದ ಹಿನ್ನೆಲೆಯಲ್ಲಿ 12 ರಿಂದ 17 ವರ್ಷದ ವಯೋಮಾನದವರಿಗೆ ತಕ್ಷಣ ಕರೊನಾ ಲಸಿಕಾಕರಣಕ್ಕೆ ಆದೇಶಿಸಬೇಕೆಂದು ಅರ್ಜಿದಾರರು ಕೋರಿದ್ದಾರೆ.
ಇದನ್ನೂ ಓದಿ: ಕುಂಟುತ್ತಿದೆ ಲಸಿಕಾ ಅಭಿಯಾನ ; ವಿದ್ಯಾರ್ಥಿಗಳಿಗೆ ಆದ್ಯತೆ ಮೇಲೆ ಸಿಗದ ವ್ಯಾಕ್ಸಿನ್
ಮುಖ್ಯ ನ್ಯಾಯಮೂರ್ತಿ ಡಿ.ಎನ್.ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರ ವಿಭಾಗೀಯ ಪೀಠವು, “ಟ್ರಯಲ್ಸ್ ನಡೆಯಲಿ ಬಿಡಿ. ಏಕೆಂದರೆ ಟ್ರಯಲ್ಗಳಿಲ್ಲದೆ ಮಕ್ಕಳಿಗೆ ಲಸಿಕೆಗಳನ್ನು ನೀಡುವುದು ದುರಂತವಾದೀತು” ಎಂದು ಅಭಿಪ್ರಾಯಪಟ್ಟಿತು. “ಟ್ರಯಲ್ಸ್ ಮುಗಿದ ಕೂಡಲೇ, ತ್ವರಿತವಾಗಿ ಮಕ್ಕಳಿಗೆ (ಲಸಿಕೆ) ನೀಡಿ. ಇಡೀ ದೇಶ ಕಾಯುತ್ತಿದೆ” ಎಂದು ಸರ್ಕಾರಕ್ಕೆ ಹೇಳಿತು. (ಏಜೆನ್ಸೀಸ್)
ಜೆಇಇ 4ನೇ ಹಂತದ ಪರೀಕ್ಷೆ ಮುಂದೂಡಿಕೆ; ಜುಲೈ 20 ರವರೆಗೆ ನೋಂದಣಿ ಅವಕಾಶ
ಚಿತ್ರ ನಿರ್ಮಾಪಕನ ವಿರುದ್ಧ ರೇಪ್ ಕೇಸ್; ಕೆಲಸ ನೀಡುವುದಾಗಿ ಹೇಳಿ ವಂಚಿಸಿದ ಆರೋಪ